ಬೆಂಗಳೂರು: ಜೈನ ಅಧ್ಯಯನ ಕೇಂದ್ರವು ಜೂನ್ 9 ಮತ್ತು 10ರಂದು ಅಂತರರಾಷ್ಟ್ರೀಯ ಕಮ್ಮಟ ನಡೆಸಲು ನಿರ್ಧರಿಸಿದೆ.
‘23ನೇ ವರ್ಷದ ಈ ಕಮ್ಮಟದಲ್ಲಿ ಜೈನ ಜ್ಞಾನ ಪದ್ಧತಿಗಳ ಕುರಿತು ಚರ್ಚಿಸಲಾಗುತ್ತದೆ. ಬೆಂಗಳೂರಿನ ಕೃಷ್ಣರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪ್ರತಿಭಾ ಪಾರ್ಶ್ವನಾಥ್ ಹಾಗೂ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ವಿಷಯ ಮಂಡಿಸಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.