ಸ್ವಚ್ಛ ಸರ್ವೇಕ್ಷಣ್ ಸರ್ವೆಗೆ ನಡೆದಿರುವ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್, ‘ಈ ಹಿಂದೆ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಪಾಲನೆ ಮಾಡುವ ನಿಯಮಗಳ ಬಗ್ಗೆ ಸಮರ್ಪಕ ಮಾಹಿತಿ ಇರಲಿಲ್ಲ. ಆ ಕಾರಣಕ್ಕಾಗಿ ಪರಿಣಿತ ತಂಡವನ್ನು ನಿಯೋಜನೆ ಮಾಡಿಕೊಂಡು ಸ್ವಚ್ಛ ಸರ್ವೇಕ್ಷಣ್ ನಲ್ಲಿ ಬೆಂಗಳೂರಿಗೆ ಉತ್ತಮ ಅಂಕ ಪಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರನ್ನು ಈಗಾಗಲೇ ಬಯಲು ಶೌಚಾಲಯಮುಕ್ತ (ಒಡಿಎಫ್) ಎಂದು ಘೋಷಣೆ ಮಾಡಲಾಗಿದೆ. ಒಡಿಎಫ್ ಸ್ಥಾನಮಾನಕ್ಕೆ ಈ ಬಾರಿ 500 ಅಂಕ ನಿಗದಿಪಡಿಸಲಾಗಿದೆ. ಒಡಿಎಫ್ ಪ್ಲಸ್ ಪ್ಲಸ್ ಸ್ಥಾನಮಾನ ಗಳಿಸಲು ಶ್ರಮ ವಹಿಸಲಾಗುತ್ತಿದೆ’ ಎಂದರು.