<p><strong>ಬೆಂಗಳೂರು:</strong> ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಮಳಿಗೆಯ ಗೋಡೆ ಕೊರೆದು ಚಿನ್ನಾಭರಣ ಕದ್ದೊಯ್ದಿದ್ದ ಆರೋಪದಡಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಜಾರ್ಖಂಡ್ನ ಆದಿಲ್ ಮನರುಲ್ಲಾ ಹುಕ್, ಸುಲೇಮಾನ್ ಶೇಖ್, ಅಜೀಜುರ್ ರೆಹಮಾನ್, ರಮೇಶ್ ಬಿಷ್ಠ, ಸದ್ದಾಂ, ಮನರುಲ್ ಶೇಖ್, ಸಲೀಂ ಶೇಖ್, ಸೈಫುದ್ದೀನ್ ಶೇಖ್, ಅನಾರುಲ್ಲಾ ಶೇಖ್ ಹಾಗೂ ಮಹಿಳೆ ಶೈನೂರ್ ಬೇಬಿ ಬಂಧಿತರು. ಇವರಿಂದ ₹55 ಲಕ್ಷ ಮೌಲ್ಯದ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಆರೋಪಿಗಳು, ಪ್ರಿಯದರ್ಶಿನಿ ಮಳಿಗೆ ಕಟ್ಟಡಕ್ಕೆ ಹೊಂದಿಕೊಂಡಿರುವ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಳಿಗೆ ಮೇಲೆ ಕಣ್ಣಿಟ್ಟು, ಅಲ್ಲಿ ನಡೆಯುವ ವ್ಯವಹಾರ ಹಾಗೂ ಕೆಲಸಗಾರರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು.’</p>.<p>‘ನಿತ್ಯವೂ ವ್ಯಾಪಾರ ಮುಗಿದ ಬಳಿಕ ಮಾಲೀಕರು, ಲಾಕರ್ನಲ್ಲಿ ಚಿನ್ನಾಭರಣ ಇರಿಸಿ ಮಳಿಗೆಗೆ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ತಿಳಿದುಕೊಂಡಿದ್ದ ಆರೋಪಿಗಳು, ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದೂ ತಿಳಿಸಿದರು.</p>.<p class="Subhead"><strong>ಗೋಡೆ ಕೊರೆದು ಕೃತ್ಯ: </strong>‘ಏಪ್ರಿಲ್ 17ರಂದು ತಡರಾತ್ರಿ ಗೋಡೆ ಕೊರೆದು ಮಳಿಗೆಯೊಳಗೆ ಆರೋಪಿಗಳು ನುಗ್ಗಿದ್ದರು. ಗ್ಯಾಸ್ ಕಟರ್ನಿಂದ ಲಾಕರ್ ಕತ್ತರಿಸಿ, ₹ 2.50 ಕೋಟಿ ಮೌಲ್ಯದ 5 ಕೆ.ಜಿ ಚಿನ್ನಾಭರಣ ಕದ್ದೊಯ್ದಿದ್ದರು. ಈ ಬಗ್ಗೆ ಮಾಲೀಕರು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಕದ್ದ ಆಭರಣಗಳನ್ನು ಮಾರಿರುವ ಆರೋಪಿಗಳು, ಬಂದ ಹಣವನ್ನು ಹಂಚಿಕೊಂಡಿದ್ದಾರೆ. ಸದ್ಯ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಮಾತ್ರ ಸಿಕ್ಕಿದ್ದು, ಉಳಿದ ಆಭರಣ ಪತ್ತೆ ಮಾಡಬೇಕಿದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಮಳಿಗೆಯ ಗೋಡೆ ಕೊರೆದು ಚಿನ್ನಾಭರಣ ಕದ್ದೊಯ್ದಿದ್ದ ಆರೋಪದಡಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಜಾರ್ಖಂಡ್ನ ಆದಿಲ್ ಮನರುಲ್ಲಾ ಹುಕ್, ಸುಲೇಮಾನ್ ಶೇಖ್, ಅಜೀಜುರ್ ರೆಹಮಾನ್, ರಮೇಶ್ ಬಿಷ್ಠ, ಸದ್ದಾಂ, ಮನರುಲ್ ಶೇಖ್, ಸಲೀಂ ಶೇಖ್, ಸೈಫುದ್ದೀನ್ ಶೇಖ್, ಅನಾರುಲ್ಲಾ ಶೇಖ್ ಹಾಗೂ ಮಹಿಳೆ ಶೈನೂರ್ ಬೇಬಿ ಬಂಧಿತರು. ಇವರಿಂದ ₹55 ಲಕ್ಷ ಮೌಲ್ಯದ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಆರೋಪಿಗಳು, ಪ್ರಿಯದರ್ಶಿನಿ ಮಳಿಗೆ ಕಟ್ಟಡಕ್ಕೆ ಹೊಂದಿಕೊಂಡಿರುವ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಳಿಗೆ ಮೇಲೆ ಕಣ್ಣಿಟ್ಟು, ಅಲ್ಲಿ ನಡೆಯುವ ವ್ಯವಹಾರ ಹಾಗೂ ಕೆಲಸಗಾರರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು.’</p>.<p>‘ನಿತ್ಯವೂ ವ್ಯಾಪಾರ ಮುಗಿದ ಬಳಿಕ ಮಾಲೀಕರು, ಲಾಕರ್ನಲ್ಲಿ ಚಿನ್ನಾಭರಣ ಇರಿಸಿ ಮಳಿಗೆಗೆ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಿದ್ದರು. ಈ ಬಗ್ಗೆ ತಿಳಿದುಕೊಂಡಿದ್ದ ಆರೋಪಿಗಳು, ಕಳ್ಳತನ ಮಾಡಲು ಸಂಚು ರೂಪಿಸಿದ್ದರು’ ಎಂದೂ ತಿಳಿಸಿದರು.</p>.<p class="Subhead"><strong>ಗೋಡೆ ಕೊರೆದು ಕೃತ್ಯ: </strong>‘ಏಪ್ರಿಲ್ 17ರಂದು ತಡರಾತ್ರಿ ಗೋಡೆ ಕೊರೆದು ಮಳಿಗೆಯೊಳಗೆ ಆರೋಪಿಗಳು ನುಗ್ಗಿದ್ದರು. ಗ್ಯಾಸ್ ಕಟರ್ನಿಂದ ಲಾಕರ್ ಕತ್ತರಿಸಿ, ₹ 2.50 ಕೋಟಿ ಮೌಲ್ಯದ 5 ಕೆ.ಜಿ ಚಿನ್ನಾಭರಣ ಕದ್ದೊಯ್ದಿದ್ದರು. ಈ ಬಗ್ಗೆ ಮಾಲೀಕರು ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಕದ್ದ ಆಭರಣಗಳನ್ನು ಮಾರಿರುವ ಆರೋಪಿಗಳು, ಬಂದ ಹಣವನ್ನು ಹಂಚಿಕೊಂಡಿದ್ದಾರೆ. ಸದ್ಯ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಮಾತ್ರ ಸಿಕ್ಕಿದ್ದು, ಉಳಿದ ಆಭರಣ ಪತ್ತೆ ಮಾಡಬೇಕಿದೆ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>