ಕರ್ನಾಟಕ ಲೋಕಸೇವಾ ಆಯೋಗವು ಈ ಹುದ್ದೆಗಳಿಗೆ ಪರೀಕ್ಷೆ ನಡೆಸಿ, ವರ್ಷದ ಹಿಂದೆಯೇ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಪೌರಾಡಳಿಯ ಇಲಾಖೆಯ ಮಹಾನಗರ ಪಾಲಿಕೆಯ ಕಿರಿಯ ಎಂಜಿನಿಯರ್ ಹುದ್ದೆಯ ಆಯ್ಕೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದ ಆಯೋಗವು ಪೊಲೀಸ್ ಪರಿಶೀಲನೆ, ಅಂಕಪಟ್ಟಿ ದೃಢೀಕರಣ, ಸಿಂಧುತ್ವ ಮುಗಿಸಿಯೂ ಆಗಿದೆ. ಆದರೂ ಹಣಕಾಸು ಇಲಾಖೆ ಅನುಮೋದನೆ ದೊರೆತಿಲ್ಲ ಎಂದು ಆಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.