ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಮನು ಬಳಿಗಾರ್ ಮಾತನಾಡಿ, ‘ಹಂಪನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸಿದ್ದಾರೆ. ನಾಗರಾಜಯ್ಯ ಅವರು ಜ್ಞಾನ ಭಂಡಾರವಿದ್ದಂತೆ. ಹಳೆಗನ್ನಡದಲ್ಲಿ ಸೊಗಸಾಗಿ ಭಾಷಣ ಮಾಡುವಷ್ಟು ಸಾಮರ್ಥ್ಯ ಅವರಿಗಿದೆ. ಪಂಪ, ರನ್ನ ಅವರು ರಚಿಸಿದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ನಡೆಸಿದ್ದಾರೆ. ‘ಹಂಪನಾ’ ಅವರು ಕುವೆಂಪು ಅಧ್ಯಯನ ಸಂಸ್ಥೆಗೆ ಅಧ್ಯಕ್ಷರಾದ ಮೇಲೆ ಆ ಸಂಸ್ಥೆಗೆ ಮರುಜನ್ಮ ಸಿಕ್ಕಿತು’ ಎಂದು ಹೇಳಿದರು.