‘ನೀಲಾಂಜಿತ್ ಅವರು ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆ ಬಳಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ವೇಳೆ, 6 ವರ್ಷದ ಮಗುವೊಂದು ವಾಹನಕ್ಕೆ ಅಡ್ಡ ಬಂದಿತ್ತು. ವಾಹನ ನಿಲ್ಲಿಸಿದ್ದ ನೀಲಾಂಜಿತ್, ‘ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲವೇ?’ ಎಂದು ಸ್ಥಳದಲ್ಲಿದ್ದ ಪೋಷಕರಿಗೆ ಹಿಂದಿಯಲ್ಲಿ ಹೇಳಿದ್ದರು. ಅವರ ಜೊತೆಗೆ ಜಗಳ ತೆಗೆದಿದ್ದ ಆರೋಪಿತ ಸ್ಥಳೀಯ ಮಹಿಳೆಯರು, ‘ಕನ್ನಡ ಬರುವುದಿಲ್ಲವೇ? ಇದು ಕರ್ನಾಟಕ. ಕನ್ನಡ ಮಾತಾಡು’ ಎಂದಿದ್ದರು. ಅಷ್ಟಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು. ಇದೇ ಸಂದರ್ಭದಲ್ಲೇ ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿ ದೂರುದಾರರು ಆರೋಪಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಬೇಕಿದೆ’ ಎಂದು ತಿಳಿಸಿವೆ.