<p><strong>ಯಲಹಂಕ:</strong> ವೇದಿಕೆಯ ಹಿಂಭಾಗದ ಬೃಹತ್ ಪರದೆಯಲ್ಲಿ ಜನಪದ ಪ್ರಾಕಾರಗಳ ಕಲೆಗಳ ಅನಾವರಣ, ಎಲ್ಲೆಲ್ಲೂ ರಾರಾಜಿಸುತ್ತಿದ್ದ ಕನ್ನಡದ ಧ್ವಜ, ತಳಿರುತೋರಣ, ಚಪ್ಪರ, ರಂಗೋಲಿ, ಹಳದಿ-ಕೆಂಪು ಕಾದಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಆವರಣ, ವಿಶೇಷ ಉಡುಪುಗಳಿಂದ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು, ಹಾಡು, ನೃತ್ಯದ ಮೂಲಕ ಸಂಭ್ರಮಿಸಿದ ಯುವ ಸಮೂಹ.. ಕಾಲೇಜಿನ ತುಂಬೆಲ್ಲಾ ಕನ್ನಡಮಯ ವಾತಾವರಣ.</p>.<p>ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನ ಪ್ರತಿಭಾನ ಕನ್ನಡಸಂಘದ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ʼಕನ್ನಡ ಕಲಾಮೇಳ-2025ʼ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರನಿರ್ಮಾಪಕ ಸಾ.ರಾ.ಗೋವಿಂದು, ಕಾಲೇಜಿನಲ್ಲಿ ಕನ್ನಡಮಯ ವಾತಾವರಣ ನೋಡಿ ತುಂಬಾ ಸಂತಸವಾಯಿತು. ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸುವುದರ ಜೊತೆಗೆ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನಾಂಗದ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಕೆ.ಷರೀಫಾ ಮಾತನಾಡಿ, ಕನ್ನಡ ಎಂದರೆ ಕೇವಲ ಭಾಷೆಯಲ್ಲ; ಅದರಲ್ಲಿ ನಮ್ಮ ಬದುಕೂ ಇದೆ. ಅನ್ನದ ಮೂಲದ ಭಾಷೆಯಾಗಿ ಕನ್ನಡವನ್ನು ಅಳವಡಿಸಿಕೊಂಡಾಗ ಮಾತ್ರ ಭಾಷೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.</p>.<p>ವಿದ್ಯಾರ್ಥಿಗಳಿಂದ ಭರತನಾಟ್ಯ, ಕಿರುನಾಟಕ, ಹಾಡು, ಕುಣಿತ, ಜನಪದ ನೃತ್ಯ, ವೀಣಾವಾದನ, ಫ್ಯಾಶನ್ ಶೋ, ಕಲಾವಿದರಿಂದ ಜಾದೂಗಾರಿಕೆ, ಡೊಳ್ಳುಕುಣಿತ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.</p>.<p>ಸಾಹಿತಿ ಟಿ.ಯಲ್ಲಪ್ಪ, ನಟಿ ಕಾರುಣ್ಯ ರಾಮ್, ಪ್ರೆಸಿಡೆನ್ಸಿ ಶಿಕ್ಷಣಸಂಸ್ಥೆಯ ಉಪಾಧ್ಯಕ್ಷ ಸುಹೇಲ್ ಅಹ್ಮದ್, ಪ್ರಾಂಶುಪಾಲರಾದ ಡಾ.ಪ್ರದೀಪ್ಕುಮಾರ್, ಶೈಕ್ಷಣಿಕ ಸಂಯೋಜಕ ಗೌಹರ್, ಎಂಬಿಎ ವಿಭಾಗದ ಡೀನ್ ಚಂದನ್ ಚಾವಡಿ, ಕನ್ನಡ ಪ್ರಾಧ್ಯಾಪಕ ಪ್ರಭುದೇವ.ಸಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ:</strong> ವೇದಿಕೆಯ ಹಿಂಭಾಗದ ಬೃಹತ್ ಪರದೆಯಲ್ಲಿ ಜನಪದ ಪ್ರಾಕಾರಗಳ ಕಲೆಗಳ ಅನಾವರಣ, ಎಲ್ಲೆಲ್ಲೂ ರಾರಾಜಿಸುತ್ತಿದ್ದ ಕನ್ನಡದ ಧ್ವಜ, ತಳಿರುತೋರಣ, ಚಪ್ಪರ, ರಂಗೋಲಿ, ಹಳದಿ-ಕೆಂಪು ಕಾದಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಆವರಣ, ವಿಶೇಷ ಉಡುಪುಗಳಿಂದ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು, ಹಾಡು, ನೃತ್ಯದ ಮೂಲಕ ಸಂಭ್ರಮಿಸಿದ ಯುವ ಸಮೂಹ.. ಕಾಲೇಜಿನ ತುಂಬೆಲ್ಲಾ ಕನ್ನಡಮಯ ವಾತಾವರಣ.</p>.<p>ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನ ಪ್ರತಿಭಾನ ಕನ್ನಡಸಂಘದ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ʼಕನ್ನಡ ಕಲಾಮೇಳ-2025ʼ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರನಿರ್ಮಾಪಕ ಸಾ.ರಾ.ಗೋವಿಂದು, ಕಾಲೇಜಿನಲ್ಲಿ ಕನ್ನಡಮಯ ವಾತಾವರಣ ನೋಡಿ ತುಂಬಾ ಸಂತಸವಾಯಿತು. ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸುವುದರ ಜೊತೆಗೆ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನಾಂಗದ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.</p>.<p>ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಕೆ.ಷರೀಫಾ ಮಾತನಾಡಿ, ಕನ್ನಡ ಎಂದರೆ ಕೇವಲ ಭಾಷೆಯಲ್ಲ; ಅದರಲ್ಲಿ ನಮ್ಮ ಬದುಕೂ ಇದೆ. ಅನ್ನದ ಮೂಲದ ಭಾಷೆಯಾಗಿ ಕನ್ನಡವನ್ನು ಅಳವಡಿಸಿಕೊಂಡಾಗ ಮಾತ್ರ ಭಾಷೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.</p>.<p>ವಿದ್ಯಾರ್ಥಿಗಳಿಂದ ಭರತನಾಟ್ಯ, ಕಿರುನಾಟಕ, ಹಾಡು, ಕುಣಿತ, ಜನಪದ ನೃತ್ಯ, ವೀಣಾವಾದನ, ಫ್ಯಾಶನ್ ಶೋ, ಕಲಾವಿದರಿಂದ ಜಾದೂಗಾರಿಕೆ, ಡೊಳ್ಳುಕುಣಿತ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.</p>.<p>ಸಾಹಿತಿ ಟಿ.ಯಲ್ಲಪ್ಪ, ನಟಿ ಕಾರುಣ್ಯ ರಾಮ್, ಪ್ರೆಸಿಡೆನ್ಸಿ ಶಿಕ್ಷಣಸಂಸ್ಥೆಯ ಉಪಾಧ್ಯಕ್ಷ ಸುಹೇಲ್ ಅಹ್ಮದ್, ಪ್ರಾಂಶುಪಾಲರಾದ ಡಾ.ಪ್ರದೀಪ್ಕುಮಾರ್, ಶೈಕ್ಷಣಿಕ ಸಂಯೋಜಕ ಗೌಹರ್, ಎಂಬಿಎ ವಿಭಾಗದ ಡೀನ್ ಚಂದನ್ ಚಾವಡಿ, ಕನ್ನಡ ಪ್ರಾಧ್ಯಾಪಕ ಪ್ರಭುದೇವ.ಸಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>