<p><strong>ಬೆಂಗಳೂರು</strong>: ರಾಜ್ಯದಲ್ಲಿ ಹುಲಿ ಯೋಜನೆಗಳು, ಮೃಗಾಲಯ ಸಹಿತ ಕೆಲವೇ ವಿಭಾಗಗಳಿಗೆ ಸೀಮಿತವಾಗಿದ್ದ ಕಾರ್ಪೊರೇಟ್ ಸಹಭಾಗಿತ್ವವು ಇನ್ನು ಮುಂದೆ ಅರಣ್ಯ ಇಲಾಖೆಯ ಎಲ್ಲಾ ವಿಭಾಗಗಳಿಗೂ ವಿಸ್ತರಣೆಯಾಗಲಿದೆ. ಇದಕ್ಕಾಗಿ 'ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ’ ಆರಂಭಿಸಲಾಗಿದೆ.</p>.<p>ವನ್ಯಜೀವಿಗಳ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ ತಡೆ, ಜಲ ಸಂರಕ್ಷಣೆ, ಮರಗಳ ರಕ್ಷಣೆ, ಪರಿಸರ ಸಮತೋಲನ, ಅರಣ್ಯ ಸಂಶೋಧನಾ ಕ್ಷೇತ್ರಗಳ ಕಾರ್ಯಗಳಿಗೆ ಉದ್ಯಮಿಗಳು ಹಾಗೂ ಆಸಕ್ತರು ಆರ್ಥಿಕ ನೆರವು ನೀಡಬಹುದು. ಯೋಜನೆಗಳ ಅನುಷ್ಠಾನ ಹೊಣೆಯನ್ನೂ ಪಡೆಯಬಹುದು.</p>.<p>ಬೆಂಗಳೂರಿನಲ್ಲಿ ಮಂಗಳವಾರ ನಡೆದ ಉದ್ಯಮ ವಲಯದ ಪ್ರತಿನಿಧಿಗಳು, ಅರಣ್ಯ, ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಥಮ ಸಮ್ಮೇಳನದಲ್ಲಿ ಪ್ರತಿಷ್ಠಾನದ ರೂಪುರೇಷೆಗಳು, ಉದ್ಯಮಿಗಳ ಸಹಭಾಗಿತ್ವದ ಸ್ವರೂಪ, ಹೂಡಿಕೆಯ ಕುರಿತು ವಿಸ್ತೃತವಾಗಿ ಚರ್ಚೆಗಳು ನಡೆದವು.</p>.<p>ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯೇ ಸದ್ಯ ಫೌಂಡೇಷನ್ ಆರಂಭಿಸಿ ಹಣಕಾಸು ಬಳಕೆ ಮಾಡುತ್ತಿದೆ. ಆದರೆ ಇತರೆ ವಿಭಾಗಗಳು ಇಲಾಖೆಯ ವಾರ್ಷಿಕ ಅನುದಾನವನ್ನೇ ನಂಬಿಕೊಳ್ಳಬೇಕಾಗಿತ್ತು. ಈಗ ವನ್ಯಜೀವಿ ಜತೆಗೆ ಹವಾಮಾನ ವೈಪರೀತ್ಯದ ಅಂಶದೊಂದಿಗೆ ಫೌಂಡೇಷನ್ ಆರಂಭಿಸಿ ಆರ್ಥಿಕ ನೆರವು ಪಡೆಯಲಾಗುತ್ತದೆ.</p>.<p>ಸಮ್ಮೇಳನಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಹೂಡಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ, ಲೇಖಕಿ ರೋಹಿಣಿ ನಿಲೇಕಣಿ, ಗಾಯಕ ರಿಕಿ ಕೇಜ್, ಉದ್ಯಮಿ ಪ್ರಶಾಂತ್ ಪ್ರಕಾಶ್ ಭಾಗವಹಿಸಿದ್ದರು.</p>.<p>ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಮುಖ್ಯ ಸಮಿತಿ ರಚಿಸಿದ್ದು, ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಲಿದೆ. ಅಧಿಕಾರಿಗಳ ನೇತೃತ್ವದ ಕಾರ್ಯನಿರ್ವಾಹಕ ಸಮಿತಿ ಯೋಜನೆ ಅಂತಿಮಗೊಳಿಸಲಿದೆ. ಸಿಎಸ್ಆರ್ ಘಟಕವು ಪ್ರಕ್ರಿಯೆ ನಡೆಸಲಿದೆ ಎಂದು ಅರಣ್ಯ ಪಡೆಗಳ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ವಿವರಿಸಿದರು.</p>.<p>ಅರಣ್ಯ ಇಲಾಖೆಯ ಯೋಜನೆ, ಕಟ್ಟಡ ನಿರ್ಮಾಣ, ಸಿಬ್ಬಂದಿಗೆ ಸೌಲಭ್ಯ, ಸಂಶೋಧನೆ ಸಹಿತ ನಾನಾ ಚಟುವಟಿಕೆಗಳಿಗೆ ಎಷ್ಟು ನೆರವಾದರೂ ನೆರವು ನೀಡಬಹುದು ಎಂದು ಫೌಂಡೇಷನ್ ಮುಖ್ಯಸ್ಥರಾಗಿರುವ ಪಿಸಿಸಿಎಫ್(ಇಡಬ್ಲುಪಿಆರ್ಟಿ) ಬಿ.ಪಿ.ರವಿ ಹೇಳಿದರು.</p>.<p>ವನ್ಯಜೀವಿ ವಿಭಾಗಗಳಲ್ಲಿನ ಸಹಭಾಗಿತ್ವ ಕುರಿತು ಪಿಸಿಸಿಎಫ್( ವನ್ಯಜೀವಿ) ಪ್ರಭಾತ್ ಚಂದ್ರ ರೇ, ಹವಾಮಾನ ವೈಪರೀತ್ಯ ತಡೆ ಕಾರ್ಯಕ್ರಮಗಳ ಕುರಿತು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಜಯಮೋಹನ್ರಾಜ್ ವಿವರ ನೀಡಿದರು.</p>.<div><blockquote>ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ ಪರಿಣಾಮಗಳನ್ನು ಎದುರಿಸಲು ಹಸಿರು ಹೊದಿಕೆಯ ಹೆಚ್ಚಳವೊಂದೇ ಪರಿಹಾರ. ಉದ್ಯಮ ವಲಯವೂ ಇಲಾಖೆ ಜತೆ ಕೈ ಜೋಡಿಸಬೇಕು </blockquote><span class="attribution">-ಈಶ್ವರ ಖಂಡ್ರೆ ಅರಣ್ಯ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದಲ್ಲಿ ಹುಲಿ ಯೋಜನೆಗಳು, ಮೃಗಾಲಯ ಸಹಿತ ಕೆಲವೇ ವಿಭಾಗಗಳಿಗೆ ಸೀಮಿತವಾಗಿದ್ದ ಕಾರ್ಪೊರೇಟ್ ಸಹಭಾಗಿತ್ವವು ಇನ್ನು ಮುಂದೆ ಅರಣ್ಯ ಇಲಾಖೆಯ ಎಲ್ಲಾ ವಿಭಾಗಗಳಿಗೂ ವಿಸ್ತರಣೆಯಾಗಲಿದೆ. ಇದಕ್ಕಾಗಿ 'ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ’ ಆರಂಭಿಸಲಾಗಿದೆ.</p>.<p>ವನ್ಯಜೀವಿಗಳ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ ತಡೆ, ಜಲ ಸಂರಕ್ಷಣೆ, ಮರಗಳ ರಕ್ಷಣೆ, ಪರಿಸರ ಸಮತೋಲನ, ಅರಣ್ಯ ಸಂಶೋಧನಾ ಕ್ಷೇತ್ರಗಳ ಕಾರ್ಯಗಳಿಗೆ ಉದ್ಯಮಿಗಳು ಹಾಗೂ ಆಸಕ್ತರು ಆರ್ಥಿಕ ನೆರವು ನೀಡಬಹುದು. ಯೋಜನೆಗಳ ಅನುಷ್ಠಾನ ಹೊಣೆಯನ್ನೂ ಪಡೆಯಬಹುದು.</p>.<p>ಬೆಂಗಳೂರಿನಲ್ಲಿ ಮಂಗಳವಾರ ನಡೆದ ಉದ್ಯಮ ವಲಯದ ಪ್ರತಿನಿಧಿಗಳು, ಅರಣ್ಯ, ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಥಮ ಸಮ್ಮೇಳನದಲ್ಲಿ ಪ್ರತಿಷ್ಠಾನದ ರೂಪುರೇಷೆಗಳು, ಉದ್ಯಮಿಗಳ ಸಹಭಾಗಿತ್ವದ ಸ್ವರೂಪ, ಹೂಡಿಕೆಯ ಕುರಿತು ವಿಸ್ತೃತವಾಗಿ ಚರ್ಚೆಗಳು ನಡೆದವು.</p>.<p>ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯೇ ಸದ್ಯ ಫೌಂಡೇಷನ್ ಆರಂಭಿಸಿ ಹಣಕಾಸು ಬಳಕೆ ಮಾಡುತ್ತಿದೆ. ಆದರೆ ಇತರೆ ವಿಭಾಗಗಳು ಇಲಾಖೆಯ ವಾರ್ಷಿಕ ಅನುದಾನವನ್ನೇ ನಂಬಿಕೊಳ್ಳಬೇಕಾಗಿತ್ತು. ಈಗ ವನ್ಯಜೀವಿ ಜತೆಗೆ ಹವಾಮಾನ ವೈಪರೀತ್ಯದ ಅಂಶದೊಂದಿಗೆ ಫೌಂಡೇಷನ್ ಆರಂಭಿಸಿ ಆರ್ಥಿಕ ನೆರವು ಪಡೆಯಲಾಗುತ್ತದೆ.</p>.<p>ಸಮ್ಮೇಳನಕ್ಕೆ ಚಾಲನೆ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಹೂಡಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ, ಲೇಖಕಿ ರೋಹಿಣಿ ನಿಲೇಕಣಿ, ಗಾಯಕ ರಿಕಿ ಕೇಜ್, ಉದ್ಯಮಿ ಪ್ರಶಾಂತ್ ಪ್ರಕಾಶ್ ಭಾಗವಹಿಸಿದ್ದರು.</p>.<p>ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಮುಖ್ಯ ಸಮಿತಿ ರಚಿಸಿದ್ದು, ಯೋಜನೆಗಳಿಗೆ ಸಮಿತಿ ಒಪ್ಪಿಗೆ ನೀಡಲಿದೆ. ಅಧಿಕಾರಿಗಳ ನೇತೃತ್ವದ ಕಾರ್ಯನಿರ್ವಾಹಕ ಸಮಿತಿ ಯೋಜನೆ ಅಂತಿಮಗೊಳಿಸಲಿದೆ. ಸಿಎಸ್ಆರ್ ಘಟಕವು ಪ್ರಕ್ರಿಯೆ ನಡೆಸಲಿದೆ ಎಂದು ಅರಣ್ಯ ಪಡೆಗಳ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ವಿವರಿಸಿದರು.</p>.<p>ಅರಣ್ಯ ಇಲಾಖೆಯ ಯೋಜನೆ, ಕಟ್ಟಡ ನಿರ್ಮಾಣ, ಸಿಬ್ಬಂದಿಗೆ ಸೌಲಭ್ಯ, ಸಂಶೋಧನೆ ಸಹಿತ ನಾನಾ ಚಟುವಟಿಕೆಗಳಿಗೆ ಎಷ್ಟು ನೆರವಾದರೂ ನೆರವು ನೀಡಬಹುದು ಎಂದು ಫೌಂಡೇಷನ್ ಮುಖ್ಯಸ್ಥರಾಗಿರುವ ಪಿಸಿಸಿಎಫ್(ಇಡಬ್ಲುಪಿಆರ್ಟಿ) ಬಿ.ಪಿ.ರವಿ ಹೇಳಿದರು.</p>.<p>ವನ್ಯಜೀವಿ ವಿಭಾಗಗಳಲ್ಲಿನ ಸಹಭಾಗಿತ್ವ ಕುರಿತು ಪಿಸಿಸಿಎಫ್( ವನ್ಯಜೀವಿ) ಪ್ರಭಾತ್ ಚಂದ್ರ ರೇ, ಹವಾಮಾನ ವೈಪರೀತ್ಯ ತಡೆ ಕಾರ್ಯಕ್ರಮಗಳ ಕುರಿತು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿಜಯಮೋಹನ್ರಾಜ್ ವಿವರ ನೀಡಿದರು.</p>.<div><blockquote>ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ ಪರಿಣಾಮಗಳನ್ನು ಎದುರಿಸಲು ಹಸಿರು ಹೊದಿಕೆಯ ಹೆಚ್ಚಳವೊಂದೇ ಪರಿಹಾರ. ಉದ್ಯಮ ವಲಯವೂ ಇಲಾಖೆ ಜತೆ ಕೈ ಜೋಡಿಸಬೇಕು </blockquote><span class="attribution">-ಈಶ್ವರ ಖಂಡ್ರೆ ಅರಣ್ಯ ಸಚಿವ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>