<p><strong>ಬೆಂಗಳೂರು</strong>: ದೊಡ್ಡ ರಾಜ್ಯಗಳ ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಕರ್ನಾಟಕ ಈ ಸಾಲಿನಲ್ಲೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಕೇರಳ ಈ ಬಾರಿಯೂ ಮೊದಲ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.</p>.<p>ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆಗಳನ್ನು ಅಧ್ಯಯನ ಮಾಡುವ ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) ಪ್ರತಿ ವರ್ಷವೂ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.</p>.<p>ಸಾಮಾಜಿಕ ರಕ್ಷಣೆ ಒದಗಿಸುವ ವಿಚಾರದಲ್ಲಿ 2016ರಲ್ಲಿ ಅಗ್ರಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 16ನೇ ಸ್ಥಾನಕ್ಕೆ ಕುಸಿದಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವಲ್ಲಿ ಹಾಗೂ ಪರಿಸರ ಸಂರಕ್ಷಣೆ ವಿಚಾರದಲ್ಲಿ 2016 ಹಾಗೂ 2017ರಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕವು ಈ ಬಾರಿ ಅಗ್ರಸ್ಥಾನಕ್ಕೇರಿದೆ. ಇದು ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಳ್ಳಲು ನೆರವಾಗಿದೆ.</p>.<p>ಹಣಕಾಸು ನಿರ್ವಹಣೆ, ಆರ್ಥಿಕ ಸ್ವಾತಂತ್ರ್ಯ ವಿಚಾರಗಳಲ್ಲೂ ರಾಜ್ಯದ ಆಡಳಿತ ವ್ಯವಸ್ಥೆ ಸುಧಾರಣೆ ಕಂಡಿದೆ. ಮೂಲಸೌಕರ್ಯ ಅಭಿವೃದ್ಧಿ ರಾಜ್ಯವು ನಿರಂತರ ಬೆಳವಣಿಗೆ ಸಾಧಿಸಿದೆ. ವಿದ್ಯುತ್, ಕುಡಿಯುವ ನೀರು, ರಸ್ತೆಗಳ ನಿರ್ವಹಣೆ, ಸಂವಹನ ಹಾಗೂ ವಸತಿ ಕಲ್ಪಿಸಿರುವುದನ್ನು ಮಾನದಂಡವನ್ನಾಗಿಸಿ ಮೂಲಸೌಕರ್ಯ ಅಭಿವೃದ್ಧಿ ಪ್ರಮಾಣವನ್ನು ಅಳೆಯಲಾಗುತ್ತದೆ.</p>.<p>ಆಡಳಿತಕ್ಕೆ ಸಂಬಂಧಿಸಿದ 10 ವಿಚಾರಗಳನ್ನು ಹಾಗೂ 30 ಆದ್ಯತಾ ವಿಷಯಗಳನ್ನು ಆಧರಿಸಿ ಪಿಎಸಿ ಅಧ್ಯಯನ ನಡೆಸುತ್ತದೆ.<br />**<br />2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಜತೆಗೆ ಪರಿಸರದ ಮೇಲಿನ ಹಾನಿಯ ಪ್ರಮಾಣವೂ ಹೆಚ್ಚಲಿದೆ. ಇವುಗಳ ನಡುವೆ ಸಮತೋಲನ ಸಾಧಿಸುವ ಸವಾಲು ನಮ್ಮ ಮುಂದಿದೆ<br /><strong>–ಡಾ.ಕೆ.ಕಸ್ತೂರಿ ರಂಗನ್, ಪಿಎಸಿ ಅಧ್ಯಕ್ಷ</strong><br />**<br />ದತ್ತಾಂಶವನ್ನು ಕಲೆಹಾಕಿದರೆ ಸಾಲದು. ಅದು ಸದ್ಬಳಕೆ ಆಗಬೇಕು. ದತ್ತಾಂಶವನ್ನು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಆಗದಂತೆ ಸಾಮಾಜಿಕ ಒಳಿತಿಗೆ ಬಳಸುವ ಬದ್ಧತೆ ಇಂದಿನ ಅಗತ್ಯ<br /><strong>– ಪ್ರೊ.ಅರುಣ್ ಪೂಜಾರಿ, ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ</strong><br />**<br /><strong>ಮಕ್ಕಳ ಸ್ಥಿತಿಗತಿ: ರಾಜ್ಯಕ್ಕೆ 8ನೇ ಸ್ಥಾನ</strong><br />ಪಿಎಸಿಯು ಈ ಬಾರಿ ‘ಭಾರತದಲ್ಲಿ ಮಕ್ಕಳ ಸ್ಥಿತಿಗತಿ’ ಕುರಿತು ಅಧ್ಯಯನ ನಡೆಸಿದೆ. ಬಾಲ್ಯದ ಬೆಳವಣಿಗೆ, ಶಿಕ್ಷಣ, ಹದಿಹರೆಯ, ಅವರ ರಕ್ಷಣೆ ಹಾಗೂ ಅವರಿಗೆ ಸಂಬಂಧಿಸಿದ ಸಾಂಸ್ಥಿಕ ರಚನೆಗಳು ಮತ್ತು ಆಡಳಿತ ವ್ಯವಸ್ಥೆಯನ್ನು ಆಧರಿಸಿ ಈ ಅಧ್ಯಯನ ಕೈಗೊಳ್ಳಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಎಂಟನೇ ಸ್ಥಾನ ಲಭಿಸಿದ್ದು, ಕೇರಳ ಅಗ್ರಸ್ಥಾನದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದೊಡ್ಡ ರಾಜ್ಯಗಳ ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಕರ್ನಾಟಕ ಈ ಸಾಲಿನಲ್ಲೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಕೇರಳ ಈ ಬಾರಿಯೂ ಮೊದಲ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.</p>.<p>ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶವು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿವಿಧ ರಾಜ್ಯಗಳ ಆಡಳಿತ ವ್ಯವಸ್ಥೆಗಳನ್ನು ಅಧ್ಯಯನ ಮಾಡುವ ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) ಪ್ರತಿ ವರ್ಷವೂ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.</p>.<p>ಸಾಮಾಜಿಕ ರಕ್ಷಣೆ ಒದಗಿಸುವ ವಿಚಾರದಲ್ಲಿ 2016ರಲ್ಲಿ ಅಗ್ರಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 16ನೇ ಸ್ಥಾನಕ್ಕೆ ಕುಸಿದಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವಲ್ಲಿ ಹಾಗೂ ಪರಿಸರ ಸಂರಕ್ಷಣೆ ವಿಚಾರದಲ್ಲಿ 2016 ಹಾಗೂ 2017ರಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕವು ಈ ಬಾರಿ ಅಗ್ರಸ್ಥಾನಕ್ಕೇರಿದೆ. ಇದು ಶ್ರೇಯಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಳ್ಳಲು ನೆರವಾಗಿದೆ.</p>.<p>ಹಣಕಾಸು ನಿರ್ವಹಣೆ, ಆರ್ಥಿಕ ಸ್ವಾತಂತ್ರ್ಯ ವಿಚಾರಗಳಲ್ಲೂ ರಾಜ್ಯದ ಆಡಳಿತ ವ್ಯವಸ್ಥೆ ಸುಧಾರಣೆ ಕಂಡಿದೆ. ಮೂಲಸೌಕರ್ಯ ಅಭಿವೃದ್ಧಿ ರಾಜ್ಯವು ನಿರಂತರ ಬೆಳವಣಿಗೆ ಸಾಧಿಸಿದೆ. ವಿದ್ಯುತ್, ಕುಡಿಯುವ ನೀರು, ರಸ್ತೆಗಳ ನಿರ್ವಹಣೆ, ಸಂವಹನ ಹಾಗೂ ವಸತಿ ಕಲ್ಪಿಸಿರುವುದನ್ನು ಮಾನದಂಡವನ್ನಾಗಿಸಿ ಮೂಲಸೌಕರ್ಯ ಅಭಿವೃದ್ಧಿ ಪ್ರಮಾಣವನ್ನು ಅಳೆಯಲಾಗುತ್ತದೆ.</p>.<p>ಆಡಳಿತಕ್ಕೆ ಸಂಬಂಧಿಸಿದ 10 ವಿಚಾರಗಳನ್ನು ಹಾಗೂ 30 ಆದ್ಯತಾ ವಿಷಯಗಳನ್ನು ಆಧರಿಸಿ ಪಿಎಸಿ ಅಧ್ಯಯನ ನಡೆಸುತ್ತದೆ.<br />**<br />2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಜತೆಗೆ ಪರಿಸರದ ಮೇಲಿನ ಹಾನಿಯ ಪ್ರಮಾಣವೂ ಹೆಚ್ಚಲಿದೆ. ಇವುಗಳ ನಡುವೆ ಸಮತೋಲನ ಸಾಧಿಸುವ ಸವಾಲು ನಮ್ಮ ಮುಂದಿದೆ<br /><strong>–ಡಾ.ಕೆ.ಕಸ್ತೂರಿ ರಂಗನ್, ಪಿಎಸಿ ಅಧ್ಯಕ್ಷ</strong><br />**<br />ದತ್ತಾಂಶವನ್ನು ಕಲೆಹಾಕಿದರೆ ಸಾಲದು. ಅದು ಸದ್ಬಳಕೆ ಆಗಬೇಕು. ದತ್ತಾಂಶವನ್ನು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಆಗದಂತೆ ಸಾಮಾಜಿಕ ಒಳಿತಿಗೆ ಬಳಸುವ ಬದ್ಧತೆ ಇಂದಿನ ಅಗತ್ಯ<br /><strong>– ಪ್ರೊ.ಅರುಣ್ ಪೂಜಾರಿ, ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ</strong><br />**<br /><strong>ಮಕ್ಕಳ ಸ್ಥಿತಿಗತಿ: ರಾಜ್ಯಕ್ಕೆ 8ನೇ ಸ್ಥಾನ</strong><br />ಪಿಎಸಿಯು ಈ ಬಾರಿ ‘ಭಾರತದಲ್ಲಿ ಮಕ್ಕಳ ಸ್ಥಿತಿಗತಿ’ ಕುರಿತು ಅಧ್ಯಯನ ನಡೆಸಿದೆ. ಬಾಲ್ಯದ ಬೆಳವಣಿಗೆ, ಶಿಕ್ಷಣ, ಹದಿಹರೆಯ, ಅವರ ರಕ್ಷಣೆ ಹಾಗೂ ಅವರಿಗೆ ಸಂಬಂಧಿಸಿದ ಸಾಂಸ್ಥಿಕ ರಚನೆಗಳು ಮತ್ತು ಆಡಳಿತ ವ್ಯವಸ್ಥೆಯನ್ನು ಆಧರಿಸಿ ಈ ಅಧ್ಯಯನ ಕೈಗೊಳ್ಳಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಎಂಟನೇ ಸ್ಥಾನ ಲಭಿಸಿದ್ದು, ಕೇರಳ ಅಗ್ರಸ್ಥಾನದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>