<p><strong>ಬೆಂಗಳೂರು:</strong> ನೆರೆಯ ಆಂಧ್ರಪ್ರದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ‘ಕರ್ನಾಟಕ ಪೊಲೀಸ್ ಧ್ವಜ’ ರಾರಾಜಿಸಲಿದೆ. ಆಂಧ್ರದ ವಿಜಯವಾಡದಲ್ಲಿ ನಡೆಯುವ ದಿನಾಚರಣೆಯ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಮೊದಲ ಮಹಿಳಾ ಪಡೆಯ ಸದಸ್ಯೆಯರು ಭಾಗವಹಿಸಲಿದ್ದಾರೆ.</p>.<p>ಜನವರಿ 26ರ ಗಣರಾಜ್ಯೋತ್ಸವ ದಿನದಂದು ಆಯಾ ರಾಜ್ಯಗಳಲ್ಲಿ ಧ್ವಜಾರೋಹಣ ಹಾಗೂ ವಿವಿಧ<br />ರಕ್ಷಣಾ ಪಡೆಗಳ ಪಥಸಂಚಲನಏರ್ಪಡಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ, ರಾಜ್ಯದ ಪೊಲೀಸ್ ಪಡೆಯೊಂದನ್ನು ನೆರೆಯ ರಾಜ್ಯಗಳಿಗೆ ಪಥಸಂಚಲನಕ್ಕಾಗಿ ಕಳುಹಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.</p>.<p>ಈ ಬಾರಿ, ಕೆಎಸ್ಆರ್ಪಿ ಮಹಿಳಾ ಪಡೆಯ 59 ಪೊಲೀಸರ ತಂಡವನ್ನು ಆಂಧ್ರಪ್ರದೇಶಕ್ಕೆ ಜ. 15ಕ್ಕೆ ಕಳುಹಿಸಿಕೊಡಲಾಗಿದೆ. ಆಂಧ್ರದಲ್ಲಿ ಕರ್ನಾಟಕ ಮಹಿಳಾ ಪೊಲೀಸರ ಶಕ್ತಿ ಪ್ರದರ್ಶನವಾಗಲಿದೆ.</p>.<p>ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಕಾರ್ಪೋರೇಷನ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಪಥಸಂಚಲನದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮಹಿಳಾ ಪೊಲೀಸರು ಮೈದಾನದಲ್ಲಿತಾಲೀಮು ಆರಂಭಿಸಿದ್ದಾರೆ.</p>.<p>ಇದೇ ಮೊದಲ ಬಾರಿಗೆ ಹೊರರಾಜ್ಯದ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ಮಹಿಳಾ ಪಡೆ, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ‘ಕರ್ನಾಟಕ ಪೊಲೀಸ್...’ ಎಂಬ ಉದ್ಘೋಷದ ಮೂಲಕ ಧ್ವಜ ಹಿಡಿದು ಹೆಜ್ಜೆ ಹಾಕಲಿರುವ ಈ ಪಡೆಗೆ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ (ಆರ್ಪಿಐ) ಶ್ರೀದೇವಿ ಕಟಕದೊಂಡ ಸಾರಥಿ ಆಗಿದ್ದಾರೆ. ಸಹಾಯಕ ಕಮಾಂಡೆಂಟ್ ನಾಗೇಂದ್ರಸ್ವಾಮಿ ಮೇಲ್ವಿಚಾರಕರಾಗಿ ಪಡೆಯ ಜೊತೆಗಿದ್ದಾರೆ.</p>.<p>ಶಸ್ತ್ರಾಸ್ತ್ರವನ್ನು ಕೈಯಲ್ಲಿ ಹಿಡಿದು ಸಾರಥಿಯ ಆಜ್ಞೆಯಂತೆ ಶಿಸ್ತುಬದ್ಧವಾಗಿ ಹೆಜ್ಜೆ ಇರಿಸಲು ಮಹಿಳಾ ಪೊಲೀಸರು ಸಜ್ಜಾಗುತ್ತಿದ್ದಾರೆ.</p>.<p>‘ಕೆಎಸ್ಆರ್ಪಿಯಲ್ಲಿ ಈ ಹಿಂದೆ ಪುರುಷರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. 2015–16ರಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಯಿತು. ಬೆಳಗಾವಿಯ 2ನೇ ಬೆಟಾಲಿಯನ್ ಹಾಗೂ ಬೆಂಗಳೂರಿನ 4ನೇ ಬೆಟಾಲಿಯನ್ಗಳಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಂಥ ಮಹಿಳೆಯರ ತಂಡವನ್ನೇ ಪಥಸಂಚಲನಕ್ಕಾಗಿ ಈ ಬಾರಿ ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ‘ ಎಂದು ಕೆಎಸ್ಆರ್ಪಿ 4ನೇ ಬೆಟಾಲಿಯನ್ ಕಮಾಂಡೆಂಟ್ ಕೆ.ಎಸ್.ರಘುನಾಥ್ ಹೇಳಿದರು.</p>.<p>‘ಪ್ರತಿ ವರ್ಷವೂ ಪುರುಷರ ತಂಡಗಳು ಹೊರ ರಾಜ್ಯಗಳಿಗೆ ಹೋಗುತ್ತಿದ್ದವು. ಈ ವರ್ಷ ಮಹಿಳಾ ಪಡೆಯನ್ನು ಕಳುಹಿಸಲು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಲೋಕ್ಕುಮಾರ್, ಐಜಿಪಿ ಎಸ್.ರವಿ ಇಚ್ಛಿಸಿದ್ದರು. ಎಲ್ಲರ ಆಸೆಯಂತೆ ಮಹಿಳಾ ಪಡೆ ಆಂಧ್ರಕ್ಕೆ ಹೋಗಿದೆ. ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೂ ಇದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.</p>.<p><strong>‘ಆಂಧ್ರಪ್ರದೇಶದ ಪುರುಷ ಪಡೆ ರಾಜ್ಯಕ್ಕೆ’</strong></p>.<p>ಗಣರಾಜ್ಯೋತ್ಸವ ಆಚರಣೆಯಂದು ಪಥಸಂಚಲನದಲ್ಲಿ ಪಾಲ್ಗೊಳ್ಳಲು ಆಂಧ್ರಪ್ರದೇಶದ ಪೊಲೀಸ್ ಪಡೆ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕದ ಮಹಿಳಾ ಪಡೆಯು ಆಂಧ್ರಕ್ಕೆ ಹೋಗಿರುವುದರಿಂದ, ಅದಕ್ಕೆ ಪ್ರತಿಯಾಗಿ ಅಲ್ಲಿಯ ಪೊಲೀಸರನ್ನು ಇಲ್ಲಿಗೆ ಕಳುಹಿಸಲಾಗಿದೆ.</p>.<p>‘ಆಂಧ್ರದಲ್ಲಿರುವ ವಿವಿಧ ಪಡೆಗಳ ಜೊತೆಯಲ್ಲಿ ಕರ್ನಾಟಕದ ಮಹಿಳಾ ಪೊಲೀಸ್ ಪಡೆಯು ಪಥಸಂಚಲನ ಮಾಡಲಿದೆ. ಆಂಧ್ರದ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ನಾಟಕದ ತಂಡದ ತಾಲೀಮಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಪಥಸಂಚಲನಕ್ಕೆ ಬಹುಮಾನಗಳೂ ಇರುತ್ತವೆ’ ಎಂದೂ ಕೆಎಸ್ಆರ್ಪಿ ಅಧಿಕಾರಿಯೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನೆರೆಯ ಆಂಧ್ರಪ್ರದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ‘ಕರ್ನಾಟಕ ಪೊಲೀಸ್ ಧ್ವಜ’ ರಾರಾಜಿಸಲಿದೆ. ಆಂಧ್ರದ ವಿಜಯವಾಡದಲ್ಲಿ ನಡೆಯುವ ದಿನಾಚರಣೆಯ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಮೊದಲ ಮಹಿಳಾ ಪಡೆಯ ಸದಸ್ಯೆಯರು ಭಾಗವಹಿಸಲಿದ್ದಾರೆ.</p>.<p>ಜನವರಿ 26ರ ಗಣರಾಜ್ಯೋತ್ಸವ ದಿನದಂದು ಆಯಾ ರಾಜ್ಯಗಳಲ್ಲಿ ಧ್ವಜಾರೋಹಣ ಹಾಗೂ ವಿವಿಧ<br />ರಕ್ಷಣಾ ಪಡೆಗಳ ಪಥಸಂಚಲನಏರ್ಪಡಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ, ರಾಜ್ಯದ ಪೊಲೀಸ್ ಪಡೆಯೊಂದನ್ನು ನೆರೆಯ ರಾಜ್ಯಗಳಿಗೆ ಪಥಸಂಚಲನಕ್ಕಾಗಿ ಕಳುಹಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.</p>.<p>ಈ ಬಾರಿ, ಕೆಎಸ್ಆರ್ಪಿ ಮಹಿಳಾ ಪಡೆಯ 59 ಪೊಲೀಸರ ತಂಡವನ್ನು ಆಂಧ್ರಪ್ರದೇಶಕ್ಕೆ ಜ. 15ಕ್ಕೆ ಕಳುಹಿಸಿಕೊಡಲಾಗಿದೆ. ಆಂಧ್ರದಲ್ಲಿ ಕರ್ನಾಟಕ ಮಹಿಳಾ ಪೊಲೀಸರ ಶಕ್ತಿ ಪ್ರದರ್ಶನವಾಗಲಿದೆ.</p>.<p>ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಕಾರ್ಪೋರೇಷನ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಪಥಸಂಚಲನದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮಹಿಳಾ ಪೊಲೀಸರು ಮೈದಾನದಲ್ಲಿತಾಲೀಮು ಆರಂಭಿಸಿದ್ದಾರೆ.</p>.<p>ಇದೇ ಮೊದಲ ಬಾರಿಗೆ ಹೊರರಾಜ್ಯದ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ಮಹಿಳಾ ಪಡೆ, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ‘ಕರ್ನಾಟಕ ಪೊಲೀಸ್...’ ಎಂಬ ಉದ್ಘೋಷದ ಮೂಲಕ ಧ್ವಜ ಹಿಡಿದು ಹೆಜ್ಜೆ ಹಾಕಲಿರುವ ಈ ಪಡೆಗೆ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ (ಆರ್ಪಿಐ) ಶ್ರೀದೇವಿ ಕಟಕದೊಂಡ ಸಾರಥಿ ಆಗಿದ್ದಾರೆ. ಸಹಾಯಕ ಕಮಾಂಡೆಂಟ್ ನಾಗೇಂದ್ರಸ್ವಾಮಿ ಮೇಲ್ವಿಚಾರಕರಾಗಿ ಪಡೆಯ ಜೊತೆಗಿದ್ದಾರೆ.</p>.<p>ಶಸ್ತ್ರಾಸ್ತ್ರವನ್ನು ಕೈಯಲ್ಲಿ ಹಿಡಿದು ಸಾರಥಿಯ ಆಜ್ಞೆಯಂತೆ ಶಿಸ್ತುಬದ್ಧವಾಗಿ ಹೆಜ್ಜೆ ಇರಿಸಲು ಮಹಿಳಾ ಪೊಲೀಸರು ಸಜ್ಜಾಗುತ್ತಿದ್ದಾರೆ.</p>.<p>‘ಕೆಎಸ್ಆರ್ಪಿಯಲ್ಲಿ ಈ ಹಿಂದೆ ಪುರುಷರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. 2015–16ರಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಯಿತು. ಬೆಳಗಾವಿಯ 2ನೇ ಬೆಟಾಲಿಯನ್ ಹಾಗೂ ಬೆಂಗಳೂರಿನ 4ನೇ ಬೆಟಾಲಿಯನ್ಗಳಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಂಥ ಮಹಿಳೆಯರ ತಂಡವನ್ನೇ ಪಥಸಂಚಲನಕ್ಕಾಗಿ ಈ ಬಾರಿ ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ‘ ಎಂದು ಕೆಎಸ್ಆರ್ಪಿ 4ನೇ ಬೆಟಾಲಿಯನ್ ಕಮಾಂಡೆಂಟ್ ಕೆ.ಎಸ್.ರಘುನಾಥ್ ಹೇಳಿದರು.</p>.<p>‘ಪ್ರತಿ ವರ್ಷವೂ ಪುರುಷರ ತಂಡಗಳು ಹೊರ ರಾಜ್ಯಗಳಿಗೆ ಹೋಗುತ್ತಿದ್ದವು. ಈ ವರ್ಷ ಮಹಿಳಾ ಪಡೆಯನ್ನು ಕಳುಹಿಸಲು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಲೋಕ್ಕುಮಾರ್, ಐಜಿಪಿ ಎಸ್.ರವಿ ಇಚ್ಛಿಸಿದ್ದರು. ಎಲ್ಲರ ಆಸೆಯಂತೆ ಮಹಿಳಾ ಪಡೆ ಆಂಧ್ರಕ್ಕೆ ಹೋಗಿದೆ. ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೂ ಇದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.</p>.<p><strong>‘ಆಂಧ್ರಪ್ರದೇಶದ ಪುರುಷ ಪಡೆ ರಾಜ್ಯಕ್ಕೆ’</strong></p>.<p>ಗಣರಾಜ್ಯೋತ್ಸವ ಆಚರಣೆಯಂದು ಪಥಸಂಚಲನದಲ್ಲಿ ಪಾಲ್ಗೊಳ್ಳಲು ಆಂಧ್ರಪ್ರದೇಶದ ಪೊಲೀಸ್ ಪಡೆ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕದ ಮಹಿಳಾ ಪಡೆಯು ಆಂಧ್ರಕ್ಕೆ ಹೋಗಿರುವುದರಿಂದ, ಅದಕ್ಕೆ ಪ್ರತಿಯಾಗಿ ಅಲ್ಲಿಯ ಪೊಲೀಸರನ್ನು ಇಲ್ಲಿಗೆ ಕಳುಹಿಸಲಾಗಿದೆ.</p>.<p>‘ಆಂಧ್ರದಲ್ಲಿರುವ ವಿವಿಧ ಪಡೆಗಳ ಜೊತೆಯಲ್ಲಿ ಕರ್ನಾಟಕದ ಮಹಿಳಾ ಪೊಲೀಸ್ ಪಡೆಯು ಪಥಸಂಚಲನ ಮಾಡಲಿದೆ. ಆಂಧ್ರದ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ನಾಟಕದ ತಂಡದ ತಾಲೀಮಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಪಥಸಂಚಲನಕ್ಕೆ ಬಹುಮಾನಗಳೂ ಇರುತ್ತವೆ’ ಎಂದೂ ಕೆಎಸ್ಆರ್ಪಿ ಅಧಿಕಾರಿಯೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>