<p><strong>ಬೆಂಗಳೂರು</strong>: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಎನ್.ಆರ್. ಕಾಲೊನಿಯಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡ ಹಾಗೂ ಆವರಣ ಕೆಂಪು–ಹಳದಿ ಬಣ್ಣಗಳಿಂದ ತುಂಬಿಹೋಗಿದೆ.</p>.<p>ಕೇಂದ್ರ ಕಚೇರಿಯ ಪ್ರಮುಖ ಕಟ್ಟಡಕ್ಕೆ ಕನ್ನಡ ಧ್ವಜವನ್ನು ಹೊದಿಸಲಾಗಿದ್ದು, ಕೆಂಪು–ಹಳದಿಯ ವಿದ್ಯುತ್ ದೀಪಗಳನ್ನೂ ಅಳವಡಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದಲೇ ತಯಾರಿ ಆರಂಭವಾಗಿ, ಸಂಜೆಯ ವೇಳೆಗೆ ದೀಪಗಳು ಝಗಮಗಿಸುತ್ತಿದ್ದವು.</p>.<p>ಅನೆಕ್ಸ್ ಕಟ್ಟಡಗಳಿಗೂ ಕನ್ನಡ ಧ್ವಜವನ್ನು ಹೊದಿಸಲಾಗಿದ್ದು, ಎಲ್ಲೆಡೆ ಕನ್ನಡಮಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಕಲ್ಲಿನ ಕಟ್ಟಡಗಳೆಲ್ಲವೂ ಕನ್ನಡ ಧ್ವಜವನ್ನು ಹೊದ್ದುಕೊಂಡು ಕಂಗೊಳಿಸುತ್ತಿವೆ. ಗೇಟ್ಗಳು ಹಾಗೂ ಗ್ರಿಲ್ಗಳಿಗೆ ಕನ್ನಡ ಧ್ವಜದ ಜೊತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. </p>.<p>ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ನವೆಂಬರ್ 6ರಂದು ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ಪುನೀತ್ ರಾಜ್ಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರಣದಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣವನ್ನು ಸಜ್ಜುಗೊಳಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ. ಅಮೃತ್ರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಎನ್.ಆರ್. ಕಾಲೊನಿಯಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡ ಹಾಗೂ ಆವರಣ ಕೆಂಪು–ಹಳದಿ ಬಣ್ಣಗಳಿಂದ ತುಂಬಿಹೋಗಿದೆ.</p>.<p>ಕೇಂದ್ರ ಕಚೇರಿಯ ಪ್ರಮುಖ ಕಟ್ಟಡಕ್ಕೆ ಕನ್ನಡ ಧ್ವಜವನ್ನು ಹೊದಿಸಲಾಗಿದ್ದು, ಕೆಂಪು–ಹಳದಿಯ ವಿದ್ಯುತ್ ದೀಪಗಳನ್ನೂ ಅಳವಡಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದಲೇ ತಯಾರಿ ಆರಂಭವಾಗಿ, ಸಂಜೆಯ ವೇಳೆಗೆ ದೀಪಗಳು ಝಗಮಗಿಸುತ್ತಿದ್ದವು.</p>.<p>ಅನೆಕ್ಸ್ ಕಟ್ಟಡಗಳಿಗೂ ಕನ್ನಡ ಧ್ವಜವನ್ನು ಹೊದಿಸಲಾಗಿದ್ದು, ಎಲ್ಲೆಡೆ ಕನ್ನಡಮಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಕಲ್ಲಿನ ಕಟ್ಟಡಗಳೆಲ್ಲವೂ ಕನ್ನಡ ಧ್ವಜವನ್ನು ಹೊದ್ದುಕೊಂಡು ಕಂಗೊಳಿಸುತ್ತಿವೆ. ಗೇಟ್ಗಳು ಹಾಗೂ ಗ್ರಿಲ್ಗಳಿಗೆ ಕನ್ನಡ ಧ್ವಜದ ಜೊತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. </p>.<p>ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ನವೆಂಬರ್ 6ರಂದು ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ಪುನೀತ್ ರಾಜ್ಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರಣದಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣವನ್ನು ಸಜ್ಜುಗೊಳಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ. ಅಮೃತ್ರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>