<p><strong>ಬೆಂಗಳೂರು:</strong> ಕೋರಮಂಗಲ ಕಣಿವೆ ರಾಜಕಾಲುವೆಯನ್ನು ನಿರ್ಮಿಸುವ (ಸಿಟಿಜನ್ ವಾಟರ್ ವೇ ಪ್ರಾಜೆಕ್ಟ್) ಕಾಮಗಾರಿಯ ಟೆಂಡರ್ಗೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.</p>.<p>ಈ ಯೋಜನೆಯಡಿ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರುವರೆಗೆ ರಾಜಕಾಲುವೆಯನ್ನು ನಿರ್ಮಿಸಲಾಗುವುದು. ಯೋಜನಾ ಅಂದಾಜು ವೆಚ್ಚ ₹169 ಕೋಟಿಗಳು.</p>.<p>ನಾಲೆ ನಿರ್ಮಾಣ ಯೋಜನೆಯು ವಿನ್ಯಾಸ, ಎಸ್ಟಿಪಿ ನಿರ್ಮಾಣ, ಹಾಲಿ ಇರುವ ಒಳಚರಂಡಿಯ ಜಾಲದ ದುರಸ್ಥಿ, ಪರಿಶೀಲನೆ, ಮಾರ್ಗದ ಮರು ವಿನ್ಯಾಸ, ಎಲ್ಲ ಒಳಚರಂಡಿಗಳನ್ನು ಈ ರಾಜಕಾಲುವೆಗೆ ತಿರುಗಿಸುವುದನ್ನು ಒಳಗೊಂಡಿದೆ. ಐದು ವರ್ಷಗಳ ಅವಧಿಯಲ್ಲಿ ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ(ಬಿಒಟಿ) ಆಧಾರದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.</p>.<p>ವೆಂಕಟರಮಣೇಗೌಡ (ಸ್ಟಾರ್ ಇನ್ಫ್ರಾಟೆಕ್) ಎಂಬುವರು ₹179.50 ಕೋಟಿಗೆ, ಶ್ರೀನಿವಾಸರಾವ್ (ಬಿಎಸ್ಆರ್ ಇನ್ಫ್ರಾಟೆಕ್ ಇಂಡಿಯಾ ಲಿಮಿಟೆಡ್) ಎಂಬುವರು ₹186.03 ಕೋಟಿಗೆ ಬಿಡ್ ಸಲ್ಲಿಸಿದ್ದಾರೆ. ವೆಂಕಟರಮಣೇಗೌಡ ಅವರ ಟೆಂಡರ್ ಅನುಮೋದನೆ ನೀಡಿದ್ದು, ಅದರ ಸ್ಥಿರೀಕರಣಕ್ಕೆ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಡಲಾಯಿತು. ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.</p>.<p>ಬೆಂಗಳೂರು ಮಿಷನ್ 2022 ರಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಯನ್ನು ನಿಗದಿ ಅವಧಿಯಲ್ಲಿ ಪೂರ್ಣಗೊಳಿಸಲು ಮುಂಗಾರಿಗೆ ಮೊದಲೇ ಆರಂಭಿಸಬೇಕು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಕಳೆದ ಡಿಸೆಂಬರ್ನಲ್ಲೇ ನೀಡಲಾಗಿದೆ.</p>.<p>ಈ ಯೋಜನೆಯ ಅನುಷ್ಠಾನದಿಂದ ಮಳೆ ನೀರುಗಾಲುವೆಗಳನ್ನು ಮಾಲಿನ್ಯದಿಂದ ರಕ್ಷಿಸಬಹುದು. ನಗರದ ನಾಗರೀಕರಿಗೆ ಉತ್ತಮ ವಿಹಾರ ಸ್ಥಳಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಅಂತರ್ಜಲ ಮಾಲಿನ್ಯವನ್ನೂ ತಪ್ಪಿಸಬಹುದು ಎಂದು ಸಭೆಯಲ್ಲಿ ವಿವರಿಸಲಾಯಿತು.ಈ ಯೋಜನೆಗೆ ಈಗಾಗಲೇ ₹169 ಕೋಟಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ಬಿಬಿಎಂಪಿ ಸ್ವಂತ ನಿಧಿಯಿಂದ ಭರಿಸಿಕೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋರಮಂಗಲ ಕಣಿವೆ ರಾಜಕಾಲುವೆಯನ್ನು ನಿರ್ಮಿಸುವ (ಸಿಟಿಜನ್ ವಾಟರ್ ವೇ ಪ್ರಾಜೆಕ್ಟ್) ಕಾಮಗಾರಿಯ ಟೆಂಡರ್ಗೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.</p>.<p>ಈ ಯೋಜನೆಯಡಿ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರುವರೆಗೆ ರಾಜಕಾಲುವೆಯನ್ನು ನಿರ್ಮಿಸಲಾಗುವುದು. ಯೋಜನಾ ಅಂದಾಜು ವೆಚ್ಚ ₹169 ಕೋಟಿಗಳು.</p>.<p>ನಾಲೆ ನಿರ್ಮಾಣ ಯೋಜನೆಯು ವಿನ್ಯಾಸ, ಎಸ್ಟಿಪಿ ನಿರ್ಮಾಣ, ಹಾಲಿ ಇರುವ ಒಳಚರಂಡಿಯ ಜಾಲದ ದುರಸ್ಥಿ, ಪರಿಶೀಲನೆ, ಮಾರ್ಗದ ಮರು ವಿನ್ಯಾಸ, ಎಲ್ಲ ಒಳಚರಂಡಿಗಳನ್ನು ಈ ರಾಜಕಾಲುವೆಗೆ ತಿರುಗಿಸುವುದನ್ನು ಒಳಗೊಂಡಿದೆ. ಐದು ವರ್ಷಗಳ ಅವಧಿಯಲ್ಲಿ ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ(ಬಿಒಟಿ) ಆಧಾರದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.</p>.<p>ವೆಂಕಟರಮಣೇಗೌಡ (ಸ್ಟಾರ್ ಇನ್ಫ್ರಾಟೆಕ್) ಎಂಬುವರು ₹179.50 ಕೋಟಿಗೆ, ಶ್ರೀನಿವಾಸರಾವ್ (ಬಿಎಸ್ಆರ್ ಇನ್ಫ್ರಾಟೆಕ್ ಇಂಡಿಯಾ ಲಿಮಿಟೆಡ್) ಎಂಬುವರು ₹186.03 ಕೋಟಿಗೆ ಬಿಡ್ ಸಲ್ಲಿಸಿದ್ದಾರೆ. ವೆಂಕಟರಮಣೇಗೌಡ ಅವರ ಟೆಂಡರ್ ಅನುಮೋದನೆ ನೀಡಿದ್ದು, ಅದರ ಸ್ಥಿರೀಕರಣಕ್ಕೆ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಇಡಲಾಯಿತು. ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.</p>.<p>ಬೆಂಗಳೂರು ಮಿಷನ್ 2022 ರಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಯನ್ನು ನಿಗದಿ ಅವಧಿಯಲ್ಲಿ ಪೂರ್ಣಗೊಳಿಸಲು ಮುಂಗಾರಿಗೆ ಮೊದಲೇ ಆರಂಭಿಸಬೇಕು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಕಳೆದ ಡಿಸೆಂಬರ್ನಲ್ಲೇ ನೀಡಲಾಗಿದೆ.</p>.<p>ಈ ಯೋಜನೆಯ ಅನುಷ್ಠಾನದಿಂದ ಮಳೆ ನೀರುಗಾಲುವೆಗಳನ್ನು ಮಾಲಿನ್ಯದಿಂದ ರಕ್ಷಿಸಬಹುದು. ನಗರದ ನಾಗರೀಕರಿಗೆ ಉತ್ತಮ ವಿಹಾರ ಸ್ಥಳಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಅಂತರ್ಜಲ ಮಾಲಿನ್ಯವನ್ನೂ ತಪ್ಪಿಸಬಹುದು ಎಂದು ಸಭೆಯಲ್ಲಿ ವಿವರಿಸಲಾಯಿತು.ಈ ಯೋಜನೆಗೆ ಈಗಾಗಲೇ ₹169 ಕೋಟಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ಬಿಬಿಎಂಪಿ ಸ್ವಂತ ನಿಧಿಯಿಂದ ಭರಿಸಿಕೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>