<p><strong>ಕೆ.ಆರ್.ಪುರ:</strong> ಆಸ್ತಿ ತೆರಿಗೆ ಪಾವತಿಸದೇ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಾರಣದಿಂದ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತೆ ಸುಧಾ ಹಾಗೂ ಕಂದಾಯ ಅಧಿಕಾರಿ ಬಸವರಾಜ ಮಗಿ ಸಮಕ್ಷಮದಲ್ಲಿ ಸ್ವತ್ತುಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು.</p>.<p>ಹರಾಜಿನಲ್ಲಿ ಪೂರ್ವ ನಗರಪಾಲಿಕೆ ವ್ಯಾಪ್ತಿಯ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದ್ದ 25 ಆಸ್ತಿಗಳ ಪೈಕಿ ಐದು ಆಸ್ತಿಗಳು ಹರಾಜಿನಲ್ಲಿ ಮಾರಾಟವಾಗಿವೆ.</p>.<p>ಹೆಚ್ಚು ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು, ಪತ್ರಿಕಾ ಪ್ರಕಟಣೆ ಮೂಲಕ ನೋಟಿಸ್ ಹಾಗೂ ಕರೆ ಮಾಡಿ ಸಂದೇಶ ಕಳಿಸಿ ಜಪ್ತಿ ಆದೇಶ ಹೊರಡಿಸಲಾಗಿತ್ತು. ಅದರೂ ತೆರಿಗೆ ಪಾವತಿ ಮಾಡಿಲ್ಲ, ಹಾಗಾಗಿ 25 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು.</p>.<p>ಇದರಲ್ಲಿ ಹತ್ತು ಆಸ್ತಿ ಮಾಲೀಕರು ಸ್ಥಳದಲ್ಲಿಯೇ ತೆರಿಗೆ ಪಾವತಿ ಮಾಡಿದ್ದಾರೆ. ಉಳಿದ ಹತ್ತು ಆಸ್ತಿಯ ಮಾಲೀಕರು ತೆರಿಗೆ ಪಾವತಿ ಮಾಡಲು ಮುಂದೆ ಬಂದಿದ್ದಾರೆ.</p>.<p>‘ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹೊಯ್ಸಳ ನಗರದ ಪಿ.ಮೋಹನ್ಗೆ ಸೇರಿದ ಆಸ್ತಿ ₹1.30 ಕೋಟಿ, ಗುರುಮೂರ್ತಿರೆಡ್ಡಿ ಬಡಾವಣೆಯ ಜಿ.ರಾಮಯ್ಯ ಎಂಬುವವರಿಗೆ ಸೇರಿದ ಆಸ್ತಿ ₹1.63 ಕೋಟಿ ಹಾಗೂ ವಿಜಿನಾಪುರದ ಅಯ್ಯಪ್ಪ ದೇವಸ್ಥಾನ ಬಳಿಯ ಅಮೀನ್ ಎಂಬುವವರಿಗೆ ಸೇರಿದ ಅಸ್ತಿ ₹93.17 ಲಕ್ಷ , ಅನ್ನಸಂದ್ರಪಾಳ್ಯದಲ್ಲಿ ಶಶಿ ಎಂಬುವವರಿಗೆ ಸೇರಿದ ಆಸ್ತಿ ₹47.42 ಲಕ್ಷ ಹಾಗೂ ಬಸವನಪುರದಲ್ಲಿ ಝಾನ್ಸಿ ರಾಣಿ ಅವರಿಗೆ ಸೇರಿದ ಆಸ್ತಿ ₹1.28 ಕೋಟಿಗೆ ಮಾರಾಟವಾಗಿವೆ’ ಎಂದು ಜಂಟಿ ಆಯುಕ್ತೆ ಸುಧಾ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಆಸ್ತಿ ತೆರಿಗೆ ಪಾವತಿಸದೇ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಾರಣದಿಂದ ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತೆ ಸುಧಾ ಹಾಗೂ ಕಂದಾಯ ಅಧಿಕಾರಿ ಬಸವರಾಜ ಮಗಿ ಸಮಕ್ಷಮದಲ್ಲಿ ಸ್ವತ್ತುಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು.</p>.<p>ಹರಾಜಿನಲ್ಲಿ ಪೂರ್ವ ನಗರಪಾಲಿಕೆ ವ್ಯಾಪ್ತಿಯ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದ್ದ 25 ಆಸ್ತಿಗಳ ಪೈಕಿ ಐದು ಆಸ್ತಿಗಳು ಹರಾಜಿನಲ್ಲಿ ಮಾರಾಟವಾಗಿವೆ.</p>.<p>ಹೆಚ್ಚು ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು, ಪತ್ರಿಕಾ ಪ್ರಕಟಣೆ ಮೂಲಕ ನೋಟಿಸ್ ಹಾಗೂ ಕರೆ ಮಾಡಿ ಸಂದೇಶ ಕಳಿಸಿ ಜಪ್ತಿ ಆದೇಶ ಹೊರಡಿಸಲಾಗಿತ್ತು. ಅದರೂ ತೆರಿಗೆ ಪಾವತಿ ಮಾಡಿಲ್ಲ, ಹಾಗಾಗಿ 25 ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು.</p>.<p>ಇದರಲ್ಲಿ ಹತ್ತು ಆಸ್ತಿ ಮಾಲೀಕರು ಸ್ಥಳದಲ್ಲಿಯೇ ತೆರಿಗೆ ಪಾವತಿ ಮಾಡಿದ್ದಾರೆ. ಉಳಿದ ಹತ್ತು ಆಸ್ತಿಯ ಮಾಲೀಕರು ತೆರಿಗೆ ಪಾವತಿ ಮಾಡಲು ಮುಂದೆ ಬಂದಿದ್ದಾರೆ.</p>.<p>‘ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹೊಯ್ಸಳ ನಗರದ ಪಿ.ಮೋಹನ್ಗೆ ಸೇರಿದ ಆಸ್ತಿ ₹1.30 ಕೋಟಿ, ಗುರುಮೂರ್ತಿರೆಡ್ಡಿ ಬಡಾವಣೆಯ ಜಿ.ರಾಮಯ್ಯ ಎಂಬುವವರಿಗೆ ಸೇರಿದ ಆಸ್ತಿ ₹1.63 ಕೋಟಿ ಹಾಗೂ ವಿಜಿನಾಪುರದ ಅಯ್ಯಪ್ಪ ದೇವಸ್ಥಾನ ಬಳಿಯ ಅಮೀನ್ ಎಂಬುವವರಿಗೆ ಸೇರಿದ ಅಸ್ತಿ ₹93.17 ಲಕ್ಷ , ಅನ್ನಸಂದ್ರಪಾಳ್ಯದಲ್ಲಿ ಶಶಿ ಎಂಬುವವರಿಗೆ ಸೇರಿದ ಆಸ್ತಿ ₹47.42 ಲಕ್ಷ ಹಾಗೂ ಬಸವನಪುರದಲ್ಲಿ ಝಾನ್ಸಿ ರಾಣಿ ಅವರಿಗೆ ಸೇರಿದ ಆಸ್ತಿ ₹1.28 ಕೋಟಿಗೆ ಮಾರಾಟವಾಗಿವೆ’ ಎಂದು ಜಂಟಿ ಆಯುಕ್ತೆ ಸುಧಾ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>