‘ಅನುದಾನದ ಕೊರತೆಯಿಂದಾಗಿ ಶಿವನಗರ ಮೇಲ್ಸೇತುವೆ, ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಹಾಗೂ ಕೋರಮಂಗಲದ ಸೋನಿ ಸಿಗ್ನಲ್ನ ಮೇಲ್ಸೇತುವೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿಸಲು ಪಾಲಿಕೆ ವಿಳಂಬ ಮಾಡುತ್ತಿದೆ. ಆದರೆ, ಒಂದೆರಡು ತಿಂಗಳ ಹಿಂದೆ ಮಾಡಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ನಿಗಮದ ಮೇಲೆ ಅಷ್ಟೇಕೆ ಮೋಹ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.