<p><strong>ಬೆಂಗಳೂರು:</strong> ಮನೆ ತಾರಸಿಯಲ್ಲಿ ಹೂವು–ಹಣ್ಣು–ತರಕಾರಿ ಕೃಷಿ. ಗಿಡಗಳಲ್ಲಿ ಹಕ್ಕಿಗಳ ಕಲರವ. ಕಾಲಿಗೆ ಮುತ್ತಿಟ್ಟು ಓಡುವ ಮೊಲಗಳು. ಕಣ್ಣಿಗೆ ತಂಪೆನಿಸುವ ಮೀನು... ಧ್ಯಾನಕ್ಕೆ, ದಣಿವಾರಿಸಿಕೊಳ್ಳಲು ತಾರಸಿಯಲ್ಲಿ ಇಂತಹ ವಾತಾವರಣವಿದ್ದರೆ ಎಷ್ಟು ಚೆಂದ?</p>.<p>ಇಂತಹ ಕಲ್ಪನೆಯನ್ನು ಸಾಕಾರವಾಗಿಸಲು ಮುಂದಾಗಿದೆ ‘ಮೈ ಡ್ರೀಮ್ ಗಾರ್ಡನ್’ ಸಂಸ್ಥೆ. ಆಸಕ್ತರಿಗೆ ತಾರಸಿಯಲ್ಲಿ ಜೀವವೈವಿಧ್ಯ ಉದ್ಯಾನವನ್ನು ಅದು ನಿರ್ಮಿಸಿಕೊಡುತ್ತಿದೆ. ಕೃಷಿಮೇಳದಲ್ಲಿ ಸಂಸ್ಥೆ ಮಳಿಗೆಗೆ ಶನಿವಾರ ಸಾವಿರಾರು ಜನ ಭೇಟಿ ನೀಡಿ ವಿವರ ಪಡೆದರು.</p>.<p>‘ಮನೆಯ ಮೇಲೆ ಸೊಪ್ಪು–ತರಕಾರಿ ಬೆಳೆಯುವ 5,000ಕ್ಕೂ ಹೆಚ್ಚು ತಾರಸಿ ಉದ್ಯಾನಗಳನ್ನು ಸಂಸ್ಥೆ ನಗರದಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಗ್ರಾಹಕರ ಮನೆಗೆ ಹೋದಾಗ ಒಬ್ಬರು ತಾರಸಿಯಲ್ಲಿ ಪಕ್ಷಿಗಳನ್ನೂಸಾಕಿದ್ದರು. ಮತ್ತೊಬ್ಬರು ಅಕ್ವೇರಿಯಂ ಮಾಡಿದ್ದರು.<br />ಕೆಲವರು ಮೊಲ ಸಾಕಿದ್ದರು. ಈ ಎಲ್ಲವನ್ನೂ ಒಟ್ಟಾಗಿಸಿ ಉದ್ಯಾನ ರೂಪಿಸುವ ಚಿಂತನೆ ಬಂತು. ಅಂತೆಯೇ, ಈಗ ಜೀವವೈವಿಧ್ಯ ಉದ್ಯಾನ ರೂಪಿಸುತ್ತಿದ್ದೇವೆ’ ಎಂದು ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಸರವಣಕುಮಾರ್ ತಿಳಿಸಿದರು.</p>.<p><strong>ಹೇಗಿರಲಿದೆ ಉದ್ಯಾನ ?</strong><br />ಅಳವಿನಂಚಿನ ಅಥವಾ ವಿಶಿಷ್ಟ ಪ್ರಭೇದದ ಪಕ್ಷಿಗಳು ಹಾಗೂ ಮೊಲಗಳನ್ನು ಇಲ್ಲಿ ಇಟ್ಟು ಬೆಳೆಸಲಾಗುತ್ತದೆ. ಜೊತೆಗೆ ಅಕ್ವೇರಿಯಂ, ರಾಕ್ ಗಾರ್ಡನ್ ನಿರ್ಮಿಸಲಾಗುತ್ತದೆ. ಜೊತೆಗೆ, ಒಂದು ಮನೆಗೆ ಬೇಕಾಗುವಷ್ಟು ಸೊಪ್ಪು–ತರಕಾರಿಗಳನ್ನು ಬೆಳೆಯಲಾಗುತ್ತದೆ.</p>.<p><strong>ನಿರ್ವಹಣೆ ಹೇಗೆ ?</strong><br />ಅಡುಗೆ ಮನೆ ತ್ಯಾಜ್ಯವನ್ನೇ ಗೊಬ್ಬರವಾಗಿ ಇದಕ್ಕೆ ಬಳಸಬಹುದು. ನಿತ್ಯ ಮನೆಯಲ್ಲಿ ಬಳಸುವ ನೀರನ್ನೇ ಈ ಉದ್ಯಾನಕ್ಕೆ ಹರಿಸುವ ವ್ಯವಸ್ಥೆ ಮಾಡಲಾಗುತ್ತದೆ. ‘ಜೀವವೈವಿಧ್ಯ ಉದ್ಯಾನ ಅಭಿವೃದ್ಧಿಗೆ ಒಂದು ಚದರ ಅಡಿಗೆ ₹1,200 ಶುಲ್ಕ ತೆಗೆದುಕೊಳ್ಳುತ್ತೇವೆ. ನಾಲ್ಕು ಜನ ಸದಸ್ಯರಿರುವ ಕುಟುಂಬಕ್ಕೆ ತರಕಾರಿ ಬೆಳೆಯಲು 150 ಚದರ ಅಡಿ ಜಾಗ ಬೇಕಾಗುತ್ತದೆ’ ಎಂದು ಸರವಣ ಕುಮಾರ್ ಹೇಳಿದರು.</p>.<p>ಸಸಿಗಳನ್ನು ಬೆಳೆಯುವ ಪ್ಲಾಂಟರ್ ಪೆಟ್ಟಿಗೆಗಳನ್ನು, ಸಸಿ, ಬೀಜಗಳು, ಪೋಷಕಾಂಶಗಳನ್ನು ಸಂಸ್ಥೆಯೇ ಒದಗಿಸಲಿದೆ. ಎಂಟು ಸಲ ಉದ್ಯಾನ ನಿರ್ವಾಹಕರನ್ನು (ಗಾರ್ಡನರ್) ಉಚಿತವಾಗಿ ಕಳುಹಿಸಲಾಗುತ್ತದೆ.</p>.<p>20 ದಿನಕ್ಕೊಮ್ಮೆ ಉದ್ಯಾನಕ್ಕೆ ಭೇಟಿ ನೀಡುವ ಈ ನಿರ್ವಾಹಕರು ಸಸಿಗಳಿಗೆ ನೀರು ಸಿಂಪಡಣೆ, ಬಳ್ಳಿ ಕಟ್ಟುವುದು, ಗೊಬ್ಬರ ಹಾಕುವುದು ಮತ್ತು ಕಳೆ ಕೀಳುವ ಕೆಲಸ ಮಾಡುತ್ತಾರೆ. ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಆಸಕ್ತಿ ಗ್ರಾಹಕರಿಗೆ ಇದ್ದರೆ, ಈ ಕುರಿತು ತರಬೇತಿಯನ್ನೂ ನೀಡುತ್ತಾರೆ ಎಂದು ತಿಳಿಸಿದರು.</p>.<p><strong>ಆಸಕ್ತರು ತಾರಸಿಯಲ್ಲಿ ಉದ್ಯಾನ ಕೃಷಿ ಅಭಿವೃದ್ಧಿ ಕುರಿತ ಮಾಹಿತಿಗಳಿಗೆ 73491–81777 ಅಥವಾ www.mydreamgarden.in ಸಂಪರ್ಕಿಸಬಹುದು.</strong></p>.<p><strong>*</strong><br />ಜೀವವೈವಿಧ್ಯ ಉದ್ಯಾನದಲ್ಲಿ ಅಡುಗೆ ಮನೆ ತ್ಯಾಜ್ಯದ ಸಮರ್ಪಕ ಬಳಕೆಯಾಗುತ್ತದೆ. ಪಕ್ಷಿಗಳ ಬೆಳವಣಿಗೆಗೆ ಪೂರಕ ವಾತಾವರಣ ಲಭ್ಯವಾಗಲಿದೆ.<br /><strong><em>–ಸರವಣಕುಮಾರ್, ಮೈ ಡ್ರೀಮ್ ಗಾರ್ಡನ್ ಸಂಸ್ಥೆ</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮನೆ ತಾರಸಿಯಲ್ಲಿ ಹೂವು–ಹಣ್ಣು–ತರಕಾರಿ ಕೃಷಿ. ಗಿಡಗಳಲ್ಲಿ ಹಕ್ಕಿಗಳ ಕಲರವ. ಕಾಲಿಗೆ ಮುತ್ತಿಟ್ಟು ಓಡುವ ಮೊಲಗಳು. ಕಣ್ಣಿಗೆ ತಂಪೆನಿಸುವ ಮೀನು... ಧ್ಯಾನಕ್ಕೆ, ದಣಿವಾರಿಸಿಕೊಳ್ಳಲು ತಾರಸಿಯಲ್ಲಿ ಇಂತಹ ವಾತಾವರಣವಿದ್ದರೆ ಎಷ್ಟು ಚೆಂದ?</p>.<p>ಇಂತಹ ಕಲ್ಪನೆಯನ್ನು ಸಾಕಾರವಾಗಿಸಲು ಮುಂದಾಗಿದೆ ‘ಮೈ ಡ್ರೀಮ್ ಗಾರ್ಡನ್’ ಸಂಸ್ಥೆ. ಆಸಕ್ತರಿಗೆ ತಾರಸಿಯಲ್ಲಿ ಜೀವವೈವಿಧ್ಯ ಉದ್ಯಾನವನ್ನು ಅದು ನಿರ್ಮಿಸಿಕೊಡುತ್ತಿದೆ. ಕೃಷಿಮೇಳದಲ್ಲಿ ಸಂಸ್ಥೆ ಮಳಿಗೆಗೆ ಶನಿವಾರ ಸಾವಿರಾರು ಜನ ಭೇಟಿ ನೀಡಿ ವಿವರ ಪಡೆದರು.</p>.<p>‘ಮನೆಯ ಮೇಲೆ ಸೊಪ್ಪು–ತರಕಾರಿ ಬೆಳೆಯುವ 5,000ಕ್ಕೂ ಹೆಚ್ಚು ತಾರಸಿ ಉದ್ಯಾನಗಳನ್ನು ಸಂಸ್ಥೆ ನಗರದಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಗ್ರಾಹಕರ ಮನೆಗೆ ಹೋದಾಗ ಒಬ್ಬರು ತಾರಸಿಯಲ್ಲಿ ಪಕ್ಷಿಗಳನ್ನೂಸಾಕಿದ್ದರು. ಮತ್ತೊಬ್ಬರು ಅಕ್ವೇರಿಯಂ ಮಾಡಿದ್ದರು.<br />ಕೆಲವರು ಮೊಲ ಸಾಕಿದ್ದರು. ಈ ಎಲ್ಲವನ್ನೂ ಒಟ್ಟಾಗಿಸಿ ಉದ್ಯಾನ ರೂಪಿಸುವ ಚಿಂತನೆ ಬಂತು. ಅಂತೆಯೇ, ಈಗ ಜೀವವೈವಿಧ್ಯ ಉದ್ಯಾನ ರೂಪಿಸುತ್ತಿದ್ದೇವೆ’ ಎಂದು ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಸರವಣಕುಮಾರ್ ತಿಳಿಸಿದರು.</p>.<p><strong>ಹೇಗಿರಲಿದೆ ಉದ್ಯಾನ ?</strong><br />ಅಳವಿನಂಚಿನ ಅಥವಾ ವಿಶಿಷ್ಟ ಪ್ರಭೇದದ ಪಕ್ಷಿಗಳು ಹಾಗೂ ಮೊಲಗಳನ್ನು ಇಲ್ಲಿ ಇಟ್ಟು ಬೆಳೆಸಲಾಗುತ್ತದೆ. ಜೊತೆಗೆ ಅಕ್ವೇರಿಯಂ, ರಾಕ್ ಗಾರ್ಡನ್ ನಿರ್ಮಿಸಲಾಗುತ್ತದೆ. ಜೊತೆಗೆ, ಒಂದು ಮನೆಗೆ ಬೇಕಾಗುವಷ್ಟು ಸೊಪ್ಪು–ತರಕಾರಿಗಳನ್ನು ಬೆಳೆಯಲಾಗುತ್ತದೆ.</p>.<p><strong>ನಿರ್ವಹಣೆ ಹೇಗೆ ?</strong><br />ಅಡುಗೆ ಮನೆ ತ್ಯಾಜ್ಯವನ್ನೇ ಗೊಬ್ಬರವಾಗಿ ಇದಕ್ಕೆ ಬಳಸಬಹುದು. ನಿತ್ಯ ಮನೆಯಲ್ಲಿ ಬಳಸುವ ನೀರನ್ನೇ ಈ ಉದ್ಯಾನಕ್ಕೆ ಹರಿಸುವ ವ್ಯವಸ್ಥೆ ಮಾಡಲಾಗುತ್ತದೆ. ‘ಜೀವವೈವಿಧ್ಯ ಉದ್ಯಾನ ಅಭಿವೃದ್ಧಿಗೆ ಒಂದು ಚದರ ಅಡಿಗೆ ₹1,200 ಶುಲ್ಕ ತೆಗೆದುಕೊಳ್ಳುತ್ತೇವೆ. ನಾಲ್ಕು ಜನ ಸದಸ್ಯರಿರುವ ಕುಟುಂಬಕ್ಕೆ ತರಕಾರಿ ಬೆಳೆಯಲು 150 ಚದರ ಅಡಿ ಜಾಗ ಬೇಕಾಗುತ್ತದೆ’ ಎಂದು ಸರವಣ ಕುಮಾರ್ ಹೇಳಿದರು.</p>.<p>ಸಸಿಗಳನ್ನು ಬೆಳೆಯುವ ಪ್ಲಾಂಟರ್ ಪೆಟ್ಟಿಗೆಗಳನ್ನು, ಸಸಿ, ಬೀಜಗಳು, ಪೋಷಕಾಂಶಗಳನ್ನು ಸಂಸ್ಥೆಯೇ ಒದಗಿಸಲಿದೆ. ಎಂಟು ಸಲ ಉದ್ಯಾನ ನಿರ್ವಾಹಕರನ್ನು (ಗಾರ್ಡನರ್) ಉಚಿತವಾಗಿ ಕಳುಹಿಸಲಾಗುತ್ತದೆ.</p>.<p>20 ದಿನಕ್ಕೊಮ್ಮೆ ಉದ್ಯಾನಕ್ಕೆ ಭೇಟಿ ನೀಡುವ ಈ ನಿರ್ವಾಹಕರು ಸಸಿಗಳಿಗೆ ನೀರು ಸಿಂಪಡಣೆ, ಬಳ್ಳಿ ಕಟ್ಟುವುದು, ಗೊಬ್ಬರ ಹಾಕುವುದು ಮತ್ತು ಕಳೆ ಕೀಳುವ ಕೆಲಸ ಮಾಡುತ್ತಾರೆ. ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಆಸಕ್ತಿ ಗ್ರಾಹಕರಿಗೆ ಇದ್ದರೆ, ಈ ಕುರಿತು ತರಬೇತಿಯನ್ನೂ ನೀಡುತ್ತಾರೆ ಎಂದು ತಿಳಿಸಿದರು.</p>.<p><strong>ಆಸಕ್ತರು ತಾರಸಿಯಲ್ಲಿ ಉದ್ಯಾನ ಕೃಷಿ ಅಭಿವೃದ್ಧಿ ಕುರಿತ ಮಾಹಿತಿಗಳಿಗೆ 73491–81777 ಅಥವಾ www.mydreamgarden.in ಸಂಪರ್ಕಿಸಬಹುದು.</strong></p>.<p><strong>*</strong><br />ಜೀವವೈವಿಧ್ಯ ಉದ್ಯಾನದಲ್ಲಿ ಅಡುಗೆ ಮನೆ ತ್ಯಾಜ್ಯದ ಸಮರ್ಪಕ ಬಳಕೆಯಾಗುತ್ತದೆ. ಪಕ್ಷಿಗಳ ಬೆಳವಣಿಗೆಗೆ ಪೂರಕ ವಾತಾವರಣ ಲಭ್ಯವಾಗಲಿದೆ.<br /><strong><em>–ಸರವಣಕುಮಾರ್, ಮೈ ಡ್ರೀಮ್ ಗಾರ್ಡನ್ ಸಂಸ್ಥೆ</em></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>