ರಾಜ್ಯದಲ್ಲಿರುವ ಕೆಎಸ್ಟಿಡಿಸಿ ಮತ್ತು ಜಂಗಲ್ ಲಾಡ್ಜಸ್ಗಳಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿಲ್ಲ. ಅಲ್ಪ ಪ್ರಮಾಣದ ಲಾಭದಿಂದ ಏನೂ ಪ್ರಯೋಜನವಿಲ್ಲ. ಸರ್ಕಾರ ಹೆಚ್ಚಿನ ಆದಾಯ ಪಡೆಯಲು ಲೀಸ್ ಟೆಂಡರ್ಗಳಲ್ಲಿ ಇನ್ನೂ ಹೆಚ್ಚಿನವರು ಮತ್ತು ದೊಡ್ಡ ಸಮೂಹಗಳ ಹೋಟೆಲ್ಗಳವರೂ ಪಾಲ್ಗೊಳ್ಳುವಂತೆ ಆಗಬೇಕು, ತಾಜ್ ಮಾತ್ರ ಅಲ್ಲ, ಒಬೇರಾಯ್ನಂತಹವರೂ ಟೆಂಡರ್ನಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಹೇಳಿದರು.