ಧರ್ಮ ಮತ್ತು ಧಾರ್ಮಿಕ ಕಟ್ಟುಪಾಡುಗಳನ್ನು ಮೀರುವ ಕಾರ್ಯಕ್ರಮವನ್ನು ಎಚ್ಡಬ್ಲ್ಯುಸಿಎ ಆಯೋಜಿಸುತ್ತಿದೆ. ಲಿಂಗ ತಾರತಮ್ಯ , ಪುರುಷ ಪ್ರಾಧಾನ್ಯವಿರುವ ಈ ಸಮಾಜದಲ್ಲಿ ಹೆಣ್ಣು ಮಕ್ಕಳು ಹಿಂದುಳಿದು ಬಿಡುತ್ತಾರೆ. ಕಾಶ್ಮೀರದಲ್ಲಿ ಮುಸ್ಲಿಂ ಅಂಬಿಗನ ಮಗಳಿಗೆ ಸ್ವಾಮಿ ವಿವೇಕಾನಂದರು ಕುಮಾರಿ ಪೂಜೆ ಮಾಡಿದ್ದರು. ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನವನ್ನು ಸುಧಾರಿಸಲು ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಇದು ದಾರಿಯಾಯಿತು ಎಂದು ಪ್ರೊವಿಡೆಂಟ್ ಹಾರ್ಮನಿ ಅಪಾರ್ಟ್ಮೆಂಟ್ ಮಾಲೀಕರ ಸಂಘದ ವ್ಯವಸ್ಥಾಪಕ ಸಮಿತಿ ಸದಸ್ಯ ಮಯೂಕ್ ಪಾತ್ರಾ ಹೇಳಿದ್ದಾರೆ.