<p><strong>ಬೆಂಗಳೂರು:</strong> ಲಾಲ್ಬಾಗ್ ಸಸ್ಯೋದ್ಯಾನದಲ್ಲಿರುವ 160 ವರ್ಷಗಳಷ್ಟು ಹಳೆಯ ಪಾರಂಪರಿಕ ಕಟ್ಟಡ ‘ಜಿ.ಎಚ್.ಕೃಂಬಿಗಲ್ ಭವನ’ ಶಿಥಿಲಗೊಂಡಿದ್ದು, ಅದೇ ಜಾಗದಲ್ಲಿ ನೂತನಕಟ್ಟಡ ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.</p>.<p>ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಯು ಪುರಾತತ್ವ ಇಲಾಖೆಯ ಹೆಗಲಿಗೆ ಹೊರಿಸಿದೆ. ಈ ಕಟ್ಟಡ ನಿರ್ಮಾಣಕ್ಕೆಂದೇ ಹಲವು ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ಹಣ ಠೇವಣಿ ಇಡಲಾಗಿತ್ತು. ಆ ಹಣ ಬಳಸಿಕೊಂಡು ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ.</p>.<p>‘₹1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಯೋಜಿಸಲಾಗಿದೆ. ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಇನ್ನೊಂದು ತಿಂಗಳ<br />ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ತೋಟಗಾರಿಕಾ ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ 1860ರಲ್ಲಿ ಸುಮಾರು 25x35 ಅಡಿ ವಿಸ್ತೀರ್ಣದ ಈ ಆಕರ್ಷಕ ಕಟ್ಟಡ ನಿರ್ಮಿಸಲಾಗಿತ್ತು.</p>.<p>ಜರ್ಮನ್ ಮೂಲದ ಸಸ್ಯ ವಿಜ್ಞಾನಿ ಗುಸ್ತಾವ್ ಹರ್ಮನ್ ಕೃಂಬಿಗಲ್ ಅವರು 1920–1932ರವರೆಗೆಲಾಲ್ಬಾಗ್ ಉಸ್ತುವಾರಿ ಅಧಿಕಾರಿಯಾಗಿದ್ದರು. ಉದ್ಯಾನವನ್ನು ಬಲು ಜತನದಿಂದ ಹಾಗೂ ವ್ಯವಸ್ಥಿತವಾಗಿ ಬೆಳೆಸಿದ್ದರು. ತೋಟಗಾರಿಕೆ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯ ಸ್ಮರಣಾರ್ಥ ಈ ಕಟ್ಟಡಕ್ಕೆ ಅವರ ಹೆಸರಿಡಲಾಗಿತ್ತು.</p>.<p class="Subhead"><strong>ಸದ್ಯದ ಸ್ಥಿತಿ:</strong> 2017ರಲ್ಲಿ ಮಳೆಗೆ ಈಹಾಲ್ನ ಹಿಂಭಾಗ ಸಂಪೂರ್ಣ ಬಿದ್ದು ಹೋಗಿತ್ತು. ಸದ್ಯ ಕಟ್ಟಡ ಮುಕ್ಕಾಲು ಭಾಗ ಶಿಥಿಲಗೊಂಡಿದೆ.</p>.<p class="Subhead">‘ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ’ ಎಂಬ ಫಲಕವನ್ನು ಅದಕ್ಕೆ ನೇತುಹಾಕಲಾಗಿದೆ.</p>.<p><strong>ವಸ್ತು ಸಂಗ್ರಹಾಲಯ ಜೀರ್ಣೋದ್ಧಾರಕ್ಕೆ ಹಣವಿಲ್ಲ</strong></p>.<p>ಕೆ.ನಂಜಪ್ಪ ವಸ್ತುಸಂಗ್ರಹಾಲಯ ಉದ್ಯಾನದಲ್ಲಿರುವ ಮತ್ತೊಂದು ಪುರಾತನ ಕಟ್ಟಡ. ಈ ಕಟ್ಟಡವೂ ಕುಸಿದು ಹೋಗಿದೆ. ಆದರೆ, ಇದರ ಜೀರ್ಣೋದ್ಧಾರಕ್ಕೆ ಅನುದಾನದ ಕೊರತೆ ಎದುರಾಗಿದೆ.</p>.<p>ಇದೇ ಕಟ್ಟಡದಲ್ಲಿರುವಮತ್ಸ್ಯಾಲಯದ ಅಭಿವೃದ್ಧಿಗೆಇನ್ಫೊಸಿಸ್ ಪ್ರತಿಷ್ಠಾನ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಅದು ಇನ್ನೂ ಈಡೇರಿಲ್ಲ.</p>.<p>‘ಕೆ.ನಂಜಪ್ಪ ಸ್ಮಾರಕ ವಸ್ತು ಸಂಗ್ರಹಾಲಯದ ಕಟ್ಟಡದ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಾಗಿದೆ. ಇದರೊಳಗಿನ ಮತ್ಸ್ಯಾಲಯದ ಅಭಿವೃದ್ಧಿಗೆಇನ್ಫೊಸಿಸ್ ಪ್ರತಿಷ್ಠಾನ ಹಣ ನೀಡುವುದಾಗಿ ತಿಳಿಸಿದೆ. ಕಟ್ಟಡ ಕಟ್ಟಿದರೆ ಮಾತ್ರಮತ್ಸ್ಯಾಲಯ ಅಭಿವೃದ್ಧಿ ಸಾಧ್ಯ’ಎಂದು ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಲಾಲ್ಬಾಗ್ ಸಸ್ಯೋದ್ಯಾನದಲ್ಲಿರುವ 160 ವರ್ಷಗಳಷ್ಟು ಹಳೆಯ ಪಾರಂಪರಿಕ ಕಟ್ಟಡ ‘ಜಿ.ಎಚ್.ಕೃಂಬಿಗಲ್ ಭವನ’ ಶಿಥಿಲಗೊಂಡಿದ್ದು, ಅದೇ ಜಾಗದಲ್ಲಿ ನೂತನಕಟ್ಟಡ ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.</p>.<p>ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಯು ಪುರಾತತ್ವ ಇಲಾಖೆಯ ಹೆಗಲಿಗೆ ಹೊರಿಸಿದೆ. ಈ ಕಟ್ಟಡ ನಿರ್ಮಾಣಕ್ಕೆಂದೇ ಹಲವು ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ಹಣ ಠೇವಣಿ ಇಡಲಾಗಿತ್ತು. ಆ ಹಣ ಬಳಸಿಕೊಂಡು ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ.</p>.<p>‘₹1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಯೋಜಿಸಲಾಗಿದೆ. ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಇನ್ನೊಂದು ತಿಂಗಳ<br />ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ತೋಟಗಾರಿಕಾ ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ 1860ರಲ್ಲಿ ಸುಮಾರು 25x35 ಅಡಿ ವಿಸ್ತೀರ್ಣದ ಈ ಆಕರ್ಷಕ ಕಟ್ಟಡ ನಿರ್ಮಿಸಲಾಗಿತ್ತು.</p>.<p>ಜರ್ಮನ್ ಮೂಲದ ಸಸ್ಯ ವಿಜ್ಞಾನಿ ಗುಸ್ತಾವ್ ಹರ್ಮನ್ ಕೃಂಬಿಗಲ್ ಅವರು 1920–1932ರವರೆಗೆಲಾಲ್ಬಾಗ್ ಉಸ್ತುವಾರಿ ಅಧಿಕಾರಿಯಾಗಿದ್ದರು. ಉದ್ಯಾನವನ್ನು ಬಲು ಜತನದಿಂದ ಹಾಗೂ ವ್ಯವಸ್ಥಿತವಾಗಿ ಬೆಳೆಸಿದ್ದರು. ತೋಟಗಾರಿಕೆ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯ ಸ್ಮರಣಾರ್ಥ ಈ ಕಟ್ಟಡಕ್ಕೆ ಅವರ ಹೆಸರಿಡಲಾಗಿತ್ತು.</p>.<p class="Subhead"><strong>ಸದ್ಯದ ಸ್ಥಿತಿ:</strong> 2017ರಲ್ಲಿ ಮಳೆಗೆ ಈಹಾಲ್ನ ಹಿಂಭಾಗ ಸಂಪೂರ್ಣ ಬಿದ್ದು ಹೋಗಿತ್ತು. ಸದ್ಯ ಕಟ್ಟಡ ಮುಕ್ಕಾಲು ಭಾಗ ಶಿಥಿಲಗೊಂಡಿದೆ.</p>.<p class="Subhead">‘ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ’ ಎಂಬ ಫಲಕವನ್ನು ಅದಕ್ಕೆ ನೇತುಹಾಕಲಾಗಿದೆ.</p>.<p><strong>ವಸ್ತು ಸಂಗ್ರಹಾಲಯ ಜೀರ್ಣೋದ್ಧಾರಕ್ಕೆ ಹಣವಿಲ್ಲ</strong></p>.<p>ಕೆ.ನಂಜಪ್ಪ ವಸ್ತುಸಂಗ್ರಹಾಲಯ ಉದ್ಯಾನದಲ್ಲಿರುವ ಮತ್ತೊಂದು ಪುರಾತನ ಕಟ್ಟಡ. ಈ ಕಟ್ಟಡವೂ ಕುಸಿದು ಹೋಗಿದೆ. ಆದರೆ, ಇದರ ಜೀರ್ಣೋದ್ಧಾರಕ್ಕೆ ಅನುದಾನದ ಕೊರತೆ ಎದುರಾಗಿದೆ.</p>.<p>ಇದೇ ಕಟ್ಟಡದಲ್ಲಿರುವಮತ್ಸ್ಯಾಲಯದ ಅಭಿವೃದ್ಧಿಗೆಇನ್ಫೊಸಿಸ್ ಪ್ರತಿಷ್ಠಾನ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಅದು ಇನ್ನೂ ಈಡೇರಿಲ್ಲ.</p>.<p>‘ಕೆ.ನಂಜಪ್ಪ ಸ್ಮಾರಕ ವಸ್ತು ಸಂಗ್ರಹಾಲಯದ ಕಟ್ಟಡದ ನಿರ್ಮಾಣಕ್ಕೆ ಅನುದಾನದ ಕೊರತೆ ಎದುರಾಗಿದೆ. ಇದರೊಳಗಿನ ಮತ್ಸ್ಯಾಲಯದ ಅಭಿವೃದ್ಧಿಗೆಇನ್ಫೊಸಿಸ್ ಪ್ರತಿಷ್ಠಾನ ಹಣ ನೀಡುವುದಾಗಿ ತಿಳಿಸಿದೆ. ಕಟ್ಟಡ ಕಟ್ಟಿದರೆ ಮಾತ್ರಮತ್ಸ್ಯಾಲಯ ಅಭಿವೃದ್ಧಿ ಸಾಧ್ಯ’ಎಂದು ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>