<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಕ್ರೈಸ್ಟ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ಜಂಟಿಯಾಗಿ ಕಾನೂನು ಸೇವಾ ಕ್ಲಿನಿಕ್ ಬಲಪಡಿಸಲು ಒಪ್ಪಂದವನ್ನು 10 ವರ್ಷ ಕಾಲ ನವೀಕರಿಸಿವೆ.</p>.<p>ಕ್ರೈಸ್ಟ್ ವಿಶ್ವವಿದ್ಯಾಲಯದ ಸೆಂಟ್ರಲ್ ಕ್ಯಾಂಪಸ್ನಲ್ಲಿ ಬುಧವಾರ ಒಪ್ಪಂದ ನವೀಕರಣ ಸಮಾರಂಭ ನಡೆಯಿತು.</p>.<p>ಕಾನೂನು ಸೇವಾ ಪ್ರಾಧಿಕಾರದ ಬೆಂಗಳೂರು ನಗರ ಜಿಲ್ಲಾ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ, ‘ಕಾನೂನು ಶಿಕ್ಷಣವು ಕೇವಲ ತರಗತಿಗಳಲ್ಲದೆ ಜನಜೀವನಕ್ಕೂ ತಲುಪಬೇಕು. ಇಂತಹ ದೀರ್ಘಾವಧಿ ಸಹಯೋಗವು ವಿದ್ಯಾರ್ಥಿಗಳು ಹಾಗೂ ಸಮಾಜದ ಸಬಲಿಕರಣಕ್ಕೆ ಸಹಕಾರಿಯಾಗಲಿದೆ’ ಎಂದು ಹೇಳಿದರು.</p>.<p>ಕಳೆದ ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಜಾಗೃತಿ ಶಿಬಿರಗಳು, ಮನೆಮನೆ ಸಮೀಕ್ಷೆ, ಮಹಿಳೆಯರ ಹಾಗೂ ಕಾರ್ಮಿಕರ ಹಕ್ಕುಗಳ ಕುರಿತು ಕಾರ್ಯಾಗಾರ, ಕಾನೂನು ಸಲಹಾ ಶಿಬಿರ ನಡೆಸಲಾಗಿದೆ ಎಂದು ಕಾನೂನು ಸೇವಾ ಕ್ಲಿನಿಕ್ ಸಂಯೋಜಕರಾದ ಎಚ್.ಎಲ್. ಜಯಂತಿ ಬಾಯಿ ತಿಳಿಸಿದರು.</p>.<p>ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ಆಧುನಿಕ ಕಾನೂನು ಸೇವೆಗಳು, ಡಿಜಿಟಲ್ ಸಹಾಯ ವೇದಿಕೆ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಕಾರ್ಯಕ್ರಮಗಳು, ಕಾನೂನು ಅರಿವು ಗ್ರಾಮ ಸಂಚಾರಗಳನ್ನು ನಡೆಸಲು ವೇದಿಕೆ ಒದಗಿಸಲಿದೆ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಅನಿಲ್ ಜೋಸೆಫ್ ಪಿಂಟೊ, ಟಿ.ವಿ.ಥಾಮಸ್, ಎಸ್.ಸಪ್ನಾ, ಪಿ.ಶಿಬು, ಜಯದೇವ ಎಸ್. ನಾಯರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಕ್ರೈಸ್ಟ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ಜಂಟಿಯಾಗಿ ಕಾನೂನು ಸೇವಾ ಕ್ಲಿನಿಕ್ ಬಲಪಡಿಸಲು ಒಪ್ಪಂದವನ್ನು 10 ವರ್ಷ ಕಾಲ ನವೀಕರಿಸಿವೆ.</p>.<p>ಕ್ರೈಸ್ಟ್ ವಿಶ್ವವಿದ್ಯಾಲಯದ ಸೆಂಟ್ರಲ್ ಕ್ಯಾಂಪಸ್ನಲ್ಲಿ ಬುಧವಾರ ಒಪ್ಪಂದ ನವೀಕರಣ ಸಮಾರಂಭ ನಡೆಯಿತು.</p>.<p>ಕಾನೂನು ಸೇವಾ ಪ್ರಾಧಿಕಾರದ ಬೆಂಗಳೂರು ನಗರ ಜಿಲ್ಲಾ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ, ‘ಕಾನೂನು ಶಿಕ್ಷಣವು ಕೇವಲ ತರಗತಿಗಳಲ್ಲದೆ ಜನಜೀವನಕ್ಕೂ ತಲುಪಬೇಕು. ಇಂತಹ ದೀರ್ಘಾವಧಿ ಸಹಯೋಗವು ವಿದ್ಯಾರ್ಥಿಗಳು ಹಾಗೂ ಸಮಾಜದ ಸಬಲಿಕರಣಕ್ಕೆ ಸಹಕಾರಿಯಾಗಲಿದೆ’ ಎಂದು ಹೇಳಿದರು.</p>.<p>ಕಳೆದ ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಜಾಗೃತಿ ಶಿಬಿರಗಳು, ಮನೆಮನೆ ಸಮೀಕ್ಷೆ, ಮಹಿಳೆಯರ ಹಾಗೂ ಕಾರ್ಮಿಕರ ಹಕ್ಕುಗಳ ಕುರಿತು ಕಾರ್ಯಾಗಾರ, ಕಾನೂನು ಸಲಹಾ ಶಿಬಿರ ನಡೆಸಲಾಗಿದೆ ಎಂದು ಕಾನೂನು ಸೇವಾ ಕ್ಲಿನಿಕ್ ಸಂಯೋಜಕರಾದ ಎಚ್.ಎಲ್. ಜಯಂತಿ ಬಾಯಿ ತಿಳಿಸಿದರು.</p>.<p>ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ಆಧುನಿಕ ಕಾನೂನು ಸೇವೆಗಳು, ಡಿಜಿಟಲ್ ಸಹಾಯ ವೇದಿಕೆ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಕಾರ್ಯಕ್ರಮಗಳು, ಕಾನೂನು ಅರಿವು ಗ್ರಾಮ ಸಂಚಾರಗಳನ್ನು ನಡೆಸಲು ವೇದಿಕೆ ಒದಗಿಸಲಿದೆ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಅನಿಲ್ ಜೋಸೆಫ್ ಪಿಂಟೊ, ಟಿ.ವಿ.ಥಾಮಸ್, ಎಸ್.ಸಪ್ನಾ, ಪಿ.ಶಿಬು, ಜಯದೇವ ಎಸ್. ನಾಯರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>