ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ನಾಯಕ ಸೇರಿ ಎಂಟು ಮಂದಿಗೆ ‘ಲೇಖಿಕಾ ಪುಸ್ತಕ ಪ್ರಶಸ್ತಿ’

Published 6 ಜನವರಿ 2024, 16:13 IST
Last Updated 6 ಜನವರಿ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ ನೀಡುವ 2023ನೇ ಸಾಲಿನ ‘ಲೇಖಿಕಾ ಪುಸ್ತಕ ಪ್ರಶಸ್ತಿ’ಗೆ ಲೇಖಕಿ ಶಾಂತಿ ನಾಯಕ ಸೇರಿ ಎಂಟು ಮಂದಿ ಆಯ್ಕೆಯಾಗಿದ್ದಾರೆ.

‘ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಸಾಧಕಿ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ‘ನಿಡಸಾಲೆ ಪುಟ್ಟಸ್ವಾಮಯ್ಯ ನಾಟಕ ಪ್ರಶಸ್ತಿ’ಗೆ ಧಾರವಾಡದ ಶೈಲಾ ಛಬ್ಬಿ ಅವರ ‘ಇಪ್ಪತ್ತೈದು ಪ್ರಹಸನಗಳು’ ಮತ್ತು ಮೈಸೂರಿನ ಗಣೇಶ ಅಮೀನಗಡ ಅವರ ‘ಬಿಚ್ಚಿದ ಜೋಳಿಗೆ’ ಕೃತಿ, ‘ಅಪೂರ್ವ ಕಾದಂಬರಿ ಪ್ರಶಸ್ತಿ’ಗೆ ಮೈಸೂರಿನ ಗೀತಾ ಸೀತಾರಾಂ ಅವರ ‘ರಾಜ ಕಲಾವಿದ ರವಿವರ್ಮ’ ಪುಸ್ತಕ, ‘ಮಂಗಳಾ ರಾಮಚಂದ್ರ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಸಂತೆಬೆನ್ನೂರಿನ ಫೈಜ್ನಟ್ರಾಜ್ ಅವರ ‘ಮಗಳಿಗೆ ಹೇಳಿದ ಕಥೆಗಳು’ ಕೃತಿ ಆಯ್ಕೆಯಾಗಿದೆ.

‘ಕಮಲ ಸುರೇಶ ರಾವ್ ಮನೋಳಿ ಕಥಾ ಪ್ರಶಸ್ತಿ’ಗೆ ಧಾರವಾಡದ ವಿನುತಾ ಹಂಚಿನಮನಿ ಅವರ ‘ಅನುಸಂಧಾನ’ ಕೃತಿ ಹಾಗೂ ‘ಲೇಖಿಕಾ ವಿಶೇಷ ಪ್ರಶಸ್ತಿ’ಗೆ ಬೆಂಗಳೂರಿನ ಬೇಲೂರು ರಘುನಂದನ್ ಅವರ ‘ಚಿಟ್ಟೆ’ ಮತ್ತು ಕೆ.ವಿ. ರಾಜಲಕ್ಷ್ಮಿ ಅವರ ‘ಲಾಸ್ಟ್‌ ಬೆಂಚ್ ಹುಡುಗಿ ಮತ್ತು ಇತರ ಕಥೆಗಳು’ ಕೃತಿ ಆಯ್ಕೆಯಾಗಿದೆ. 

ಶೈಲಜಾ ಸುರೇಶ್, ಸರಸ್ವತಿ ನಟರಾಜ್, ವಿದ್ಯಾ ಶಿರಹಟ್ಟಿ ತೀರ್ಪುಗಾರರಾಗಿದ್ದರು. ಲೇಖಿಕಾ ಸಾಹಿತ್ಯ ವೇದಿಕೆ ಮಾರ್ಚ್ ತಿಂಗಳಲ್ಲಿ ಆಯೋಜಿಸುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT