‘ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಸಾಧಕಿ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ‘ನಿಡಸಾಲೆ ಪುಟ್ಟಸ್ವಾಮಯ್ಯ ನಾಟಕ ಪ್ರಶಸ್ತಿ’ಗೆ ಧಾರವಾಡದ ಶೈಲಾ ಛಬ್ಬಿ ಅವರ ‘ಇಪ್ಪತ್ತೈದು ಪ್ರಹಸನಗಳು’ ಮತ್ತು ಮೈಸೂರಿನ ಗಣೇಶ ಅಮೀನಗಡ ಅವರ ‘ಬಿಚ್ಚಿದ ಜೋಳಿಗೆ’ ಕೃತಿ, ‘ಅಪೂರ್ವ ಕಾದಂಬರಿ ಪ್ರಶಸ್ತಿ’ಗೆ ಮೈಸೂರಿನ ಗೀತಾ ಸೀತಾರಾಂ ಅವರ ‘ರಾಜ ಕಲಾವಿದ ರವಿವರ್ಮ’ ಪುಸ್ತಕ, ‘ಮಂಗಳಾ ರಾಮಚಂದ್ರ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಸಂತೆಬೆನ್ನೂರಿನ ಫೈಜ್ನಟ್ರಾಜ್ ಅವರ ‘ಮಗಳಿಗೆ ಹೇಳಿದ ಕಥೆಗಳು’ ಕೃತಿ ಆಯ್ಕೆಯಾಗಿದೆ.