ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಳೆದ ವರ್ಷ ಚಿರತೆ ದಾಳಿಗೆ ಹಸು, ನಾಯಿ ಹಾಗೂ ಕುರಿಗಳು ಬಲಿಯಾದ ಘಟನೆ ನಡೆದಿತ್ತು. ಅರಣ್ಯ ಇಲಾಖೆಯಿಂದ ಪುನುಗುಮಾರನಹಳ್ಳಿ ಬಳಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದ ಪರಿಣಾಮ ಗಣಪತಿ ಹಳ್ಳಿ, ಪೆದ್ದಮಾರನಹಳ್ಳಿ, ಮಾಳಗೊಂಡನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ನೆಮ್ಮದಿಯಿಂದ ಉಸಿರಾಡುವಂತಾಯಿತು. ಈಗ ಮತ್ತೆ ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.