<p><strong>ಬೆಂಗಳೂರು</strong>: ‘ಪುಸ್ತಕ ಪ್ರಕಾಶಕರು ಮತ್ತು ಸರ್ಕಾರವು ಹೊಸ ಕಾರ್ಯವಿಧಾನಗಳನ್ನು ಕಂಡುಕೊಂಡು ಓದುಗರಿಗೆ ಪುಸ್ತಕ ತಲುಪಿಸುವ ಕೆಲಸ ಮಾಡಬೇಕು’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಸಲಹೆ ಮಾಡಿದರು.</p>.<p>ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಅಮೆರಿಕದಲ್ಲಿ ಪುಸ್ತಕ ಖರೀದಿಸಿ, ಓದಿದ ನಂತರ ಹಾಳು ಮಾಡದೇ ಮೂರು ದಿನಗಳಲ್ಲಿ ವಾಪಸು ಮಾಡಿದರೆ ಪುಸ್ತಕ ದರದ ಶೇ 75ರಷ್ಟು ವಾಪಸು ನೀಡುತ್ತಾರೆ. 1 ವಾರದಲ್ಲಿ ವಾಪಸು ಮಾಡಿದರೆ ಶೇ 50, 3 ವಾರಗಳಲ್ಲಿ ವಾಪಸು ಮಾಡಿದರೆ ಶೇ 25 ದರ ವಾಪಸು ಮಾಡುತ್ತಾರೆ. ಅಂಥ ಪದ್ಧತಿ ನಮ್ಮಲ್ಲೂ ಬರಬೇಕು’ ಎಂದು ಸಲಹೆ ನೀಡಿದರು.</p>.<p>‘ಅಲ್ಲಿನ ನ್ಯಾಯಾಲಯದಲ್ಲಿ ಒಂದು ತೀರ್ಪು ಬಂದರೆ ಬರಹಗಾರರು ಜಾಲಾಡಿಸಿಬಿಡುತ್ತಾರೆ. ವಿಮರ್ಶಿಸುತ್ತಾರೆ. ಪ್ರಶ್ನೆ ಮಾಡುತ್ತಾರೆ. ಆ ಬಗ್ಗೆ ಪುಸ್ತಕವನ್ನೇ ತರುತ್ತಾರೆ. ಆದರೆ, ನಮ್ಮಲ್ಲಿ ತೀರ್ಪುಗಳನ್ನು ಓದುವ ಅಭ್ಯಾಸವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಬರವಣಿಗೆಯಲ್ಲಿ ಯಾರಿಗಾದರೂ ಮಾನನಷ್ಟ ಉಂಟು ಮಾಡಿದರೆ ಬರಹಗಾರನ ಜೊತೆಗೆ ಪ್ರಕಾಶಕನೂ ಜವಾಬ್ದಾರಿ. ಇಂಥ ಒಂದು ಮೊಕದ್ದಮೆ ಹೂಡಿದರೆ ಪ್ರಕಾಶಕ ದುಡಿದಿರುವುದನ್ನೆಲ್ಲ ಅದಕ್ಕೆ ವೆಚ್ಚ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.</p>.<p>ಕಾನೂನು ಪುಸ್ತಕದಿಂದ ‘ಕ್ರಿಮಿನಲ್ ಕಂಟೆಂಟ್ ಆಫ್ ಕೋರ್ಟ್’, ‘ಕ್ರಿಮಿನಲ್ ಡಿಫರ್ಮೇಶನ್’, ‘ಸೆಡಿಶನ್’ ತೆಗೆದು ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು.</p>.<p>ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು, ‘2020ನೇ ಸಾಲಿನ ಸಗಟು ಪುಸ್ತಕ ಖರೀದಿಯ ಹಣ ₹ 13 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. 3 ವರ್ಷಗಳಿಂದ ಪುಸ್ತಕ ಖರೀದಿಯಾಗಿಲ್ಲ. ಖರೀದಿಗೆ ಪುಟಕ್ಕೆ 40 ಪೈಸೆ ಹೆಚ್ಚಿಸಬೇಕು. ಹೈಟೆಕ್ ಗ್ರಂಥಾಲಯ ತೆರೆಯಬೇಕು’ ಎಂದು ಆಗ್ರಹಿಸಿದರು.</p>.<p>ಎನ್. ಜಗದೀಶ ಕೊಪ್ಪ ಅವರಿಗೆ ‘ಸಾಹಿತ್ಯ ರತ್ನ’, ರಂಜಿನಿ ರಾಘವನ್ ಅವರಿಗೆ ‘ಯುವ ಸಾಹಿತ್ಯ ರತ್ನ’, ಅಭಿರುಚಿ ಗಣೇಶ್ ಅವರಿಗೆ ‘ಪುಸ್ತಕ ರತ್ನ’, ಟಂಕಸಾಲ ಎಸ್. ನಾಗರಾಜ್ ಅವರಿಗೆ ‘ಮುದ್ರಣ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕಿ ಎಂ. ಕನಗವಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ. ಸಂಘದ ಕಾರ್ಯದರ್ಶಿ ಆರ್.ದೊಡ್ಡೆಗೌಡ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪುಸ್ತಕ ಪ್ರಕಾಶಕರು ಮತ್ತು ಸರ್ಕಾರವು ಹೊಸ ಕಾರ್ಯವಿಧಾನಗಳನ್ನು ಕಂಡುಕೊಂಡು ಓದುಗರಿಗೆ ಪುಸ್ತಕ ತಲುಪಿಸುವ ಕೆಲಸ ಮಾಡಬೇಕು’ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಸಲಹೆ ಮಾಡಿದರು.</p>.<p>ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಅಮೆರಿಕದಲ್ಲಿ ಪುಸ್ತಕ ಖರೀದಿಸಿ, ಓದಿದ ನಂತರ ಹಾಳು ಮಾಡದೇ ಮೂರು ದಿನಗಳಲ್ಲಿ ವಾಪಸು ಮಾಡಿದರೆ ಪುಸ್ತಕ ದರದ ಶೇ 75ರಷ್ಟು ವಾಪಸು ನೀಡುತ್ತಾರೆ. 1 ವಾರದಲ್ಲಿ ವಾಪಸು ಮಾಡಿದರೆ ಶೇ 50, 3 ವಾರಗಳಲ್ಲಿ ವಾಪಸು ಮಾಡಿದರೆ ಶೇ 25 ದರ ವಾಪಸು ಮಾಡುತ್ತಾರೆ. ಅಂಥ ಪದ್ಧತಿ ನಮ್ಮಲ್ಲೂ ಬರಬೇಕು’ ಎಂದು ಸಲಹೆ ನೀಡಿದರು.</p>.<p>‘ಅಲ್ಲಿನ ನ್ಯಾಯಾಲಯದಲ್ಲಿ ಒಂದು ತೀರ್ಪು ಬಂದರೆ ಬರಹಗಾರರು ಜಾಲಾಡಿಸಿಬಿಡುತ್ತಾರೆ. ವಿಮರ್ಶಿಸುತ್ತಾರೆ. ಪ್ರಶ್ನೆ ಮಾಡುತ್ತಾರೆ. ಆ ಬಗ್ಗೆ ಪುಸ್ತಕವನ್ನೇ ತರುತ್ತಾರೆ. ಆದರೆ, ನಮ್ಮಲ್ಲಿ ತೀರ್ಪುಗಳನ್ನು ಓದುವ ಅಭ್ಯಾಸವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಬರವಣಿಗೆಯಲ್ಲಿ ಯಾರಿಗಾದರೂ ಮಾನನಷ್ಟ ಉಂಟು ಮಾಡಿದರೆ ಬರಹಗಾರನ ಜೊತೆಗೆ ಪ್ರಕಾಶಕನೂ ಜವಾಬ್ದಾರಿ. ಇಂಥ ಒಂದು ಮೊಕದ್ದಮೆ ಹೂಡಿದರೆ ಪ್ರಕಾಶಕ ದುಡಿದಿರುವುದನ್ನೆಲ್ಲ ಅದಕ್ಕೆ ವೆಚ್ಚ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.</p>.<p>ಕಾನೂನು ಪುಸ್ತಕದಿಂದ ‘ಕ್ರಿಮಿನಲ್ ಕಂಟೆಂಟ್ ಆಫ್ ಕೋರ್ಟ್’, ‘ಕ್ರಿಮಿನಲ್ ಡಿಫರ್ಮೇಶನ್’, ‘ಸೆಡಿಶನ್’ ತೆಗೆದು ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು.</p>.<p>ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು, ‘2020ನೇ ಸಾಲಿನ ಸಗಟು ಪುಸ್ತಕ ಖರೀದಿಯ ಹಣ ₹ 13 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. 3 ವರ್ಷಗಳಿಂದ ಪುಸ್ತಕ ಖರೀದಿಯಾಗಿಲ್ಲ. ಖರೀದಿಗೆ ಪುಟಕ್ಕೆ 40 ಪೈಸೆ ಹೆಚ್ಚಿಸಬೇಕು. ಹೈಟೆಕ್ ಗ್ರಂಥಾಲಯ ತೆರೆಯಬೇಕು’ ಎಂದು ಆಗ್ರಹಿಸಿದರು.</p>.<p>ಎನ್. ಜಗದೀಶ ಕೊಪ್ಪ ಅವರಿಗೆ ‘ಸಾಹಿತ್ಯ ರತ್ನ’, ರಂಜಿನಿ ರಾಘವನ್ ಅವರಿಗೆ ‘ಯುವ ಸಾಹಿತ್ಯ ರತ್ನ’, ಅಭಿರುಚಿ ಗಣೇಶ್ ಅವರಿಗೆ ‘ಪುಸ್ತಕ ರತ್ನ’, ಟಂಕಸಾಲ ಎಸ್. ನಾಗರಾಜ್ ಅವರಿಗೆ ‘ಮುದ್ರಣ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p>ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕಿ ಎಂ. ಕನಗವಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ. ಸಂಘದ ಕಾರ್ಯದರ್ಶಿ ಆರ್.ದೊಡ್ಡೆಗೌಡ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>