ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಂಬಿ ನಾರಾಯಣನ್, ‘ಇಸ್ರೊ ಇಂದು ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಸಾಧನೆ ಮಾಡಲು ವಿಕ್ರಮ್ ಸಾರಾಬಾಯಿ, ಡಾ.ಎಪಿಜೆ ಅಬ್ದುಲ್ ಕಲಾಂ, ಸತೀಶ್ ಧವನ್ ಹಾಗೂ ಯು.ಆರ್. ರಾವ್ ಅವರ ಕೊಡುಗೆ ಅಪಾರವಾಗಿದೆ. ಇವರೆಲ್ಲರೂ ಅದ್ಭುತ ವಿಜ್ಞಾನಿಗಳಾಗುವುದರ ಜೊತೆಗೆ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದರು’ ಎಂದು ಮೆಲುಕು ಹಾಕಿದರು.