ಮಡಿಕೇರಿ: ಇಲ್ಲಿನ ಅಶೋಕಪುರದ ಶ್ರೀ ಗಣಪತಿ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯನ್ನು ಸೋಮವಾರ ರಾತ್ರಿ ಅದ್ದೂರಿಯಾಗಿ ಇಲ್ಲಿನ ಗೌರಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಇದಕ್ಕೂ ಮುನ್ನ ನಡೆದ ಗಣೇಶ ಹಾಗೂ ಸುಬ್ರಹ್ಮಣ್ಯಸ್ವಾಮಿಯ ಮೂರು ಲೋಕ ಪ್ರದಕ್ಷಿಣೆಯ ಕಥಾಪ್ರಸಂಗ ಗಮನ ಸೆಳೆಯಿತು. 17 ಅಡಿ ಎತ್ತರದ ಪ್ರಭಾವಳಿ, 20 ಅಡಿ ಎತ್ತರದ ತ್ರಿಶೂಲ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು.
ನಂತರ ನಗರದ ರಾಜಬೀದಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಜನರು ಕುಣಿದು ಕುಪ್ಪಳಿಸಿದರು