<p><strong>ಬೆಂಗಳೂರು:</strong> ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಾನಂದಾ (21) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಕೃತ್ಯ ಎಸಗಿದ್ದ ಆರೋಪಿ ಕೃಷ್ಣಚಂದ್ ಶೇತಿಯನ್ನು (28) ಬಂಧಿಸಿದ್ದಾರೆ.</p>.<p>‘ಒಡಿಶಾದ ಕೃಷ್ಣಚಂದ್, ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಪಕ್ಕದ ಮನೆಯಲ್ಲಿ ವಾಸವಿದ್ದ ಮಹಾನಂದಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಂದಿದ್ದ. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕಲಬುರಗಿಯ ಮಹಾನಂದಾ, ಸಹೋದರಿ ಜೊತೆ ವಾಸವಿದ್ದರು. ಇಬ್ಬರೂ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ.10ರಂದು ಮಹಾನಂದಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆ.11ರಂದು ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ, ನೆರೆಮನೆಯ ನಿವಾಸಿ ಕೃಷ್ಣಚಂದ್ನೇ ಆರೋಪಿ ಎಂಬುದು ತಿಳಿಯಿತು’ ಎಂದು ವಿವರಿಸಿದರು.</p>.<p>‘ಕೃಷ್ಣಚಂದ್, ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿ ಜೊತೆ ನೆಲೆಸಿದ್ದ. ಪತ್ನಿ ಸಹ ಪೆಟ್ರೋಲ್ ಬಂಕ್ನಲ್ಲಿ ಮಹಾನಂದಾ ಜೊತೆ ಕೆಲಸ ಮಾಡುತ್ತಿದ್ದರು. ಅಕ್ಕ–ಪಕ್ಕದ ಮನೆಯವರಾಗಿದ್ದರಿಂದ ಎಲ್ಲರಿಗೂ ಪರಿಚಯವಿತ್ತು’ ಎಂದು ಹೇಳಿದರು.</p>.<p>ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ: ‘ಆ.10ರಂದು ಕೆಲಸಕ್ಕೆ ರಜೆ ಹಾಕಿದ್ದ ಮಹಾನಂದಾ ಮನೆಯಲ್ಲಿದ್ದರು. ಸಹೋದರಿ ಕೆಲಸಕ್ಕೆ ಹೋಗಿದ್ದರು. ಆರೋಪಿಯ ಪತ್ನಿ ಸಹ ಕೆಲಸಕ್ಕೆ ತೆರಳಿದ್ದರು. ಆರೋಪಿ ಮಾತ್ರ ಮನೆಯಲ್ಲಿದ್ದ’ ಎಂದು ಪೊಲೀಸರು ತಿಳಿಸಿದರು.</p>.<p>‘ಸಂಜೆ ಯುವತಿಯನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. <strong>ಬಿಡಿಸಿಕೊಳ್ಳಲು ಯತ್ನಿಸಿದ್ದ ಮಹಾನಂದಾ, ರಕ್ಷಣೆಗಾಗಿ ಕೂಗಾಡಿದ್ದರು. ಆಗ ಮೂಗು ಹಾಗೂ ಬಾಯಿ ಅದುಮಿ ಹಿಡಿದುಕೊಂಡಿದ್ದ. ನಂತರ, ಕುತ್ತು ಹಿಸುಕಿ ಕೊಂದಿದ್ದ’ ಎಂದು ಪೊಲೀಸರು ತಿಳಿಸಿದರು.</strong></p>.<p>‘ಮಹಾನಂದಾ ಮೃತದೇಹಕ್ಕೆ ಬೆಡ್ಶೀಟ್ ಸುತ್ತಿದ್ದ ಆರೋಪಿ, ಅದನ್ನು ನೀರಿನ ಡ್ರಮ್ನೊಳಗೆ ಇರಿಸಿ ಮುಚ್ಚಳ ಮುಚ್ಚಿದ್ದ. ತಡರಾತ್ರಿ ಕೆಲಸ ಮುಗಿಸಿ ಪತ್ನಿ ಮನೆಗೆ ಬಂದಾಗಲೂ ನೀರಿನ ಡ್ರಮ್ನಲ್ಲಿ ಮೃತದೇಹವಿತ್ತು’ ಎಂದು ಹೇಳಿದರು.</p>.<p>‘ತನಿಖೆಯ ಸಂದರ್ಭದಲ್ಲಿ ಪತಿ ಕೃಷ್ಣಚಂದ್ನೇ ಮಹಾನಂದಾ ಕೊಲೆ ಮಾಡಿರುವುದಾಗಿ ಆತನ ಪತ್ನಿ ಬಾಯ್ಬಿಟ್ಟಿದ್ದರು. ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಾನಂದಾ (21) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಕೃತ್ಯ ಎಸಗಿದ್ದ ಆರೋಪಿ ಕೃಷ್ಣಚಂದ್ ಶೇತಿಯನ್ನು (28) ಬಂಧಿಸಿದ್ದಾರೆ.</p>.<p>‘ಒಡಿಶಾದ ಕೃಷ್ಣಚಂದ್, ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಪಕ್ಕದ ಮನೆಯಲ್ಲಿ ವಾಸವಿದ್ದ ಮಹಾನಂದಾ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಂದಿದ್ದ. ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಕಲಬುರಗಿಯ ಮಹಾನಂದಾ, ಸಹೋದರಿ ಜೊತೆ ವಾಸವಿದ್ದರು. ಇಬ್ಬರೂ ಪೆಟ್ರೋಲ್ ಬಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ.10ರಂದು ಮಹಾನಂದಾ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆ.11ರಂದು ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ, ನೆರೆಮನೆಯ ನಿವಾಸಿ ಕೃಷ್ಣಚಂದ್ನೇ ಆರೋಪಿ ಎಂಬುದು ತಿಳಿಯಿತು’ ಎಂದು ವಿವರಿಸಿದರು.</p>.<p>‘ಕೃಷ್ಣಚಂದ್, ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿ ಜೊತೆ ನೆಲೆಸಿದ್ದ. ಪತ್ನಿ ಸಹ ಪೆಟ್ರೋಲ್ ಬಂಕ್ನಲ್ಲಿ ಮಹಾನಂದಾ ಜೊತೆ ಕೆಲಸ ಮಾಡುತ್ತಿದ್ದರು. ಅಕ್ಕ–ಪಕ್ಕದ ಮನೆಯವರಾಗಿದ್ದರಿಂದ ಎಲ್ಲರಿಗೂ ಪರಿಚಯವಿತ್ತು’ ಎಂದು ಹೇಳಿದರು.</p>.<p>ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ: ‘ಆ.10ರಂದು ಕೆಲಸಕ್ಕೆ ರಜೆ ಹಾಕಿದ್ದ ಮಹಾನಂದಾ ಮನೆಯಲ್ಲಿದ್ದರು. ಸಹೋದರಿ ಕೆಲಸಕ್ಕೆ ಹೋಗಿದ್ದರು. ಆರೋಪಿಯ ಪತ್ನಿ ಸಹ ಕೆಲಸಕ್ಕೆ ತೆರಳಿದ್ದರು. ಆರೋಪಿ ಮಾತ್ರ ಮನೆಯಲ್ಲಿದ್ದ’ ಎಂದು ಪೊಲೀಸರು ತಿಳಿಸಿದರು.</p>.<p>‘ಸಂಜೆ ಯುವತಿಯನ್ನು ಮನೆಯೊಳಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. <strong>ಬಿಡಿಸಿಕೊಳ್ಳಲು ಯತ್ನಿಸಿದ್ದ ಮಹಾನಂದಾ, ರಕ್ಷಣೆಗಾಗಿ ಕೂಗಾಡಿದ್ದರು. ಆಗ ಮೂಗು ಹಾಗೂ ಬಾಯಿ ಅದುಮಿ ಹಿಡಿದುಕೊಂಡಿದ್ದ. ನಂತರ, ಕುತ್ತು ಹಿಸುಕಿ ಕೊಂದಿದ್ದ’ ಎಂದು ಪೊಲೀಸರು ತಿಳಿಸಿದರು.</strong></p>.<p>‘ಮಹಾನಂದಾ ಮೃತದೇಹಕ್ಕೆ ಬೆಡ್ಶೀಟ್ ಸುತ್ತಿದ್ದ ಆರೋಪಿ, ಅದನ್ನು ನೀರಿನ ಡ್ರಮ್ನೊಳಗೆ ಇರಿಸಿ ಮುಚ್ಚಳ ಮುಚ್ಚಿದ್ದ. ತಡರಾತ್ರಿ ಕೆಲಸ ಮುಗಿಸಿ ಪತ್ನಿ ಮನೆಗೆ ಬಂದಾಗಲೂ ನೀರಿನ ಡ್ರಮ್ನಲ್ಲಿ ಮೃತದೇಹವಿತ್ತು’ ಎಂದು ಹೇಳಿದರು.</p>.<p>‘ತನಿಖೆಯ ಸಂದರ್ಭದಲ್ಲಿ ಪತಿ ಕೃಷ್ಣಚಂದ್ನೇ ಮಹಾನಂದಾ ಕೊಲೆ ಮಾಡಿರುವುದಾಗಿ ಆತನ ಪತ್ನಿ ಬಾಯ್ಬಿಟ್ಟಿದ್ದರು. ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>