ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಸೇವೆಯಿಂದ ಸ್ವಯಂನಿವೃತ್ತಿ ಪಡೆದಿದ್ದ ಒಬ್ಬ ವ್ಯಕ್ತಿಗೆ ಎಲ್ಲ ರೀತಿಯ ಸಹಕಾರವನ್ನೂ ನೀಡಿ, ಶಾಸಕನನ್ನಾಗಿ ಮಾಡಿದ್ದು ಬಿಎಸ್ಪಿ. ಓಡಾಡಲು ಅವರ ಬಳಿ ಕಾರು ಇರಲಿಲ್ಲ. ಕೆಎಸ್ಆರ್ಟಿಸಿ ಬಸ್ನಲ್ಲಿ ಓಡಾಡುತ್ತಿದ್ದರು. ಮೂರು ಕಾರುಗಳನ್ನು ಪಕ್ಷದಿಂದ ನೀಡಿದೆವು. ಎಲ್ಲ ಅವಕಾಶಗಳನ್ನೂ ಪಡೆದು, ಬಿಜೆಪಿಗೆ ವಲಸೆ ಹೋಗಿರುವ ಮಹೇಶ್ ಈಗ ಬಿಎಸ್ಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.