ರಾಕೇಶ್ ಸಿಂಗ್ ಅವರು ಮೂರು ತಿಂಗಳು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ 2021ರಲ್ಲಿ ವರ್ಗಾವಣೆಗೊಂಡಾಗ ‘ಬಿಎಂಆರ್ಸಿಎಲ್ಗೆ ಪೂರ್ಣಾವಧಿಯ ಎಂ.ಡಿ ಬೇಕು’ ಎಂಬ ಕೂಗು ಎದ್ದಿತ್ತು. ಅಂಜುಂ ಪರ್ವೇಜ್ ಅವರನ್ನು ಬಿಎಂಆರ್ಸಿಎಲ್ಗೆ ವರ್ಗ ಮಾಡಿದಾಗ ಅವರಿಗೆ ಬೇರೆ ಹೆಚ್ಚುವರಿ ಹುದ್ದೆಗಳನ್ನು ನೀಡದೇ ಈ ಕೂಗಿಗೆ ಸ್ಪಂದಿಸಲಾಗಿತ್ತು. ಆದರೆ, ಮುಂದೆ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆಯ ಹೊಣೆ ನೀಡಲಾಗಿತ್ತು.