ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮನವರ ದೇವಾಲಯದಿಂದ ಬುಧವಾರ ರಾತ್ರಿ 1.40ಕ್ಕೆ ಹೊರಟ ಹೂವಿನ ಕರಗ, ಕೋಟೆಬೀದಿ, ಬೆಸ್ತರಬೀದಿ, ಕಾಮಾಕ್ಷಮ್ಮ ಬಡಾವಣೆ, ಹೊಸಬೀದಿ, ಗಾಂಧಿನಗರ, ಮನ್ವಂತರ ತೋಟ, ಡೌನ್ ಬಜಾರ್ ರಸ್ತೆ, ಮಾರುತಿನಗರ, ವೆಂಕಟಾಲ ಮತ್ತಿತರ ಬಡಾವಣೆಗಳಲ್ಲಿ ಸಂಚರಿಸಿ, ಗುರುವಾರ ಬೆಳಿಗ್ಗೆ 8 ಗಂಟೆಗೆ ಮತ್ತೆ ದೇವಾಲಯಕ್ಕೆ ಆಗಮಿಸಿತು.