ಮದ್ಯವ್ಯಸನಿಯಾದ ವಿನೋದ್, ಗುರುವಾರ ರಾತ್ರಿಯೂ ಪಾನಮತ್ತನಾಗಿ ಮನೆಗೆ ಬಂದಿದ್ದ. ನಸುಕಿನವರೆಗೂ ಮನೆಯಲ್ಲಿ ಗಲಾಟೆ ಮಾಡಿದ್ದ ಆತ, ಬುದ್ಧಿ ಹೇಳಲು ಬಂದ ತಾಯಿ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೆರಳಿದ ಸಂಜಯ್, ತರಕಾರಿ ಕತ್ತರಿಸಲು ಇಟ್ಟಿದ್ದ ಚಾಕು ತಂದು ಹೊಟ್ಟೆಗೆ ಇರಿದಿದ್ದ. ಕುಸಿದು ಬಿದ್ದ ಅಣ್ಣನನ್ನು ತಾನೇ ಆಸ್ಪತ್ರೆಗೆ ಕರೆದೊಯ್ದನಾದರೂ, ಮಾರ್ಗಮಧ್ಯೆಯೇ ವಿನೋದ್ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.