<p><strong>ಬೆಂಗಳೂರು:</strong>‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಇಂದಿರಾನಗರ ಮತ್ತು ವಿವೇಕಾನಂದ ರಸ್ತೆ ನಿಲ್ದಾಣದ ನಡುವೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಂಗಳವಾರ ರಾತ್ರಿ 10.15ರಿಂದ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.</p>.<p>ನಿಗಮವು ಮೊದಲೇ ಈ ಬಗ್ಗೆ ಹೇಳಿದ್ದರೂ, ಪ್ರಯಾಣಿಕರಿಗೆ ಮಾಹಿತಿ ಇರದ ಕಾರಣ, ಕೆಲವರು ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿಯವರೆಗೆ ಹೋಗಬೇಕಿತ್ತು. ಕೆಂಪೇಗೌಡ ನಿಲ್ದಾಣದಲ್ಲಿಯೇ ಈ ಬಗ್ಗೆ ಮಾಹಿತಿ ನೀಡಿದ್ದರೆ, ಅಲ್ಲಿಂದಲೇ ಬಸ್ ಮೂಲಕ ಬೈಯಪ್ಪನಹಳ್ಳಿಗೆ ಹೋಗುತ್ತಿದ್ದೆವು’ ಎಂದು ರಮೇಶ್ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಮೆಜೆಸ್ಟಿಕ್ನಲ್ಲಿ ನಮಗೆ ಟಿಕೆಟ್ ಕೊಡಲೇ ಬಾರದಿತ್ತು. ಈಗ ಆಟೊದವರು ನಿಗದಿಗಿಂತ ಹೆಚ್ಚು ದುಡ್ಡು ಕೇಳುತ್ತಿದ್ದಾರೆ’ ಎಂದು ಮಂಗಳಾ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಎಂ.ಜಿ. ರಸ್ತೆ ನಿಲ್ದಾಣದಿಂದ ಇಂದಿರಾನಗರ, ಬೈಯಪ್ಪನಹಳ್ಳಿ, ವಿವೇಕಾನಂದ ರಸ್ತೆಯ ಕಡೆಗೆ ಹೋಗುವವರು ಅನಿವಾರ್ಯವಾಗಿ ಆಟೊ, ಕ್ಯಾಬ್ಗಳ ಮೊರೆ ಹೋದರು.</p>.<p class="Subhead"><strong>ಬುಧವಾರವೂ ವ್ಯತ್ಯಯ:</strong>ಮೈಸೂರು ರಸ್ತೆ ನಿಲ್ದಾಣದಿಂದ ಎಂ.ಜಿ. ರಸ್ತೆಯವರೆಗೆ ಬುಧವಾರ ಬೆಳಿಗ್ಗೆ 5ರಿಂದಲೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಆದರೆ, ಎಂ.ಜಿ. ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿಯವರೆಗೆ 8 ಗಂಟೆಯ ನಂತರ ಸಂಚಾರ ಆರಂಭವಾಗಲಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಇಂದಿರಾನಗರ ಮತ್ತು ವಿವೇಕಾನಂದ ರಸ್ತೆ ನಿಲ್ದಾಣದ ನಡುವೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಂಗಳವಾರ ರಾತ್ರಿ 10.15ರಿಂದ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.</p>.<p>ನಿಗಮವು ಮೊದಲೇ ಈ ಬಗ್ಗೆ ಹೇಳಿದ್ದರೂ, ಪ್ರಯಾಣಿಕರಿಗೆ ಮಾಹಿತಿ ಇರದ ಕಾರಣ, ಕೆಲವರು ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿಯವರೆಗೆ ಹೋಗಬೇಕಿತ್ತು. ಕೆಂಪೇಗೌಡ ನಿಲ್ದಾಣದಲ್ಲಿಯೇ ಈ ಬಗ್ಗೆ ಮಾಹಿತಿ ನೀಡಿದ್ದರೆ, ಅಲ್ಲಿಂದಲೇ ಬಸ್ ಮೂಲಕ ಬೈಯಪ್ಪನಹಳ್ಳಿಗೆ ಹೋಗುತ್ತಿದ್ದೆವು’ ಎಂದು ರಮೇಶ್ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಮೆಜೆಸ್ಟಿಕ್ನಲ್ಲಿ ನಮಗೆ ಟಿಕೆಟ್ ಕೊಡಲೇ ಬಾರದಿತ್ತು. ಈಗ ಆಟೊದವರು ನಿಗದಿಗಿಂತ ಹೆಚ್ಚು ದುಡ್ಡು ಕೇಳುತ್ತಿದ್ದಾರೆ’ ಎಂದು ಮಂಗಳಾ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಎಂ.ಜಿ. ರಸ್ತೆ ನಿಲ್ದಾಣದಿಂದ ಇಂದಿರಾನಗರ, ಬೈಯಪ್ಪನಹಳ್ಳಿ, ವಿವೇಕಾನಂದ ರಸ್ತೆಯ ಕಡೆಗೆ ಹೋಗುವವರು ಅನಿವಾರ್ಯವಾಗಿ ಆಟೊ, ಕ್ಯಾಬ್ಗಳ ಮೊರೆ ಹೋದರು.</p>.<p class="Subhead"><strong>ಬುಧವಾರವೂ ವ್ಯತ್ಯಯ:</strong>ಮೈಸೂರು ರಸ್ತೆ ನಿಲ್ದಾಣದಿಂದ ಎಂ.ಜಿ. ರಸ್ತೆಯವರೆಗೆ ಬುಧವಾರ ಬೆಳಿಗ್ಗೆ 5ರಿಂದಲೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಆದರೆ, ಎಂ.ಜಿ. ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿಯವರೆಗೆ 8 ಗಂಟೆಯ ನಂತರ ಸಂಚಾರ ಆರಂಭವಾಗಲಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>