12 ಸ್ಥಳಗಳಲ್ಲಿ ಕರಕುಶಲ ಮಳಿಗೆ: ‘ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ತಿರುಪತಿ, ಅಯೋಧ್ಯೆ, ಉಡುಪಿ, ಶಿರಡಿ, ನವದೆಹಲಿ ಸೇರಿದಂತೆ ದೇಶದ 12 ಸ್ಥಳಗಳಲ್ಲಿನಿಗಮದ ವತಿಯಿಂದ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಕುರಿತು ಸವಿಸ್ತಾರವಾಗಿ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದುರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.