‘ಪರೀಕ್ಷೆ ಮಾಡಿಸಿಕೊಳ್ಳದಿರುವುದು, ಸೋಂಕು ಇರುವವರು ಫೋನ್ ಆಫ್ ಮಾಡಿಕೊಂಡಿರುವುದು, ಜನ ಆಡಿಕೊಳ್ಳುತ್ತಾರೆ ಎಂದು ಚಿಕಿತ್ಸೆಗೆ ಬರುತ್ತಿಲ್ಲ, ಇಂತಹವರಿಂದ ಸೋಂಕು ಹರಡುವುದು ಹೆಚ್ಚುತ್ತಿದೆ. ಸಮಸ್ಯೆ ತೀವ್ರವಾದಾಗ ಚಿಕಿತ್ಸೆಗೆ ಬರುತ್ತಿದ್ದಾರೆ. ಆಮ್ಲಜನಕ ಹಾಸಿಗೆ ಅವಶ್ಯಕತೆ ಇಲ್ಲದವರು ಅವಶ್ಯವಿರುವವರಿಗೆ ಬಿಟ್ಟುಕೊಡಬೇಕು. ಸುಮ್ಮನೆ ಆಸ್ಪತ್ರೆಗಳನ್ನು ಸುತ್ತುವ ಬದಲು ಆರೈಕೆ ಕೇಂದ್ರದಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಬೇರೆಡೆಗೆ ವರ್ಗಾಯಿಸಲಾಗುವುದು, ಸಮಸ್ಯೆ ಸೃಷ್ಟಿಸುವುದು ಬೇಡ’ ಎಂದರು.