<p><strong>ಬೆಂಗಳೂರು:</strong> ‘ನಮ್ಮ ಮೆಟ್ರೊ’ ಸೇವೆಯ ಅವಧಿಯನ್ನು ರಾತ್ರಿ 8 ಗಂಟೆ ಬಳಿಕವೂ ವಿಸ್ತರಿಸಬೇಕು ಎಂಬ ಬೇಡಿಕೆಗೆ ಸಚಿವರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>.<p class="Briefhead"><strong>‘11 ಗಂಟೆವರೆಗೂ ವಿಸ್ತರಿಸಬೇಕು’</strong></p>.<p>ರಾತ್ರಿ ಕರ್ಫ್ಯೂ 9 ಗಂಟೆವರೆಗೆ ಇದೆ. ಅಲ್ಲಿಯವರೆಗೆ ಅಂಗಡಿ ಮಳಿಗೆಗಳು, ಹೋಟೆಲ್ಗಳು ತೆರೆದೇ ಇರುತ್ತವೆ. ಇಂತಹ ಕಡೆ ಕೆಲಸ ಮಾಡುವ ಬಡವರು ಮನೆ ತಲುಪಲು ಸಮಸ್ಯೆ ಆಗುತ್ತಿದೆ. ಮೆಟ್ರೊ ಸೇವೆಯನ್ನು ರಾತ್ರಿ 8 ಗಂಟೆಗೆ ಸ್ಥಗಿತಗೊಳಿಸುವುದು ಅವೈಜ್ಞಾನಿಕ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹಾಗಾಗಿ ನಮ್ಮ ಮೆಟ್ರೊ ಸೇವೆಯನ್ನು ರಾತ್ರಿ 11 ಗಂಟೆ ವರೆಗೆ ವಿಸ್ತರಿಸಿದರೆ ಒಳ್ಳೆಯದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಾನು ಚರ್ಚಿಸುತ್ತೇನೆ. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ.</p>.<p><strong>ವಿ.ಸೋಮಣ್ಣ, <span class="Designate">ವಸತಿ ಸಚಿವ</span></strong></p>.<p class="Briefhead"><strong>***</strong></p>.<p class="Briefhead"><strong>‘ಸಿ.ಎಂ ಜತೆ ಸಮಾಲೋಚಿಸುವೆ’</strong></p>.<p>ರಾತ್ರಿ 8 ಗಂಟೆಗೆ ಮೆಟ್ರೊ ಸೇವೆ ಸ್ಥಗಿತಗೊಳ್ಳುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಅವಧಿ ವಿಸ್ತರಣೆಗೆ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.</p>.<p><strong>ಆರ್.ಅಶೋಕ,<span class="Designate"> ಕಂದಾಯ ಸಚಿವ</span></strong></p>.<p><strong><span class="Designate">***</span></strong></p>.<p class="Briefhead"><strong>‘ಮಧ್ಯಮ ವರ್ಗದ ಜನರಿಗೆ ಸಮಸ್ಯೆ’</strong></p>.<p>ಎಂಟು ಗಂಟೆಗೆ ಮೆಟ್ರೊ ಸೇವೆ ಸ್ಥಗಿತವಾಗುತ್ತಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ<br />ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ, ಸಂಚಾರದ ಅವಧಿಯನ್ನು ವಿಸ್ತರಿಸುವ ಅಗತ್ಯ ಇದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮಾಡುತ್ತೇನೆ.</p>.<p><strong>ಮುನಿರತ್ನ, <span class="Designate">ತೋಟಗಾರಿಕಾ ಸಚಿವ</span></strong></p>.<p><strong><span class="Designate">***</span></strong></p>.<p class="Briefhead"><strong>ಬಿಎಂಆರ್ಸಿಎಲ್ ಜೊತೆ ಪಿ.ಸಿ ಮೋಹನ್ ಚರ್ಚೆ</strong></p>.<p>ಸಂಸದ ಪಿ.ಸಿ.ಮೋಹನ್ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರನ್ನು ಗುರುವಾರ ಭೇಟಿ ಮಾಡಿ ಮೆಟ್ರೊ ಸೇವೆಯ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದರು.</p>.<p>‘ರಾತ್ರಿ 9 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹಾಗಾಗಿ ಮೆಟ್ರೊ ಸೇವೆಯನ್ನು ರಾತ್ರಿ 8ಕ್ಕೆ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅಂಜುಂ ಪರ್ವೇಜ್ ತಿಳಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಅವರಿಗೆ ವಿವರಿಸಿದ್ದೇನೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನವನ್ನೂ ಸೆಳೆಯುತ್ತೇನೆ. ಮೆಟ್ರೊ ಸೇವೆಯ ಅವಧಿ ವಿಸ್ತರಣೆ ಶೀಘ್ರವೇ ಕಾರ್ಯಗತವಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಮ್ಮ ಮೆಟ್ರೊ’ ಸೇವೆಯ ಅವಧಿಯನ್ನು ರಾತ್ರಿ 8 ಗಂಟೆ ಬಳಿಕವೂ ವಿಸ್ತರಿಸಬೇಕು ಎಂಬ ಬೇಡಿಕೆಗೆ ಸಚಿವರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್ಸಿಎಲ್) ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.</p>.<p class="Briefhead"><strong>‘11 ಗಂಟೆವರೆಗೂ ವಿಸ್ತರಿಸಬೇಕು’</strong></p>.<p>ರಾತ್ರಿ ಕರ್ಫ್ಯೂ 9 ಗಂಟೆವರೆಗೆ ಇದೆ. ಅಲ್ಲಿಯವರೆಗೆ ಅಂಗಡಿ ಮಳಿಗೆಗಳು, ಹೋಟೆಲ್ಗಳು ತೆರೆದೇ ಇರುತ್ತವೆ. ಇಂತಹ ಕಡೆ ಕೆಲಸ ಮಾಡುವ ಬಡವರು ಮನೆ ತಲುಪಲು ಸಮಸ್ಯೆ ಆಗುತ್ತಿದೆ. ಮೆಟ್ರೊ ಸೇವೆಯನ್ನು ರಾತ್ರಿ 8 ಗಂಟೆಗೆ ಸ್ಥಗಿತಗೊಳಿಸುವುದು ಅವೈಜ್ಞಾನಿಕ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಹಾಗಾಗಿ ನಮ್ಮ ಮೆಟ್ರೊ ಸೇವೆಯನ್ನು ರಾತ್ರಿ 11 ಗಂಟೆ ವರೆಗೆ ವಿಸ್ತರಿಸಿದರೆ ಒಳ್ಳೆಯದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಾನು ಚರ್ಚಿಸುತ್ತೇನೆ. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುತ್ತೇನೆ.</p>.<p><strong>ವಿ.ಸೋಮಣ್ಣ, <span class="Designate">ವಸತಿ ಸಚಿವ</span></strong></p>.<p class="Briefhead"><strong>***</strong></p>.<p class="Briefhead"><strong>‘ಸಿ.ಎಂ ಜತೆ ಸಮಾಲೋಚಿಸುವೆ’</strong></p>.<p>ರಾತ್ರಿ 8 ಗಂಟೆಗೆ ಮೆಟ್ರೊ ಸೇವೆ ಸ್ಥಗಿತಗೊಳ್ಳುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಅವಧಿ ವಿಸ್ತರಣೆಗೆ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.</p>.<p><strong>ಆರ್.ಅಶೋಕ,<span class="Designate"> ಕಂದಾಯ ಸಚಿವ</span></strong></p>.<p><strong><span class="Designate">***</span></strong></p>.<p class="Briefhead"><strong>‘ಮಧ್ಯಮ ವರ್ಗದ ಜನರಿಗೆ ಸಮಸ್ಯೆ’</strong></p>.<p>ಎಂಟು ಗಂಟೆಗೆ ಮೆಟ್ರೊ ಸೇವೆ ಸ್ಥಗಿತವಾಗುತ್ತಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ<br />ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ, ಸಂಚಾರದ ಅವಧಿಯನ್ನು ವಿಸ್ತರಿಸುವ ಅಗತ್ಯ ಇದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮಾಡುತ್ತೇನೆ.</p>.<p><strong>ಮುನಿರತ್ನ, <span class="Designate">ತೋಟಗಾರಿಕಾ ಸಚಿವ</span></strong></p>.<p><strong><span class="Designate">***</span></strong></p>.<p class="Briefhead"><strong>ಬಿಎಂಆರ್ಸಿಎಲ್ ಜೊತೆ ಪಿ.ಸಿ ಮೋಹನ್ ಚರ್ಚೆ</strong></p>.<p>ಸಂಸದ ಪಿ.ಸಿ.ಮೋಹನ್ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರನ್ನು ಗುರುವಾರ ಭೇಟಿ ಮಾಡಿ ಮೆಟ್ರೊ ಸೇವೆಯ ಅವಧಿ ವಿಸ್ತರಿಸುವಂತೆ ಒತ್ತಾಯಿಸಿದರು.</p>.<p>‘ರಾತ್ರಿ 9 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹಾಗಾಗಿ ಮೆಟ್ರೊ ಸೇವೆಯನ್ನು ರಾತ್ರಿ 8ಕ್ಕೆ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅಂಜುಂ ಪರ್ವೇಜ್ ತಿಳಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಅವರಿಗೆ ವಿವರಿಸಿದ್ದೇನೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನವನ್ನೂ ಸೆಳೆಯುತ್ತೇನೆ. ಮೆಟ್ರೊ ಸೇವೆಯ ಅವಧಿ ವಿಸ್ತರಣೆ ಶೀಘ್ರವೇ ಕಾರ್ಯಗತವಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>