ಬೆಂಗಳೂರು: ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸೂಮರ್ ಪ್ರೊಟೆಕ್ಷನ್ಗೆ (ಟಿಎಎಫ್ಸಿಒಪಿ) ಕರ್ನಾಟಕದಿಂದಲೇ 2.95 ಲಕ್ಷ ದೂರುಗಳು ಬಂದಿವೆ.
ಜನರು ಬೇರೆ ಬೇರೆ ಕೆಲಸಕ್ಕೆ ಆಧಾರ್ ಕಾರ್ಡ್ ಸಲ್ಲಿಕೆ ಮಾಡುತ್ತಾರೆ. ಅದೇ ದಾಖಲೆಯನ್ನು ಸೈಬರ್ ವಂಚಕರು ಹಾಗೂ ಕಳ್ಳರು ಪಡೆದು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ದಾಖಲೆ ದುರುಪಯೋಗ ಮಾಡಿಕೊಂಡಿರುವ ಸಂಬಂಧ ರಾಜ್ಯದಲ್ಲಿ 2,95,040 ದೂರುಗಳು ಬಂದಿವೆ. ಅದರಲ್ಲಿ 2,82,455 ದೂರುಗಳನ್ನು ಪರಿಹರಿಸಲಾಗಿದೆ. 12,585 ದೂರುಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ರಾಜ್ಯದಲ್ಲಿ 2,28,613 ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಲಾಗಿದೆ. ಈ ಪೈಕಿ 1,07,407 ಮೊಬೈಲ್ಗಳು ಇರುವ ಸ್ಥಳವನ್ನು ನೆಟ್ವರ್ಕ್ ಮೂಲಕ ಪತ್ತೆ ಮಾಡಲಾಗಿದೆ. ಈ ಪೈಕಿ 35,945 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.
ದೇಶದಾದ್ಯಂತ ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ 69,66,697 ದೂರುಗಳು ಬಂದಿವೆ. ಆ ಪೈಕಿ 60,29,631 ದೂರುಗಳಿಗೆ ಪರಿಹಾರ ಸಿಕ್ಕಿದ್ದು, 9,37,066 ದೂರುಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಟಿಎಎಫ್ಸಿಒಪಿ ತಿಳಿಸಿದೆ.