<p><strong>ಬೆಂಗಳೂರು</strong>: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವಕರೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಯುವತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಸ್ಥಳೀಯ ನಿವಾಸಿ ಸಾದಿಯಾ, ಸುಹೈಲ್ ಹಾಗೂ ಉಮರ್ ಬಂಧಿತರು. ಹಲ್ಲೆಗೀಡಾಗಿದ್ದ ಇಮ್ರಾನ್ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೂರುದಾರ ಇಮ್ರಾನ್, ಮೊಬೈಲ್ ಫ್ಲ್ಯಾಶ್ ಬಗ್ಗೆ ತಿಳಿದುಕೊಂಡಿದ್ದ. ಕೆಲ ಯುವಕರನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸುತ್ತಿದ್ದ ಸಾದಿಯಾ, ಅದೇ ಮೊಬೈಲ್ಗಳನ್ನು ಇಮ್ರಾನ್ಗೆ ಕೊಟ್ಟು ಫ್ಲ್ಯಾಶ್ ಮಾಡಿಸುತ್ತಿದ್ದರು. ಪರಿಚಯಸ್ಥರ ಮೊಬೈಲ್ ಎಂಬುದಾಗಿ ಇಮ್ರಾನ್ಗೆ ಸುಳ್ಳು ಹೇಳುತ್ತಿದ್ದರು.’</p>.<p>‘ಸಾದಿಯಾ ಕಳ್ಳತನದ ಮೊಬೈಲ್ ತರುತ್ತಿದ್ದ ಸಂಗತಿ ಇತ್ತೀಚೆಗೆ ಇಮ್ರಾನ್ಗೆ ಗೊತ್ತಾಗಿತ್ತು. ಹೀಗಾಗಿ, ಫ್ಲ್ಯಾಶ್ ಮಾಡಲು ನಿರಾಕರಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಸಾದಿಯಾ ಹಾಗೂ ಇತರರು, ಇಮ್ರಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಇಮ್ರಾನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವಕರೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಯುವತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>‘ಸ್ಥಳೀಯ ನಿವಾಸಿ ಸಾದಿಯಾ, ಸುಹೈಲ್ ಹಾಗೂ ಉಮರ್ ಬಂಧಿತರು. ಹಲ್ಲೆಗೀಡಾಗಿದ್ದ ಇಮ್ರಾನ್ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ದೂರುದಾರ ಇಮ್ರಾನ್, ಮೊಬೈಲ್ ಫ್ಲ್ಯಾಶ್ ಬಗ್ಗೆ ತಿಳಿದುಕೊಂಡಿದ್ದ. ಕೆಲ ಯುವಕರನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸುತ್ತಿದ್ದ ಸಾದಿಯಾ, ಅದೇ ಮೊಬೈಲ್ಗಳನ್ನು ಇಮ್ರಾನ್ಗೆ ಕೊಟ್ಟು ಫ್ಲ್ಯಾಶ್ ಮಾಡಿಸುತ್ತಿದ್ದರು. ಪರಿಚಯಸ್ಥರ ಮೊಬೈಲ್ ಎಂಬುದಾಗಿ ಇಮ್ರಾನ್ಗೆ ಸುಳ್ಳು ಹೇಳುತ್ತಿದ್ದರು.’</p>.<p>‘ಸಾದಿಯಾ ಕಳ್ಳತನದ ಮೊಬೈಲ್ ತರುತ್ತಿದ್ದ ಸಂಗತಿ ಇತ್ತೀಚೆಗೆ ಇಮ್ರಾನ್ಗೆ ಗೊತ್ತಾಗಿತ್ತು. ಹೀಗಾಗಿ, ಫ್ಲ್ಯಾಶ್ ಮಾಡಲು ನಿರಾಕರಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಸಾದಿಯಾ ಹಾಗೂ ಇತರರು, ಇಮ್ರಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಇಮ್ರಾನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>