ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 76 ಸಾವಿರ ನಗದು ಎಗರಿಸಿದ ಅಪರಿಚಿತರು

Last Updated 18 ಜುಲೈ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್‌ ಆ್ಯಂಡ್‌ ಟಿ ಕಂಪನಿ’ಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆಗೆ ಸೆಳೆದ ಇಬ್ಬರು ಅಪರಿಚಿತರು, ₹ 76 ಸಾವಿರ ನಗದು ಮತ್ತು ಮೊಬೈಲ್‌ ಕಳವು ಮಾಡಿ ಪರಾರಿಯಾದ ಘಟನೆ ವರ್ತೂರು ಮುಖ್ಯ ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ಬಳಿ ನಡೆದಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ನಿವಾಸಿ, ವರ್ತೂರು ಬಳಿಯ ವಿನಾಯಕ ನಗರದಲ್ಲಿ ನೆಲೆಸಿರುವ ಹಿಜಾದುಲ್‌ ಶೇಖ್‌ ಅವರು ಹಣ ಮತ್ತು ಮೊಬೈಲ್‌ ಕಳೆದುಕೊಂಡವರು. ಈ ಬಗ್ಗೆ ವರ್ತೂರು ಠಾಣೆಗೆ ಹಿಜಾದುಲ್‌ ದೂರು ನೀಡಿದ್ದಾರೆ.

‘ಎಟಿಎಂನಿಂದ ಹಣ ತೆಗೆಯುತ್ತಿದ್ದಾಗ ನನ್ನ ಬಳಿಗೆ ಬಂದ ಅಪರಿಚಿತನೊಬ್ಬ, ನಾನೂ ನಿಮ್ಮ ಊರಿನವನೇ ಎಂದು ಪರಿಚಯಿಸಿಕೊಂಡಿದ್ದ. ಅದೇ ಸಂದರ್ಭದಲ್ಲಿ ನನ್ನ ಹಿಂಭಾಗದಿಂದ ಬಂದ ವ್ಯಕ್ತಿಯೊಬ್ಬ, ವಿಜಯಾ ಬ್ಯಾಂಕ್‌, ಐಸಿಐಸಿಐ ಮತ್ತು ಬೇರೊಂದು ಬ್ಯಾಂಕಿನ ಎಟಿಎಂನಿಂದ ನಾನು ತೆಗೆದು ಇಟ್ಟುಕೊಂಡಿದ್ದ ಹಣ ಮತ್ತು ಮೊಬೈಲ್‌ ಎಗರಿಸಿ ಪರಾರಿಯಾಗಿದ್ದಾನೆ. ಬಳಿಕ ನನ್ನ ಜೊತೆಗಿದ್ದ ಅಪರಿಚಿತ ವ್ಯಕ್ತಿಯೂ ಹೋಗಿದ್ದಾನೆ’ ಎಂದು ದೂರಿನಲ್ಲಿ ಹಿಜಾದುಲ್‌ ಶೇಖ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT