ಶಾಂತನಪುರ ಭೂವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ’1956ರಲ್ಲಿ ಸರ್ಕಾರ ಮಂಜೂರು ಮಾಡಿದ ಭೂಮಿಗೆ ನಮ್ಮ ತಾತ ಹಣ ಪಾವತಿಸಿದ್ದಾರೆ. ಆದರೆ, 14 ವರ್ಷದಿಂದ ಎಂಟಿಬಿ ನಾಗರಾಜ್ ಇದನ್ನೇ ಮಾತನಾಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿದ್ದಾಗ ಅವರದೇ ಸರ್ಕಾರ ರಾಜ್ಯದಲ್ಲಿ ಇದ್ದರೂ ಇದರ ಬಗ್ಗೆ ತನಿಖೆ ನಡೆಸಿ ಏಕೆ ವಶಪಡಿಸಿಕೊಳ್ಳಲಿಲ್ಲ’ ಎಂದು ಸವಾಲು ಹಾಕಿದರು.