<p><strong>ಬೆಂಗಳೂರು: ‘</strong>ಹೊಸ ಭಾರತ ನಿರ್ಮಿಸುತ್ತೇವೆ ಎಂದು ಸಂವಿಧಾನದ ಮೂಲಕ ನಾವು ಕಟ್ಟಿಕೊಂಡಿರುವ ಕನಸು ಆತಂಕದ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಇಂತಹ ಆಶಯಗಳನ್ನು ಉಳಿಸಲು ಶರಣರು ಮಾಡಿದ ತ್ಯಾಗವನ್ನು ನಟರಾಜ್ ಹುಳಿಯಾರ್ ಅವರು ತಮ್ಮ ‘ಮುಂದಣ ಕಥನ’ದಲ್ಲಿ ರೂಪಕದಂತೆ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿದರು.</p>.<p>ನಗರದಲ್ಲಿ ಮಂಗಳವಾರ ನಡೆದ ನಟರಾಜ್ ಹುಳಿಯಾರ್ ಅವರ ‘ಮುಂದಣ ಕಥನ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’, ‘ಮತ್ತೊಬ್ಬ ಸರ್ವಾಧಿಕಾರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಚನಗಳ ಕಟ್ಟುಗಳ ಉಳಿವಿಗಾಗಿ ಶರಣರು ಹೋರಾಡುವ ವಿಧಾನ, ಪ್ರಾಣ ನೀಡಿಯಾದರೂ ಕಾಪಾಡಿಕೊಳ್ಳುವ ವಿಧಾನ ಇಂದಿನ ವಾಸ್ತವವನ್ನು ಪ್ರತಿನಿಧಿಸುತ್ತದೆ’ ಎಂದರು.</p>.<p>ಲೇಖಕ ನಟರಾಜ್ ಹುಳಿಯಾರ್, ‘ನಾವಿಂದು ಹೆಚ್ಚು ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಈ ಹಿಂದೆ, ಬಸವಣ್ಣನವರಿಗೂ, ಗಾಂಧೀಜಿಗೂ ಬೆದರಿಕೆಯಿತ್ತು. ಇಂದು ದೊರೆಸ್ವಾಮಿಯವರನ್ನೂ ದೂರುತ್ತಿರುವುದು ಬೇಸರದ ಸಂಗತಿ’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಮಾಲತೇಶ ಬಡಿಗೇರ, ಪ್ರಕಾಶಕ ಪಲ್ಲವ ವೆಂಕಟೇಶ್, ಅಧ್ಯಾಪಕ ದೇವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಹೊಸ ಭಾರತ ನಿರ್ಮಿಸುತ್ತೇವೆ ಎಂದು ಸಂವಿಧಾನದ ಮೂಲಕ ನಾವು ಕಟ್ಟಿಕೊಂಡಿರುವ ಕನಸು ಆತಂಕದ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಇಂತಹ ಆಶಯಗಳನ್ನು ಉಳಿಸಲು ಶರಣರು ಮಾಡಿದ ತ್ಯಾಗವನ್ನು ನಟರಾಜ್ ಹುಳಿಯಾರ್ ಅವರು ತಮ್ಮ ‘ಮುಂದಣ ಕಥನ’ದಲ್ಲಿ ರೂಪಕದಂತೆ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿದರು.</p>.<p>ನಗರದಲ್ಲಿ ಮಂಗಳವಾರ ನಡೆದ ನಟರಾಜ್ ಹುಳಿಯಾರ್ ಅವರ ‘ಮುಂದಣ ಕಥನ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’, ‘ಮತ್ತೊಬ್ಬ ಸರ್ವಾಧಿಕಾರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಚನಗಳ ಕಟ್ಟುಗಳ ಉಳಿವಿಗಾಗಿ ಶರಣರು ಹೋರಾಡುವ ವಿಧಾನ, ಪ್ರಾಣ ನೀಡಿಯಾದರೂ ಕಾಪಾಡಿಕೊಳ್ಳುವ ವಿಧಾನ ಇಂದಿನ ವಾಸ್ತವವನ್ನು ಪ್ರತಿನಿಧಿಸುತ್ತದೆ’ ಎಂದರು.</p>.<p>ಲೇಖಕ ನಟರಾಜ್ ಹುಳಿಯಾರ್, ‘ನಾವಿಂದು ಹೆಚ್ಚು ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಈ ಹಿಂದೆ, ಬಸವಣ್ಣನವರಿಗೂ, ಗಾಂಧೀಜಿಗೂ ಬೆದರಿಕೆಯಿತ್ತು. ಇಂದು ದೊರೆಸ್ವಾಮಿಯವರನ್ನೂ ದೂರುತ್ತಿರುವುದು ಬೇಸರದ ಸಂಗತಿ’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಮಾಲತೇಶ ಬಡಿಗೇರ, ಪ್ರಕಾಶಕ ಪಲ್ಲವ ವೆಂಕಟೇಶ್, ಅಧ್ಯಾಪಕ ದೇವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>