<p><strong>ಬೆಂಗಳೂರು</strong>: ‘ನನಗಿಂತಲೂ ಆರ್ಎಸ್ಎಸ್ನಲ್ಲಿ ನೀವೇ ಹಳಬರು. ‘ನಮಸ್ತೆ ಸದಾ ವತ್ಸಲೇ’ ಗೀತೆ ಮೊದಲು ಕಲಿತವರೇ ನೀವು’ ಎಂದು ಬಿಜೆಪಿಯ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.</p>.<p>ಆರ್.ಆರ್. ನಗರದ ಶಾಸಕ ಮುನಿರತ್ನ ಅವರು ಸುಮನಹಳ್ಳಿ ಮೇಲ್ಸೇತುವೆ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕೆಟ್ಟುಹೋಗಿರುವ ಬಗ್ಗೆ ಪ್ರಸ್ತಾಪಿಸಿದರು. ‘ಬೀದಿ ದೀಪಗಳನ್ನು ಸರಿಪಡಿಸಿರುವುದಾಗಿ ಸರ್ಕಾರ ಉತ್ತರ ನೀಡಿದೆ. ಆದರೆ, ಅಲ್ಲಿ ದೀಪಗಳೇ ಇಲ್ಲದಿದ್ದಾಗ ಸರಿಪಡಿಸುವ ಮಾತೆಲ್ಲಿ ಬರುತ್ತದೆ’ ಎಂದು ಪ್ರಶ್ನಿಸಿದರು.</p>.<p>‘ನನ್ನ ಕ್ಷೇತ್ರ ವರ್ತುಲ ರಸ್ತೆಯ 30 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ. ಸಂಜೆ ಸ್ವಿಚ್ ಹಾಕಿದರೂ ದೀಪಗಳು ಉರಿಯುವುದಿಲ್ಲ. ನೂರು ಲೈಟ್ ಇದ್ದರೆ ಅದರಲ್ಲಿ ಅರವತ್ತು ಉರಿಯುತ್ತವೆ’ ಎಂದರು.</p>.<p>ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ಶಿವಕುಮಾರ್, ಹಳೆಯ ಘಟನೆ ನೆನಪಿಸಿದರು. ‘ನಿಮ್ಮ ಕ್ಷೇತ್ರದ ಸಮಸ್ಯೆ ಆಲಿಸಲು ನಾವು ಸಭೆ ಕರೆದಿದ್ದೆವು. ಆದರೆ, ನೀವು ಆ ಸಭೆಗೆ ಟೋಪಿ ಹಾಕಿಕೊಂಡು ಬಂದು ಏನೇನೊ ಮಾಡಿದಿರಿ’ ಎಂದು ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, ‘ಮೂಗು ಇರೋವರೆಗೂ ನೆಗಡಿ ಹೋಗೋದಿಲ್ಲ. ಅದು ನಡೆಯುತ್ತಲೇ ಇರುತ್ತೆ ಬಿಡಿ ಸರ್’ ಎಂದರು.</p>.<p>ತಕ್ಷಣವೇ ಶಿವಕುಮಾರ್, ‘ಅದು ನಿಮ್ಮ ಚರಿತ್ರೆಯಲ್ಲೇ ಬಂದುಬಿಟ್ಟಿದೆ’ ಎಂದು ಟಾಂಗ್ ನೀಡಿದರು. ‘ಅದು ಹೋಗೋದಿಲ್ಲ ಬಿಡಿ ಸರ್, ಈಗ ಸಮಸ್ಯೆ ಬಗ್ಗೆ ಹೇಳಿ’ ಎಂದು ಮುನಿರತ್ನ ಪ್ರತಿಕ್ರಿಯಿಸಿದರು.</p>.<p>ಅದಕ್ಕೆ ಶಿವಕುಮಾರ್, ‘ಬಾ ಅಂತಾ ಕರೆದರೆ ಚಡ್ಡಿ ಹಾಕಿಕೊಂಡು ಕುಳಿತುಕೊಂಡೆ. ನಿನ್ನ ಆ ರೂಪಕ್ಕೆ ಉತ್ತರ ಕೊಡಬೇಕಲ್ವಾ ನಾನು? ಟೋಪಿ ಹಾಕಬೇಡ ಅಂತಾ ಹೇಳೋದಿಲ್ಲ, ಹಾಕು, ನಿನಗೆ ಅದು ಹೊಸತು’ ಎಂದು ತಿರುಗೇಟು ನೀಡಿದರು.</p>.<p>ಆಗ ಮುನಿರತ್ನ, ‘ನೀವು ನನಗಿಂತಲೂ ಆರ್ಎಸ್ಎಸ್ಗೆ ಹಳಬರು ಸರ್. ‘ನಮಸ್ತೆ ಸದಾ ವತ್ಸಲೇ’ ಗೀತೆಯನ್ನು ಹಾಡಿದ್ದೀರಿ. ಆರ್ಎಸ್ಎಸ್ ಗೀತೆಯನ್ನು ಫಸ್ಟ್ ನೀವು ಕಲಿತವರು, ನೀವು ಸೀನಿಯರ್’ ಎಂದು ಚಾಟಿ ಬೀಸಿದರು.</p>.<p>ನಗುತ್ತಲೇ ಉತ್ತರಿಸಿದ ಶಿವಕುಮಾರ್, ‘ನನ್ನ ಗರಡಿಯಲ್ಲಿ ನೀನು ಕಲಿತವನು. ನಿನ್ನ ಕ್ಷೇತ್ರದ ಬಗ್ಗೆ ಚರ್ಚಿಸಲು ಗೌರವದಿಂದ ಕರೆದಿದ್ದೆವು’ ಎಂದು ಚರ್ಚೆಗೆ ಅಂತ್ಯ ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನನಗಿಂತಲೂ ಆರ್ಎಸ್ಎಸ್ನಲ್ಲಿ ನೀವೇ ಹಳಬರು. ‘ನಮಸ್ತೆ ಸದಾ ವತ್ಸಲೇ’ ಗೀತೆ ಮೊದಲು ಕಲಿತವರೇ ನೀವು’ ಎಂದು ಬಿಜೆಪಿಯ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.</p>.<p>ಆರ್.ಆರ್. ನಗರದ ಶಾಸಕ ಮುನಿರತ್ನ ಅವರು ಸುಮನಹಳ್ಳಿ ಮೇಲ್ಸೇತುವೆ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕೆಟ್ಟುಹೋಗಿರುವ ಬಗ್ಗೆ ಪ್ರಸ್ತಾಪಿಸಿದರು. ‘ಬೀದಿ ದೀಪಗಳನ್ನು ಸರಿಪಡಿಸಿರುವುದಾಗಿ ಸರ್ಕಾರ ಉತ್ತರ ನೀಡಿದೆ. ಆದರೆ, ಅಲ್ಲಿ ದೀಪಗಳೇ ಇಲ್ಲದಿದ್ದಾಗ ಸರಿಪಡಿಸುವ ಮಾತೆಲ್ಲಿ ಬರುತ್ತದೆ’ ಎಂದು ಪ್ರಶ್ನಿಸಿದರು.</p>.<p>‘ನನ್ನ ಕ್ಷೇತ್ರ ವರ್ತುಲ ರಸ್ತೆಯ 30 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ. ಸಂಜೆ ಸ್ವಿಚ್ ಹಾಕಿದರೂ ದೀಪಗಳು ಉರಿಯುವುದಿಲ್ಲ. ನೂರು ಲೈಟ್ ಇದ್ದರೆ ಅದರಲ್ಲಿ ಅರವತ್ತು ಉರಿಯುತ್ತವೆ’ ಎಂದರು.</p>.<p>ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ಶಿವಕುಮಾರ್, ಹಳೆಯ ಘಟನೆ ನೆನಪಿಸಿದರು. ‘ನಿಮ್ಮ ಕ್ಷೇತ್ರದ ಸಮಸ್ಯೆ ಆಲಿಸಲು ನಾವು ಸಭೆ ಕರೆದಿದ್ದೆವು. ಆದರೆ, ನೀವು ಆ ಸಭೆಗೆ ಟೋಪಿ ಹಾಕಿಕೊಂಡು ಬಂದು ಏನೇನೊ ಮಾಡಿದಿರಿ’ ಎಂದು ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, ‘ಮೂಗು ಇರೋವರೆಗೂ ನೆಗಡಿ ಹೋಗೋದಿಲ್ಲ. ಅದು ನಡೆಯುತ್ತಲೇ ಇರುತ್ತೆ ಬಿಡಿ ಸರ್’ ಎಂದರು.</p>.<p>ತಕ್ಷಣವೇ ಶಿವಕುಮಾರ್, ‘ಅದು ನಿಮ್ಮ ಚರಿತ್ರೆಯಲ್ಲೇ ಬಂದುಬಿಟ್ಟಿದೆ’ ಎಂದು ಟಾಂಗ್ ನೀಡಿದರು. ‘ಅದು ಹೋಗೋದಿಲ್ಲ ಬಿಡಿ ಸರ್, ಈಗ ಸಮಸ್ಯೆ ಬಗ್ಗೆ ಹೇಳಿ’ ಎಂದು ಮುನಿರತ್ನ ಪ್ರತಿಕ್ರಿಯಿಸಿದರು.</p>.<p>ಅದಕ್ಕೆ ಶಿವಕುಮಾರ್, ‘ಬಾ ಅಂತಾ ಕರೆದರೆ ಚಡ್ಡಿ ಹಾಕಿಕೊಂಡು ಕುಳಿತುಕೊಂಡೆ. ನಿನ್ನ ಆ ರೂಪಕ್ಕೆ ಉತ್ತರ ಕೊಡಬೇಕಲ್ವಾ ನಾನು? ಟೋಪಿ ಹಾಕಬೇಡ ಅಂತಾ ಹೇಳೋದಿಲ್ಲ, ಹಾಕು, ನಿನಗೆ ಅದು ಹೊಸತು’ ಎಂದು ತಿರುಗೇಟು ನೀಡಿದರು.</p>.<p>ಆಗ ಮುನಿರತ್ನ, ‘ನೀವು ನನಗಿಂತಲೂ ಆರ್ಎಸ್ಎಸ್ಗೆ ಹಳಬರು ಸರ್. ‘ನಮಸ್ತೆ ಸದಾ ವತ್ಸಲೇ’ ಗೀತೆಯನ್ನು ಹಾಡಿದ್ದೀರಿ. ಆರ್ಎಸ್ಎಸ್ ಗೀತೆಯನ್ನು ಫಸ್ಟ್ ನೀವು ಕಲಿತವರು, ನೀವು ಸೀನಿಯರ್’ ಎಂದು ಚಾಟಿ ಬೀಸಿದರು.</p>.<p>ನಗುತ್ತಲೇ ಉತ್ತರಿಸಿದ ಶಿವಕುಮಾರ್, ‘ನನ್ನ ಗರಡಿಯಲ್ಲಿ ನೀನು ಕಲಿತವನು. ನಿನ್ನ ಕ್ಷೇತ್ರದ ಬಗ್ಗೆ ಚರ್ಚಿಸಲು ಗೌರವದಿಂದ ಕರೆದಿದ್ದೆವು’ ಎಂದು ಚರ್ಚೆಗೆ ಅಂತ್ಯ ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>