ಮಾದಾವರವರೆಗೆ ಮೆಟ್ರೊ ಆರಂಭಗೊಂಡರೆ ತುಮಕೂರು ರಸ್ತೆಯಲ್ಲಿ ಉಂಟಾಗುತ್ತಿರುವ ವಾಹನದಟ್ಟಣೆ ಕಡಿಮೆಗೊಳ್ಳಲಿದೆ. ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುತ್ತಿರುವ ಕಾರ್ಮಿಕರು ಉದ್ಯೋಗಿಗಳು ನಾಗಸಂದ್ರದವರೆಗೆ ಬೇರೆ ಬೇರೆ ವಾಹನಗಳಲ್ಲಿ ಬಂದು ಅಲ್ಲಿಂದ ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ಮಾದಾವರದವರೆಗೆ ಮೆಟ್ರೊ ಸಂಚರಿಸಿದರೆ ಜನರು ಅಲ್ಲೇ ವಾಹನ ನಿಲ್ಲಿಸಿ ಮೆಟ್ರೊ ಹತ್ತಲಿದ್ದಾರೆ. ಕೂಡಲೇ ಮೆಟ್ರೊ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮೆಟ್ರೊ ಪ್ರಯಾಣಿಕ ಎಚ್. ರಮೇಶ್ ಆಗ್ರಹಿಸಿದರು.