ಸಮೀಪದ ಶ್ಯಾಮಭಟ್ಟರ ಪಾಳ್ಯದಿಂದ ಬಂದಿದ್ದ ರೈತ ಬಸವರಾಜಯ್ಶ, ‘ಈ ಬಾರಿ ಮಳೆ ಕೊರತೆ ಇರುವುದರಿಂದ ಹೊಸಕೋಟೆ ಮಂಡ್ಯ ಮೈಸೂರು ಜಿಲ್ಲೆಗಳಿಂದ ಖರೀದಿದಾರರು ಬಂದಿಲ್ಲ. ಹೀಗಾಗಿ, ಜಾನುವಾರುಗಳ ವ್ಯಾಪಾರ ಸ್ವಲ್ಪ ಕಡಿಮೆ ಇದೆ. ಪ್ರತಿ ವರ್ಷ ಭಾರಿ ದರವಿರುವ ರಾಸುಗಳ ವ್ಯಾಪಾರಕ್ಕೆ ಬರುತ್ತಿದ್ದವು. ಈ ವರ್ಷ ರಾಸುಗಳ ವ್ಯಾಪಾರವೇ ಕಡಿಮೆಯಾಗಿದೆ’ ಎಂದು ಬರಗಾಲದ ಪರಿಣಾಮವನ್ನು ವಿವರಿಸಿದರು.