ಕಂಬದಲ್ಲಿ ಬೇರಿಂಗ್ ಹಾಳಾಗಿದ್ದು, ಹೊಸ ಬೇರಿಂಗ್ ಅಳವಡಿಸಲಾಯಿತು. ನಿರ್ವಹಣಾ ಕಾಮಗಾರಿಗಾಗಿ ಬೆಳಿಗ್ಗೆ 7 ರಿಂದ 9ರವರೆಗೆ ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಿಂದ ನಾಗಸಂದ್ರ ನಿಲ್ದಾಣವರೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ತಿಳಿಸಿತ್ತು. ಆದರೆ, ನಿರ್ವಹಣಾ ಕಾರ್ಯ ತಡವಾಗಿದ್ದರಿಂದ 9 ಗಂಟೆ ಬದಲು 10 ಗಂಟೆಗೆ ರೈಲು ಸಂಚಾರ ಮರು ಆರಂಭವಾಯಿತು.