<p><strong>ಬೆಂಗಳೂರು:</strong> ಹೊಸ ವರ್ಷದ ಪ್ರಯುಕ್ತ ಬುಧವಾರ ರಾತ್ರಿ 11.30ರ ನಂತರ ಮೆಟ್ರೊದಲ್ಲಿ 40,774 ಪ್ರಯಾಣಿಕರು ಸಂಚರಿಸಿದ್ದು, ಹೆಚ್ಚುವರಿಯಾಗಿ ₹1 ಕೋಟಿ ವರಮಾನವನ್ನು ಬಿಎಂಆರ್ಸಿಎಲ್ ಗಳಿಸಿದೆ.</p>.<p>ಡಿಸೆಂಬರ್ 25ರವರೆಗೆ ಸರಾಸರಿ 9.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಕ್ರಿಸ್ಮಸ್ ರಜೆಯಿಂದಾಗಿ ಪ್ರಯಾಣಿಕರ ಪ್ರಮಾಣ ಕಡಿಮೆಯಾಗಿತ್ತು. ಡಿ. 26 ಮತ್ತು 27ರಂದು ತಲಾ 7 ಲಕ್ಷ ಜನರು ಪ್ರಯಾಣಿಸಿದ್ದರೆ, ಡಿ.28ರಂದು 6 ಲಕ್ಷಕ್ಕಿಂತಲೂ ಕಡಿಮೆ ಜನರು ಮೆಟ್ರೊ ಬಳಸಿದ್ದರು. ಡಿ. 29 ಸೋಮವಾರ 8.51 ಲಕ್ಷ, ಮಂಗಳವಾರ 8 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಹೊಸ ವರ್ಷದ ಸಂಭ್ರಮದಿಂದಾಗಿ ಡಿ.31ರಂದು ಒಟ್ಟು 8.94 ಲಕ್ಷ ಪ್ರಯಾಣಿಸಿದ್ದರು.</p>.<p>ಪ್ರತಿದಿನ ₹2.8 ಕೋಟಿ ವರಮಾನ ಬರುತ್ತಿತ್ತು. ಹೆಚ್ಚುವರಿ ಅವಧಿಯ ಟಿಕೆಟ್ ಮೂಲಕ ₹40 ಲಕ್ಷ ಸೇರಿ ಒಟ್ಟು ಸುಮಾರು ₹ 1 ಕೋಟಿ ಅಧಿಕ ಆದಾಯ ಬಂದಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ರಜೆಗಳೆಲ್ಲ ಮುಗಿದು ಉದ್ಯೋಗಿಗಳು ಉದ್ಯೋಗಕ್ಕೆ ಮರಳುವುದರಿಂದ ಈ ವಾರದಿಂದ ಜನರ ಸಂಚಾರ ಹೆಚ್ಚಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಸ ವರ್ಷದ ಪ್ರಯುಕ್ತ ಬುಧವಾರ ರಾತ್ರಿ 11.30ರ ನಂತರ ಮೆಟ್ರೊದಲ್ಲಿ 40,774 ಪ್ರಯಾಣಿಕರು ಸಂಚರಿಸಿದ್ದು, ಹೆಚ್ಚುವರಿಯಾಗಿ ₹1 ಕೋಟಿ ವರಮಾನವನ್ನು ಬಿಎಂಆರ್ಸಿಎಲ್ ಗಳಿಸಿದೆ.</p>.<p>ಡಿಸೆಂಬರ್ 25ರವರೆಗೆ ಸರಾಸರಿ 9.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಕ್ರಿಸ್ಮಸ್ ರಜೆಯಿಂದಾಗಿ ಪ್ರಯಾಣಿಕರ ಪ್ರಮಾಣ ಕಡಿಮೆಯಾಗಿತ್ತು. ಡಿ. 26 ಮತ್ತು 27ರಂದು ತಲಾ 7 ಲಕ್ಷ ಜನರು ಪ್ರಯಾಣಿಸಿದ್ದರೆ, ಡಿ.28ರಂದು 6 ಲಕ್ಷಕ್ಕಿಂತಲೂ ಕಡಿಮೆ ಜನರು ಮೆಟ್ರೊ ಬಳಸಿದ್ದರು. ಡಿ. 29 ಸೋಮವಾರ 8.51 ಲಕ್ಷ, ಮಂಗಳವಾರ 8 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಹೊಸ ವರ್ಷದ ಸಂಭ್ರಮದಿಂದಾಗಿ ಡಿ.31ರಂದು ಒಟ್ಟು 8.94 ಲಕ್ಷ ಪ್ರಯಾಣಿಸಿದ್ದರು.</p>.<p>ಪ್ರತಿದಿನ ₹2.8 ಕೋಟಿ ವರಮಾನ ಬರುತ್ತಿತ್ತು. ಹೆಚ್ಚುವರಿ ಅವಧಿಯ ಟಿಕೆಟ್ ಮೂಲಕ ₹40 ಲಕ್ಷ ಸೇರಿ ಒಟ್ಟು ಸುಮಾರು ₹ 1 ಕೋಟಿ ಅಧಿಕ ಆದಾಯ ಬಂದಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ರಜೆಗಳೆಲ್ಲ ಮುಗಿದು ಉದ್ಯೋಗಿಗಳು ಉದ್ಯೋಗಕ್ಕೆ ಮರಳುವುದರಿಂದ ಈ ವಾರದಿಂದ ಜನರ ಸಂಚಾರ ಹೆಚ್ಚಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>