ವಿಷಯ ಪ್ರಸ್ತಾಪಿಸಿದ ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ, ‘ರಾಜ್ಯ ಸರ್ಕಾರದ ಅನುದಾನ ನೀಡದ ಯೋಜನೆ ಇದಾಗಿದ್ದು, ಪರ್ಯಾಯವಾಗಿ ಐದು ಕಡೆ ಟೌನ್ಶಿಪ್ ನಿರ್ಮಾಣಕ್ಕೆ ಸರ್ಕಾರ ಭೂಮಿ ನೀಡಬೇಕು ಎಂದು ತೀರ್ಮಾನವಾಗಿತ್ತು. ಯೋಜನೆಗೆ ಅನಗತ್ಯವಾಗಿ ಸುಮಾರು 9 ಸಾವಿರ ಎಕರೆ ಭೂಮಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಅಕ್ರಮದ ಬಗ್ಗೆ ಜಂಟಿ ಸದನ ಸಮಿತಿ ವರದಿ ನೀಡಿದ್ದರೂ ಶಿಫಾರಸುಗಳು ಜಾರಿ ಆಗಿಲ್ಲ’ ಎಂದರು.