ಯಾರೇ ಆಯ್ಕೆ ಮಾಡಿದರೂ ಆಯ್ಕೆಯಾದವರೆಲ್ಲರೂ ಅತ್ಯಂತ ಅರ್ಹರೇ ಆಗಿರುವುದಿಲ್ಲ. ಅದಕ್ಕೆ ಅತ್ಯಂತ ಖಚಿತವಾದ ಮಾನದಂಡಗಳೇನೂ ಇರುವುದಿಲ್ಲ. ಜೊತೆಗೆ ಪ್ರದೇಶವಾರು, ಜಾತಿವಾರು, ಲಿಂಗವಾರು ಪರಿಗಣನೆಗಳನ್ನೂ ಕಡೆಗಣಿಸಲಾಗುವುದಿಲ್ಲ. ಆದರೆ ಒಮ್ಮೆ ಆಯ್ಕೆಯಾಗಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾದ ಮೇಲೆ ಅದನ್ನು ಎಲ್ಲರೂ ಪುರಸ್ಕರಿಸಬೇಕು. ಕಾರಣ ಅವರೆಲ್ಲರೂ ಆಯಾ ಕ್ಷೇತ್ರದಲ್ಲಿ ತಮ್ಮ ಪಾಲಿನ ಕೊಡುಗೆ ನೀಡಿದವರೇ ಆಗಿರುತ್ತಾರೆ. ಅದನ್ನು ರದ್ದುಪಡಿಸುವುದೆಂದರೆ ಅವರನ್ನು ಮಾತ್ರ ಅವಮಾನಿಸಿದಂತಲ್ಲ; ಇಡೀ ಸಾಂಸ್ಕೃತಿಕ ಲೋಕವನ್ನೇ ಅವಮಾನಿಸಿದಂತೆ.