ಬಿಷಪ್ ಕಾಟನ್ ಬಾಲಕರ ಶಾಲೆಯ ಪ್ರಾಂಶುಪಾಲ ಡಾ.ಎಡ್ವಿನ್ ಕ್ರಿಸ್ಟೋಫರ್ ಮಾತನಾಡಿ, ‘ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಯುಗದಲ್ಲಿ ಶಿಕ್ಷಕರು ತಮ್ಮ ಭೋದನಾ ಕ್ರಮದಲ್ಲಿ ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಜ್ಞಾನವನ್ನು ಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು. ಲೊಯೊಲಾ ಕಾಲೇಜಿನ (ತಮಿಳುನಾಡು) ಉಪಪ್ರಾಂಶುಪಾಲ ಡಾ.ಅರುಲ್ ಪಾನ್, ಬಿಎಂಎಸ್ಐಟಿ ಪ್ರಾಂಶುಪಾಲರಾದ ಡಾ.ಅನ್ನಮ್ಮ ಅಬ್ರಹಾಂ, ಬಿಷಪ್ ಕಾಟನ್ ಕಾಲೇಜಿನ ಪ್ರಾಂಶುಪಾಲರಾದ ಸ್ಯಾಮ್ ಮಾರ್ಟಿನ್ ಕ್ರಿಸ್ಟೋಫರ್, ಪ್ರವೀಣ್ ಕುಮಾರ್ ಆರ್. ಇದ್ದರು.