ಮಂಗಳವಾರ, 3 ಮಾರ್ಚ್ 2026
×
ADVERTISEMENT

ಸರ್ಕಾರಿ ಕಾಲೇಜಿಗೆ ನಿವೇಶನ ನೀಡಲು ಬಿಡಿಎ ನಿರ್ಲಕ್ಷ್ಯ

Published : 2 ಅಕ್ಟೋಬರ್ 2024, 23:30 IST
Last Updated : 2 ಅಕ್ಟೋಬರ್ 2024, 23:30 IST
ADVERTISEMENT
ಫಾಲೋ ಮಾಡಿ
Comments
ಬಿಡಿಎ ಆಯುಕ್ತ ಎನ್. ಜಯರಾಂ
ಬಿಡಿಎ ಆಯುಕ್ತ ಎನ್. ಜಯರಾಂ
‘ಶಾಸಕ ಡಿಸಿಎಂ ಸೂಚನೆಗೂ ಮನ್ನಣೆ ಇಲ್ಲ’
‘ಕೆಂಗೇರಿ ಪ್ರಥಮ ದರ್ಜೆ ಕಾಲೇಜಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಸ್ಥಳೀಯ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಅವರು ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ಬಿಡಿಎ ಅಧಿಕಾರಿಗಳು ಮುಂದುವರಿಯುತ್ತಿಲ್ಲ’ ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಅಧ್ಯಕ್ಷ ಶಿವಕುಮಾರ್‌ ದೂರಿದರು. ‘ಖಾಸಗಿ ಒತ್ತಡಕ್ಕೆ ಮಣಿದಿರುವ ಬಿಡಿಎ ಅಧಿಕಾರಿಗಳು ಸರ್ಕಾರಿ ಕಾಲೇಜಿಗೆ ಮೀಸಲಿಟ್ಟಿರುವ ನಿವೇಶನವನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ. ಕಾಲೇಜಿಗೆ ನಿವೇಶನವನ್ನು ಶೀಘ್ರವಾಗಿ ಹಂಚಿಕೆ ಮಾಡದಿದ್ದರೆ ಹೋರಾಟ ಆರಂಭಿಸುತ್ತೇವೆ’ ಎಂದು ತಿಳಿಸಿದರು.
ಅಧ್ಯಕ್ಷರ ಸಮ್ಮತಿ ಬಾಕಿ: ಆಯುಕ್ತ
‘ಸರ್ಕಾರದ ಇಲಾಖೆಗಳಿಗೆ ಸಿಎ ನಿವೇಶನ ಹಂಚಿಕೆ ಮಾಡಬೇಕಾದರೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಆಯುಕ್ತರು ಮಂಜೂರು ಮಾಡಬೇಕು. ಕೆಂಗೇರಿ ಕಾಲೇಜಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಗೆ ನಾನು ಅನುಮೋದನೆ ನೀಡಿದ್ದೇನೆ. ಅಧ್ಯಕ್ಷರ ಸಮ್ಮತಿ ಬಾಕಿ ಇದ್ದು, ಕೆಲವೇ ದಿನಗಳಲ್ಲಿ ಅವರು ಒಪ್ಪಿಗೆ ನೀಡಬಹುದು’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಂ ಅವರು ‍‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT