<p><strong>ನೆಲಮಂಗಲ: </strong>ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದಲ್ಲಿನಒಕ್ಕಲಿಗ ಮುಖಂಡರು ಆಗ್ರಹಿಸಿದರು.</p>.<p>ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಶಿವಣ್ಣ, ‘ಅಭ್ಯರ್ಥಿ ವಿಚಾರದಲ್ಲಿ ಹಲವು ಗೊಂದಲ ಸೃಷ್ಟಿಯಾಗುವ ಮೊದಲೇ ವರಿಷ್ಠರು ನಿರ್ಧಾರ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಈ ಹಿಂದೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಮೂರು ಚುನಾವಣೆಯಲ್ಲಿ ಪರಾಭವಗೊಂಡಿ<br />ದ್ದೇವೆ. ಹಣಬಲವೊಂದನ್ನೇ ನೋಡಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವುದು ಮತ್ತು ಕೆಲವರು ಮುಖಂಡರನ್ನು ಓಲೈಸಿ ಗೊಂದಲ ಸೃಷ್ಟಿಸುತ್ತಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಕ್ಷೇತ್ರದ ಮುಖಂಡರ, ಸಮಸ್ಯೆಗಳ ಮತ್ತು ಗ್ರಾಮಗಳ ಪರಿಚಯ<br />ವಿರುವ ಅಭ್ಯರ್ಥಿಯನ್ನು ಆಯ್ಕೆಮಾ<br />ಡಬೇಕು’ ಎಂದರು. ‘ಮಾಜಿ ಸಚಿವ ಅಂಜನಾಮೂರ್ತಿ, ಕೋವಿಡ್ ಸಂದರ್ಭ<br />ದಲ್ಲಿ ಉಚಿತ ಆಂಬುಲೆನ್ಸ್ ಹಾಗೂ ಇತರೆ ಸೇವೆ ಒದಗಿಸಿದ ಸಪ್ತಗಿರಿ ಶಂಕರ<br />ನಾಯಕ್, ಎಚ್.ಪಿ. ಚೆಲುವರಾಜು, ವಕೀಲ ಕಾರೆಹಳ್ಳಿ ವೆಂಕಟರಾಮು, ಕೃಷ್ಣ<br />ಮೂರ್ತಿ, ಮುಮ್ಮೆನಹಳ್ಳಿ ಜಯರಾಮ್ ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ<br />ದರೆ ಗೆಲುವು ಸುಲಭ. ಹೊರಗಿನವರಿಗೆ ನೀಡಿದರೆ ಕೆಲಸ ಮಾಡಲು ಉತ್ಸಾಹ ಇಲ್ಲದಂತಾಗುತ್ತದೆ’ ಎಂದರು.</p>.<p>‘ಒಕ್ಕಲಿಗರು ಕೇವಲ ಜೆಡಿಎಸ್ನಲ್ಲಿದ್ದಾರೆ. ಕಾಂಗ್ರೆಸ್ನಲ್ಲಿ ಬೆರಳಣಿಕೆ ಮಂದಿ ಇದ್ದಾರೆ ಎನ್ನುವ ತಪ್ಪು ಭಾವನೆ ಜನರಲ್ಲಿದೆ. ಒಕ್ಕಲಿಗರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ: </strong>ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದಲ್ಲಿನಒಕ್ಕಲಿಗ ಮುಖಂಡರು ಆಗ್ರಹಿಸಿದರು.</p>.<p>ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಶಿವಣ್ಣ, ‘ಅಭ್ಯರ್ಥಿ ವಿಚಾರದಲ್ಲಿ ಹಲವು ಗೊಂದಲ ಸೃಷ್ಟಿಯಾಗುವ ಮೊದಲೇ ವರಿಷ್ಠರು ನಿರ್ಧಾರ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಈ ಹಿಂದೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಮೂರು ಚುನಾವಣೆಯಲ್ಲಿ ಪರಾಭವಗೊಂಡಿ<br />ದ್ದೇವೆ. ಹಣಬಲವೊಂದನ್ನೇ ನೋಡಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವುದು ಮತ್ತು ಕೆಲವರು ಮುಖಂಡರನ್ನು ಓಲೈಸಿ ಗೊಂದಲ ಸೃಷ್ಟಿಸುತ್ತಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಕ್ಷೇತ್ರದ ಮುಖಂಡರ, ಸಮಸ್ಯೆಗಳ ಮತ್ತು ಗ್ರಾಮಗಳ ಪರಿಚಯ<br />ವಿರುವ ಅಭ್ಯರ್ಥಿಯನ್ನು ಆಯ್ಕೆಮಾ<br />ಡಬೇಕು’ ಎಂದರು. ‘ಮಾಜಿ ಸಚಿವ ಅಂಜನಾಮೂರ್ತಿ, ಕೋವಿಡ್ ಸಂದರ್ಭ<br />ದಲ್ಲಿ ಉಚಿತ ಆಂಬುಲೆನ್ಸ್ ಹಾಗೂ ಇತರೆ ಸೇವೆ ಒದಗಿಸಿದ ಸಪ್ತಗಿರಿ ಶಂಕರ<br />ನಾಯಕ್, ಎಚ್.ಪಿ. ಚೆಲುವರಾಜು, ವಕೀಲ ಕಾರೆಹಳ್ಳಿ ವೆಂಕಟರಾಮು, ಕೃಷ್ಣ<br />ಮೂರ್ತಿ, ಮುಮ್ಮೆನಹಳ್ಳಿ ಜಯರಾಮ್ ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ<br />ದರೆ ಗೆಲುವು ಸುಲಭ. ಹೊರಗಿನವರಿಗೆ ನೀಡಿದರೆ ಕೆಲಸ ಮಾಡಲು ಉತ್ಸಾಹ ಇಲ್ಲದಂತಾಗುತ್ತದೆ’ ಎಂದರು.</p>.<p>‘ಒಕ್ಕಲಿಗರು ಕೇವಲ ಜೆಡಿಎಸ್ನಲ್ಲಿದ್ದಾರೆ. ಕಾಂಗ್ರೆಸ್ನಲ್ಲಿ ಬೆರಳಣಿಕೆ ಮಂದಿ ಇದ್ದಾರೆ ಎನ್ನುವ ತಪ್ಪು ಭಾವನೆ ಜನರಲ್ಲಿದೆ. ಒಕ್ಕಲಿಗರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>