‘ಈ ಹಿಂದೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಮೂರು ಚುನಾವಣೆಯಲ್ಲಿ ಪರಾಭವಗೊಂಡಿ
ದ್ದೇವೆ. ಹಣಬಲವೊಂದನ್ನೇ ನೋಡಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವುದು ಮತ್ತು ಕೆಲವರು ಮುಖಂಡರನ್ನು ಓಲೈಸಿ ಗೊಂದಲ ಸೃಷ್ಟಿಸುತ್ತಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಕ್ಷೇತ್ರದ ಮುಖಂಡರ, ಸಮಸ್ಯೆಗಳ ಮತ್ತು ಗ್ರಾಮಗಳ ಪರಿಚಯ
ವಿರುವ ಅಭ್ಯರ್ಥಿಯನ್ನು ಆಯ್ಕೆಮಾ
ಡಬೇಕು’ ಎಂದರು. ‘ಮಾಜಿ ಸಚಿವ ಅಂಜನಾಮೂರ್ತಿ, ಕೋವಿಡ್ ಸಂದರ್ಭ
ದಲ್ಲಿ ಉಚಿತ ಆಂಬುಲೆನ್ಸ್ ಹಾಗೂ ಇತರೆ ಸೇವೆ ಒದಗಿಸಿದ ಸಪ್ತಗಿರಿ ಶಂಕರ
ನಾಯಕ್, ಎಚ್.ಪಿ. ಚೆಲುವರಾಜು, ವಕೀಲ ಕಾರೆಹಳ್ಳಿ ವೆಂಕಟರಾಮು, ಕೃಷ್ಣ
ಮೂರ್ತಿ, ಮುಮ್ಮೆನಹಳ್ಳಿ ಜಯರಾಮ್ ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ
ದರೆ ಗೆಲುವು ಸುಲಭ. ಹೊರಗಿನವರಿಗೆ ನೀಡಿದರೆ ಕೆಲಸ ಮಾಡಲು ಉತ್ಸಾಹ ಇಲ್ಲದಂತಾಗುತ್ತದೆ’ ಎಂದರು.