ಬಸ್ ನಿಲ್ದಾಣದ ಬಳಿಭಾನುವಾರ ಸಂಜೆ ಊಟ ಮಾಡುತ್ತಿದ್ದ ರೇವಂತ್ನೊಂದಿಗೆ ಕುಡಿತದ ನಶೆಯಲ್ಲಿದ್ದ ಅರುಣ್ ಮತ್ತು ಧರಣೇಶ್ ಜಗಳವಾಡಿಕೊಂಡಿದ್ದಾರೆ. ಕೋಪಗೊಂಡ ರೇವಂತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ರಾತ್ರಿ ರೇವಂತ್ಗೆ ಕರೆ ಮಾಡಿದ ಅರುಣ್ ಮಾತನಾಡಬೇಕು ಎಂದು ಟಿ.ಬಿ.ಬಸ್ನಿಲ್ದಾಣದ ಬಳಿ ಕರೆಸಿಕೊಂಡು ಸಂಜೆಯ ಜಗಳದ ವಿಷಯವಾಗಿ ಕೆದಕಿದ್ದಾರೆ.