<p><strong>ಬೆಂಗಳೂರು:</strong> ಇಲ್ಲಿನ ನೇತ್ರಧಾಮ ಆಸ್ಪತ್ರೆಯು ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ‘ಝೀಮರ್ ಝಡ್8 ನಿಯೊ’ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆ ಹೊಂದಿರುವ ಸಂಚಾರಿ ಘಟಕವನ್ನು ಪರಿಚಯಿಸಿದೆ. </p>.<p>ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಘಟಕಕ್ಕೆ ಚಾಲನೆ ನೀಡಲಾಯಿತು. ಪ್ರಾಯೋಗಿಕ ಹಂತದಲ್ಲಿ ಈ ವ್ಯವಸ್ಥೆಯಡಿ 900ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ‘ಝೀಮರ್ ಝಡ್8 ನಿಯೊ’ ತಂತ್ರಜ್ಞಾನ ಆಧಾರಿತ ಫೆಮ್ಟೋಸೆಕೆಂಡ್ ಲೇಸರ್ ನೆರವಿನಿಂದ ಕಣ್ಣಿನ ಪೊರೆ ಸೇರಿ ವಿವಿಧ ಶಸ್ತ್ರಚಿಕಿತ್ಸೆ ನಡೆಸಬಹುದು. ಇದು ಸುರಕ್ಷಿತ ವಿಧಾನ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. </p>.<p>ನೇತ್ರಧಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಸುಪ್ರಿಯಾ ಶ್ರೀಗಣೇಶ್, ‘ಸುರಕ್ಷಿತ ಮತ್ತು ನಿಖರ ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನ ಸಹಕಾರಿ. ಬ್ಲೇಡ್ ರಹಿತ ಈ ಶಸ್ತ್ರಚಿಕಿತ್ಸೆಯು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದಲ್ಲಿ ನೋವು ರಹಿತವಾಗಿರುತ್ತದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯತೆಯೂ ಇರುವುದಿಲ್ಲ’ ಎಂದು ಹೇಳಿದರು.</p>.<p>ನೇತ್ರಧಾಮದ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಗಣೇಶ್, ‘ಹೊಸ ತಂತ್ರಜ್ಞಾನದ ಯಂತ್ರವು ಬೆಂಗಳೂರಿನ ಮೂರು, ಮೈಸೂರಿನ ಒಂದು ಸೇರಿ ಸಂಸ್ಥೆಯ ಐದು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಲ್ಲಿನ ನೇತ್ರಧಾಮ ಆಸ್ಪತ್ರೆಯು ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ‘ಝೀಮರ್ ಝಡ್8 ನಿಯೊ’ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆ ಹೊಂದಿರುವ ಸಂಚಾರಿ ಘಟಕವನ್ನು ಪರಿಚಯಿಸಿದೆ. </p>.<p>ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಘಟಕಕ್ಕೆ ಚಾಲನೆ ನೀಡಲಾಯಿತು. ಪ್ರಾಯೋಗಿಕ ಹಂತದಲ್ಲಿ ಈ ವ್ಯವಸ್ಥೆಯಡಿ 900ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ‘ಝೀಮರ್ ಝಡ್8 ನಿಯೊ’ ತಂತ್ರಜ್ಞಾನ ಆಧಾರಿತ ಫೆಮ್ಟೋಸೆಕೆಂಡ್ ಲೇಸರ್ ನೆರವಿನಿಂದ ಕಣ್ಣಿನ ಪೊರೆ ಸೇರಿ ವಿವಿಧ ಶಸ್ತ್ರಚಿಕಿತ್ಸೆ ನಡೆಸಬಹುದು. ಇದು ಸುರಕ್ಷಿತ ವಿಧಾನ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. </p>.<p>ನೇತ್ರಧಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಸುಪ್ರಿಯಾ ಶ್ರೀಗಣೇಶ್, ‘ಸುರಕ್ಷಿತ ಮತ್ತು ನಿಖರ ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನ ಸಹಕಾರಿ. ಬ್ಲೇಡ್ ರಹಿತ ಈ ಶಸ್ತ್ರಚಿಕಿತ್ಸೆಯು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದಲ್ಲಿ ನೋವು ರಹಿತವಾಗಿರುತ್ತದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯತೆಯೂ ಇರುವುದಿಲ್ಲ’ ಎಂದು ಹೇಳಿದರು.</p>.<p>ನೇತ್ರಧಾಮದ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಗಣೇಶ್, ‘ಹೊಸ ತಂತ್ರಜ್ಞಾನದ ಯಂತ್ರವು ಬೆಂಗಳೂರಿನ ಮೂರು, ಮೈಸೂರಿನ ಒಂದು ಸೇರಿ ಸಂಸ್ಥೆಯ ಐದು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>